ತಿರುವನಂತಪುರಂ:ಭಾರತ್​ ಮಾತಾ ಕಿ ಜೈ ಘೋಷಣೆಯನ್ನು ದೇಶದಲ್ಲಿ ಮೊದಲು ಕೂಗಿದವರು ಮುಸ್ಲಿಮರು. ಹಾಗೆಂದ ಮಾತ್ರಕ್ಕೆ ಬಿಜೆಪಿ ಹಾಗೂ ಆರ್​ಎಸ್​ಎಸ್​ನವರು ಈ ಘೋಷಣೆಯನ್ನು ಕೂಗುವುದನ್ನು ಬಿಡುತ್ತಾರೆಯೇ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಪ್ರಶ್ನಿಸಿದ್ದಾರೆ.
ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಸಾರ್ವಜನಿಕ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ವಿಜಯನ್​ ದೇಶದ ಇತಿಹಾಸ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ಮುಸ್ಲಿಂ ದೊರೆಗಳು, ಸಾಂಸ್ಕೃತಿಕ ದಿಗ್ಗಜರು ಮತ್ತು ಅಧಿಕಾರಿಗಳು ಗಣನೀಯ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ನಾವು ಬಿಜೆಪಿ ಹಾಗೂ ಸಂಘ ಪರಿವಾರದ ಕಾರ್ಯಕ್ರಮಗಳಲ್ಲಿ ಜನರಿಂದ ಭಾರತ್ ಮಾತಾ ಕಿ ಜೈ ಎಂದು ಹೇಳಿಸುವುದನ್ನು ನೋಡಿದ್ದೇವೆ. ಅಷ್ಟಕ್ಕೂ ಈ ಘೋಷಣೆಯನ್ನು ಹುಟ್ಟಿ ಹಾಕಿದ್ದು ಯಾರೆಂದು ಇವರಿಗೆ ತಿಳಿದಿದೆಯೇ.
Kerala CM Pinarayi Vijayan in an event yesterday said, "In some programs, we hear some Sangh Parivar leaders asking people to chant 'Bharat Mata ki Jai'. Who coined the slogan Bharat Mata ki Jai? I don't know if the Sangh Parivar knows this. His name was Azimullah Khan. I don't…pic.twitter.com/VMUKGMGCll
ಇದನ್ನೂ ಓದಿ:ಮಮತಾ ಬ್ಯಾನರ್ಜಿ ಮೊದಲು ಅವರ ತಂದೆ ಯಾರೆಂದು ಕಂಡು ಹಿಡಿಯಲಿ: ಬಿಜೆಪಿ ಸಂಸದ
19ನೇ ಶತಮಾನದಲ್ಲಿ ಅಝಿಮುಲ್ಲಾ ಖಾನ್ ಎಂಬ ವ್ಯಕ್ತಿಯೂ ಭಾರತ್​ ಮಾತಾ ಕಿ ಜೈ ಎಂಬ ಘೋಷಣೆಯನ್ನು ಮೊದಲ ಬಾರಿಗೆ ಹುಟ್ಟು ಹಾಕಿದರು. ಈ ಘೋಷಣೆಯನ್ನು ಹುಟ್ಟು ಹಾಕಿದ್ದು ಮುಸ್ಲಿಂ ವ್ಯಕ್ತಿ ಎಂಬುದು ಬಿಜೆಪಿ ಹಾಗೂ ಸಂಘಪರಿವಾರದವರಿಗೆ ತಿಳಿದಿದೆಯೇ. ಈ ಘೋಷಣೆಯನ್ನು ಸೃಷ್ಟಿಸಿದ್ದು ಓರ್ವ ಮುಸ್ಲಿಂ ವ್ಯಕ್ತಿ ಎನ್ನುವುದು ಗೊತ್ತಾದ ಬಳಿಕ ಅವರು ಈ ಘೋಷಣೆ ಕೂಗುವುದನ್ನು ನಿಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇತ್ತ ಪಿಣರಾಯಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಸುದ್ಧಾಂಶು ತ್ರಿವೇದಿ, 1857 ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಅಝಿಮುಲ್ಲಾ ಖಾನ್ ಮದರ್-ಎ-ವತನ್, ಭಾರತ್ ಕಿ ಜೈ ಎಂಬ ಘೋಷಣೆಯನ್ನು ಹುಟ್ಟು ಹಾಕಿದರು. ಅದಕ್ಕೂ ಮೊದಲು 1873ರಲ್ಲಿ ಕಿರಣ್ ಚಂದ್ರ ಬಂಡೋಪಾಧ್ಯಾಯ ಅವರ ನಾಟಕದಲ್ಲಿ ಭಾರತ್​ ಮಾತಾ ಕಿ ಜೈ ಎಂಬ ಘೋಷವಾಕ್ಯವನ್ನು ಉಲ್ಲೇಖಿಸಲಾಗಿತ್ತು. ಆದರೆ, ನಾವು ನೋಡಿರುವ ಹಾಗೆ ಕೇಳಿರುವ ಪ್ರಕಾರ 1873 ರಲ್ಲಿ ಕಿರಣ್ ಚಂದ್ರ ಬಂಡೋಪಾಧ್ಯಾಯ ಅವರ ನಾಟಕದಲ್ಲಿ ಇದನ್ನು ಮೊದಲು ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ನಾಯಕ ಶುದ್ಧಾಂಶು ತ್ರಿವೇದಿ ಹೇಳಿದ್ದಾರೆ.
VIDEO | Here's what BJP MP Sudhanshu Trivedi (@SudhanshuTrived) said on Kerala CM Pinarayi Vijayan's remarks on slogans 'Bharat Mata Ki Jai' and 'Jai Hind'."There's a possibility of a political dictate which is being given from the top to carry on giving dastardly statements…pic.twitter.com/0EDYxxwDun
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
