ನವದೆಹಲಿ:ಜಗತ್ತನ್ನೇ ಕಾಡುತ್ತಿರುವ ಮಾರಕ ಕರೊನಾ ವೈರಸ್​ ನಿಗ್ರಹಕ್ಕೆ ಲಸಿಕೆ ಸಂಶೋಧನೆಯಲ್ಲಿ ತೊಡಗಿ ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ಕೊಂಡೊಯ್ದಿರುವ ಹೈದರಾಬಾದ್​ನ ಭಾರತ್​ ಬಯೋಟೆಕ್​ ಇಂಟರ್​ನ್ಯಾಷನಲ್​ ಕಂಪನಿ ಔಷಧ ರಂಗದಲ್ಲಿ ಹಲವು ಮೈಲಿಗಲ್ಲುಗಳನ್ನು ಸಾಧಿಸಿದೆ.
ಮುತ್ತಿನ ನಗರಿಯ ಜೆನೊಮ್​ ವ್ಯಾಲಿಯಲ್ಲಿ 1996ರಲ್ಲಿ ಆರಂಭವಾದ ಸಂಸ್ಥೆಯ ಸ್ಥಾಪಕರು ಡಾ. ಕೃಷ್ಣಾ ಎಂ. ಎಲ್ಲ ಹಾಗೂ ಸುಚಿತ್ರ ಎಲ್ಲ ದಂಪತಿ. ಅಮೆರಿಕದಲ್ಲಿ ಇದೇ ಕ್ಷೇತ್ರದಲ್ಲಿ ಸಂಶೋಧನೆ ಹಾಗೂ ಬೋಧಕ ಹುದ್ದೆಯಲ್ಲಿದ್ದರು. ಕಂಪನಿ ಸ್ಥಾಪಿಸಬೇಕೆಂಬ ಉದ್ದೇಶದಿಂದಲೇ ಭಾರತಕ್ಕೆ ಮರಳಿದರು.
ಇದನ್ನೂ ಓದಿ;ಗ್ರೀನ್​ ಟೀ, ಬ್ಲ್ಯಾಕ್ ಟೀ ಕುಡಿಯುವುದರಿಂದಲೂ ದೂರವಿಡಬಹುದು ಕರೊನಾ; ದೆಹಲಿ ಐಐಟಿ ತಂಡದಿಂದ ಸಂಶೋಧನೆ
ಪರಿಣತರ ತಂಡ ಕಟ್ಟಿಕೊಂಡು ಔಷಧ ಉತ್ಪಾದನೆಯಲ್ಲಿ ತೊಡಗಿದರು. ಭಾರತದ ಪ್ರಮುಖ ಬಯೋಟೆಕ್ನಾಲಜಿ ಕಂಪನಿಗಳಲ್ಲಿ ಒಂದೆನಿಸಿದೆ. ಪ್ರಸ್ತುತ ಈ ಕಂಪನಿ 160ಕ್ಕೂ ಅಧಿಕ ಪೇಟೆಂಟ್​​ಗಳಿವೆ. ರೋಟಾವೈರಸ್​, ಎಚ್​1ಎನ್​1, ಟೈಫಾಯ್ಡ್​, ಜಪಾನ್​ ಎನ್ಸೆಫೆಲಿಟಿಸ್​ ಮೊದಲಾದ ಕಾಯಿಲೆಗಳಿಗೆ ಯಶಸ್ವಿಯಾಗಿ ಲಸಿಕೆ ಸಂಶೋಧಿಸಿದ ಕೀರ್ತಿ ಭಾರತ್​ ಬಯೋಟೆಕ್​ನದ್ದಾಗಿದೆ.
ಇನ್ನು, ಜೈಕಾ ವೈರಸ್​ಗೆ ನಿಗ್ರಹಕ್ಕೆ ತಯಾರಿಸಿದ ಲಸಿಕೆಗೆ ಜಾಗತಿಕ ಪೇಟೆಂಟ್​ ಪಡೆದ ಹೆಗ್ಗಳಿಕೆ ಇದರದ್ದಾಗಿದೆ. ಇದರ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾನ್ಯತೆಯೂ ಲಭಿಸಿದೆ.
ಇದನ್ನೂ ಓದಿ;ಒಂದು ರೂ.ಗೂ ಕಡಿಮೆ ಬೆಲೆಯ ಮಾತ್ರೆ ಕರೊನಾ ಚಿಕಿತ್ಸೆಯಲ್ಲಿ ಅದ್ಭುತಗಳನ್ನೇ ಮಾಡುತ್ತಿದೆ….!
ಇದೀಗ, ಕರೊನಾ ಲಸಿಕೆ ಸಂಶೋಧಿಸಿದ್ದು, ಕ್ಲಿನಿಕಲ್​ ಟ್ರಯಲ್​ ಹಂತಕ್ಕೆ ತಲುಪಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೆಚ್ಚಿನ ಆಸಕ್ತಿ ವಹಿಸಿ ಕ್ಲಿನಿಕಲ್​ ಟ್ರಯಲ್​ ತ್ವರಿತವಾಗಿ ಪೂರ್ಣಗೊಳಿಸುವಲ್ಲಿ ಆಸ್ಥೆ ವಹಿಸಿದೆ.
ನೆಗಡಿ, ಕೆಮ್ಮಿನಷ್ಟೇ ಕಾಮನ್​ ಆಗುತ್ತೆ ಕರೊನಾ; ಎಲ್ಲರಿಗೂ ಔಷಧ ಬೇಕಾಗೋದು ಇಲ್ಲ; ಆಕ್ಸ್​ಫರ್ಡ್​ ವಿವಿ ತಜ್ಞರ ಅಭಿಮತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
