ರಾಜಮಂಡ್ರಿ: ಮದುವೆ ಸಮಾರಂಭ ಮುಗಿಸಿ ಮರಳುತ್ತಿದ್ದ, ಹದಿನಾರು ಮಂದಿ ಪ್ರಯಾಣಿಕರಿದ್ದ ಗೂಡ್ಸ್ ಆಟೋ ಬೆಟ್ಟದ ಮೇಲಿಂದ ಉರುಳಿದೆ. ಪರಿಣಾಮ ಅದರಲ್ಲಿದ್ದವರ ಪೈಕಿ ಏಳು ಜನರು ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಅಪಘಾತ ಶುಕ್ರವಾರ ತಡರಾತ್ರಿ 2.30ರ ಸುಮಾರಿಗೆ ಸಂಭವಿಸಿದೆ.
ಆಂಧ್ರಪ್ರದೇಶದ ಈಸ್ಟ್​ ಗೋದಾವರಿ ಜಿಲ್ಲೆಯ ತನಿಕೊಂಡ ಗ್ರಾಮದ ದೇವಸ್ಥಾನವೊಂದರ ಬಳಿಯ ಬೆಟ್ಟದ ತಪ್ಪಲಿನಿಂದ ಈ ಗೂಡ್ಸ್ ಆಟೋ ಉರುಳಿದೆ. ವಾಹನದಲ್ಲಿ 16 ಮಂದಿ ಇದ್ದು, 7 ಜನರು ಮೃತಪಟ್ಟಿದ್ದಾರೆ ಎಂದು ರಾಜಮಂಡ್ರಿ ಎಸ್​ಪಿ ಶೇಮುಷಿ ಬಾಜ್​ಪೇಯ್​ ತಿಳಿಸಿದ್ದಾರೆ.
ಆಟೋ ಚಾಲಕ ಪಚಿಕುರಿ ನರಸಿಂಹ ದೋರಾ ಎಂಬಾತನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಆತನೂ ಮೃತಪಟ್ಟಿದ್ದಾನೆ. ಬೆಟ್ಟದ ಮೇಲಿನ ದೇವಸ್ಥಾನಕ್ಕೆ ತೆರಳುವ ಮೆಟ್ಟಿಲುಗಳ ಮೇಲೆ ರಿಕ್ಷಾ ಉರುಳಿದ್ದು, ಅದು ವಿಜಯವಾಡದ ಇಂದ್ರಕೀಳಾದ್ರಿಯಷ್ಟು ಎತ್ತರದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 1 =
Remember me
