Bathing on Kartik Purnima in the holy lake tonight, Tirtharaja Kapalmochan
ಯಮುನಾನಗರ.(ಹರಿಯಾಣ) ತ್ರೇತಾಯುಗ, ದ್ವಾಪರ ಯುಗ ಮತ್ತು ಕಲಿಯುಗದಲ್ಲಿ ಭಕ್ತರು ಅಚಲ ಶ್ರದ್ಧಾ, ಭಕ್ತಿಯ ಕೇಂದ್ರವಾಗಿರುವ ಮೋಕ್ಷಪ್ರದಾಯಿನಿ ತೀರ್ಥರಾಜ ಕಪಾಲ್ ಮೋಚನ್​ದ ಮೂರು ಸರೋವರಗಳಲ್ಲಿ ಕಾರ್ತಿಕ ಪೌರ್ಣಮಿಗೆ ಪುಣ್ಯಸ್ನಾನ ನಡೆಯುತ್ತದೆ. ಹಿಂದು- ಸಿಕ್ಕರು ಭೇದವಿಲ್ಲದೆ ಒಟ್ಟಾಗಿ ಭಕ್ತಿಯಿಂದ ಭಾಗವಹಿಸುವುದು ಇಲ್ಲಿನ ಭಾನುವಾರ ರಾತ್ರಿ 12 ಗಂಟೆಗೆ ಕಾರ್ತಿಕ ಸ್ನಾನ ಆರಂಭವಾಗಲಿದೆ. ಈ ವೇಳೆ ಆರು ಲಕ್ಷಕ್ಕೂ ಹೆಚ್ಚು ಭಕ್ತರು ಸ್ನಾನ ಮಾಡಲಿದ್ದಾರೆ.
ಇದನ್ನೂ ಓದಿ:ಜಲ್ಲಿಕಟ್ಟು, ಕಂಬಳ ಪ್ರೋತ್ಸಾಹಿಸಿ ಸನಾತನ ಧರ್ಮ ಉಳಿಸಿ: ಸಂಸದ ತೇಜಸ್ವಿ ಸೂರ್ಯಕಾರ್ತಿಕ ಪೂರ್ಣಿಮೆಯ ಮುನ್ನಾದಿನ ಬಿಲಾಸ್‌ಪುರದಲ್ಲಿ ಪ್ರಸಿದ್ಧ ಐತಿಹಾಸಿಕ ಮತ್ತು ಧಾರ್ಮಿಕ ಕಪಾಲ್ ಮೋಚನ್ ಮೇಳ ನಡೆಯಲಿದೆ. ಸುಮಾರು 10 ಲಕ್ಷ ಯಾತ್ರಾರ್ಥಿಗಳು ಅಂದು ಧಾರ್ಮಿಕ ಸರೋವರಗಳಲ್ಲಿ ಪವಿತ್ರ ಸ್ನಾನ ಮಾಡುತ್ತಾರೆ.ಕಪಾಲ್ ಮೋಚನ್ ಅವರನ್ನು ಗೋಪಾಲ್ ಮೋಚನ್ ಎಂದೂ ಕರೆಯುತ್ತಾರೆ. ಇದು ಜಗಧಾರಿ ಪಟ್ಟಣದ ಈಶಾನ್ಯಕ್ಕೆ ಸುಮಾರು 17-ಕಿಮೀ ದೂರದಲ್ಲಿದೆ. ಇದು ಹಿಂದು ಮತ್ತು ಸಿಖ್ಖರ ಪುರಾತನ ಯಾತ್ರಾ ಸ್ಥಳವಾಗಿದೆ. ಮಹಾಭಾರತ ಮತ್ತು ಪುರಾಣಗಳಲ್ಲಿ ಹಲವಾರು ಸ್ಥಳಗಳಲ್ಲಿ ಇದರ ಹೆಸರು ಕಾಣಿಸಿಕೊಳ್ಳುವುದರಿಂದ ಪ್ರಾಮುಖ್ಯತೆ ಪಡೆದುಕೊಂಡಿದೆ.
