ಬೆಂಗಳೂರು:ಕಳೆದ ಕಲವು ದಿನಗಳಿಂದ ರ್‍ಯಾಪಿಡೋ ಹಾಗೂ ಆಟೋ ಚಾಲಕರ ನಡುವಿನ ಗುದ್ದಾಟ ಜೋರಾಗುತ್ತಿದ್ದು ಈ ಮಧ್ಯೆ ಅದು ಗಿರಾಕಿಗಳ ಮೇಲೂ ಹಲ್ಲೆ ಶುರುವಾಗಿದೆ.
ಇದೀಗ ಪ್ರಕರಣ ಒಂದರಲ್ಲಿ ಆಟೋ ಚಾಲಕ ಒಬ್ಬ ಟೆಕ್ಕಿ ಒಬ್ಬರ ಮೇಲೆ ಹಲ್ಲೆ ನಡೆಸಿ ಎಸ್ಕೇಪ್​ ಆಗಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಎಚ್​ಎಸ್​ಆರ್​ ಲೇಔಟ್​ ಸೆಕ್ಟರ್​-1ರಲ್ಲಿ ನಡೆದಿದೆ.
ಘಟನೆಯೂ ಬೆಳಗಿನ ಜಾವ 3:00 ಘಂಟೆಗೆ ನಡೆದಿದ್ದು ಅಜರ್​​ ಖಾನ್​ ಎಂಬುವವರು ತಮ್ಮ ಕೆಲಸ ಮುಗಿಸಿ ಮನೆಗೆ ವಾಪಸ್​ ಆಗುತ್ತಿದ್ದ ವೇಳೆ ಆಟೋವನ್ನು ಕರೆದಿದ್ದಾರೆ. ಈ ವೇಳೆ ಚಾಲಕ ದುಬಾರಿ ಮೊತ್ತ ಕೇಳಿದ ಎಂಬ ಕಾರಣಕ್ಕೆ ನಿರಾಕರಿಸಿದ್ದಾರೆ ಮತ್ತು ರ್‍ಯಾಪಿಡೋ ಬೈಕ್​ ಬುಕ್​ ಮಾಡುವುದಾಗಿ ಹೇಳಿದ್ದಾರೆ.

Last night 3:00 Am I was taking ride from@rapidobikeappAnd that drunk driver hit me his auto in Hsr layout sector 1 banglore. I Had company laptop and gadgets with me.He Hit me with his Auto and run from there@CPBlr@BlrCityPolicepic.twitter.com/sNPNaq4RlP
ಕುಡಿದ ಮತ್ತಿನಲ್ಲಿದ್ದ ಆರೋಪಿ ಆಟೋ ಚಾಲಕ ಇದನ್ನು ಕೇಳಿ ಕುಪಿತಗೊಂಡು ಏಕಾಏಕಿ ವ್ಯಕ್ತಿಯ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದ ಟೆಕ್ಕಿ ಮೇಲೇಳುವಷ್ಟರಲ್ಲೇ ಆಟೋ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ,
ಘಟನೆಯ ದೈಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಎಚ್​ಎಸ್​ಆರ್​ ಲೇಔಟ್​ ಠಾಣೆ ಪೊಲೀಸರು ಆರೋಪಿ ಆಟೋ ಚಾಲಕನಿಗೆ ಶೋಧ ಕಾರ್ಯ ನಡೆಸುತ್ತಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