ಕಪಾಲ್ ಮೋಚನ್ ಮೂರು ಯುಗಗಳಲ್ಲೂ ಪ್ರಸಿದ್ಧ ಎಂದು ವಿವರಿಸಲಾಗಿದೆ. ಇದು ಎಲ್ಲಾ ಪಾಪಗಳ ನಾಶಕ. ಭಕ್ತರು ಪವಿತ್ರ ಸರೋವರಗಳಲ್ಲಿ ಸ್ನಾನ ಮಾಡುವ ಮೂಲಕ ಪಾಪಗಳನ್ನು ತೊಡೆದುಕೊಳ್ಳುತ್ತಾರೆ ಎಂಬ ನಂಬಿಕೆಯಿದೆ. ದ್ರೌಪದಿ ದೇವಿ ಮತ್ತು ಪಂಚ ಪಾಂಡವರು ಕೂಡ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಿದ್ದರು ಎಂಬ ಪ್ರತೀತಿಯಿದೆ.
ಗುರು ಗೋವಿಂದ್ ಸಿಂಗ್ ಪೂಜೆ:ಕಪಾಲ್ ಮೋಚನ್ ಸರಸ್ವತಿ ನದಿ ದಡದ ಬಳಿ ಇರುವ ನೈಸರ್ಗಿಕ ಸರೋವರಗಳು. ಕ್ರಿ.ಶ. 1679 ರಲ್ಲಿ ಭಂಗಾನಿ ಯುದ್ಧದ ನಂತರ ಗುರು ಗೋವಿಂದ್ ಸಿಂಗ್ ಅವರು ಪೌಂಟಾ ಸಾಹಿಬ್‌ಗೆ ಹೋಗುವ ಮಾರ್ಗದಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿದ್ದರು. ಅವರು ಇಲ್ಲಿ 52 ದಿನ ಇದ್ದು ಪೂಜೆ ಸಲ್ಲಿಸಿದರು. ಅವರ ಸೈನಿಕರು ತಮ್ಮ ಶಸ್ತ್ರಾಸ್ತ್ರಗಳನ್ನು ಸ್ವಚ್ಛಗೊಳಿಸಿ, ಮುಂದೆ ಯುದ್ಧಕ್ಕೆ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಅವರು ಕಪಾಲ್ ಮೋಚನ್‌ನ ಮುಖ್ಯ ಅರ್ಚಕರಿಗೆ ಸ್ಮರಣಿಕೆಯಾಗಿ ತಮ್ಮ ಸಹಿಯನ್ನು ಹೊಂದಿರುವ ತಾಮ್ರದ ತಟ್ಟೆಯನ್ನು ನೀಡಿದ್ದರು.
ದೀಪಗಳ ಹಬ್ಬ:ಗುರು ಗೋವಿಂದ್ ಸಿಂಗ್ ಮಹಾರಾಜ್ ಅವರು ಕಪಾಲ ಮೋಚನದಲ್ಲಿ ಗುರುನಾನಕ್ ದೇವ್ ಸ್ಮರಣೆಯಲ್ಲಿ ದೀಪಗಳ ಹಬ್ಬವನ್ನು ಪ್ರಾರಂಭಿಸಿದ್ದರು. ಮೊದಲ ಮತ್ತು ಹತ್ತನೆಯ ಪಟಾಶಾಹಿ ಗುರುದ್ವಾರ ಸಾಹಿಬ್‌ಗಳು ಇಲ್ಲಿವೆ. ದೀಪಗಳ ಹಬ್ಬಕ್ಕಾಗಿ ಗುರುದ್ವಾರಗಳನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ, ಇದೇ ಸಂದರ್ಭ ಏಳು ಕಿ.ಮೀ.ವರೆಗೆ ಜಾತ್ರೆ ಸೇರುತ್ತದೆ. 20 ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಲಾಗುತ್ತದೆ. ಭಕ್ತರು ರಾತ್ರಿ ತೀರ್ಥಸ್ನಾನ ಮುಗಿಸಿ ಮನೆಗಳಿಗೆ ಮರಳಲು ಆರಂಭಿಸುತ್ತಾರೆ.
ಸೋಮವಾರ ಜಾತ್ರೆ:ಇನ್ನು ನ.27 ರಂದು ಸುತ್ತಮುತ್ತಲಿನ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ. ಶ್ರೀಕಪಾಲಮೋಚನ ಮೇಳವು ನಾಲ್ಕು ವಲಯಗಳಲ್ಲಿ ನಡೆಯುತ್ತದೆ. ಭದ್ರತೆಗಾಗಿ 2600 ಪೊಲೀಸರನ್ನು ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ.
ಕರ್ನಾಟಕದ ಎರಡು ಐತಿಹಾಸಿ ತಾಣಗಳು ವಿಶ್ವ ಪರಂಪರೆ ತಾಣಗಳ ತಾತ್ಕಾಲಿಕ ಪಟ್ಟಿಗೆ ಸೇರಲು ಸಜ್ಜು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
