ಪಟನಾ:ಕಳೆದ 8 ತಿಂಗಳಿಂದ ಕಾರ್ಯಾಚರಣೆ ನಡೆಸುತ್ತಿದ್ದ ನಕಲಿ ಪೊಲೀಸ್​ ಠಾಣೆಯನ್ನು ಪತ್ತೆಹಚ್ಚಿರುವ ಪ್ರಕರಣ ಬಿಹಾರದಲ್ಲಿ ಬೆಳಕಿಗೆ ಬಂದಿದೆ. ಬಂಕಾ ನಗರದ ಅನುರಾಗ್​ ಅತಿಥಿ ಗೃಹದಲ್ಲಿ ನಕಲಿ ಪೊಲೀಸ್​ ಠಾಣೆ ಕಾರ್ಯಾಚರಣೆಯಲ್ಲಿತ್ತು. ಸ್ಥಳೀಯ ಜನರಿಂದ ವಸೂಲಿ ಮಾಡುವುದೇ ಇದರ ಉದ್ದೇಶವಾಗಿತ್ತು. ಆದರೆ, 8 ತಿಂಗಳವರೆಗೂ ಯಾರೊಬ್ಬರಿಗೂ ಇದರ ಸುಳಿವೇ ಇಲ್ಲದಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.
ಇದೀಗ ಈ ವಿಚಾರ ತಿಳಿದು ಅಸಲಿ ಪೊಲೀಸರು ದಾಳಿ ಮಾಡಿದಾಗ ಪೊಲೀಸ್​ ಸಮವಸ್ತ್ರದಲ್ಲಿದ್ದ ಓರ್ವ ಮಹಿಳೆ ಮತ್ತು ಪುರುಷನನ್ನು ಬಂಧಿಸಲಾಗಿದೆ. ಮಹಿಳಾ ಪೊಲೀಸ್​ ಅಧಿಕಾರಿ ವೇಷದಲ್ಲಿದ್ದ ಆರೋಪಿಯನ್ನು ಅನಿತಾ ದೇವಿ ಎಂದು ಗುರುತಿಸಲಾಗಿದೆ. ಆಕೆಯ ಬಳಿಯಿದ್ದ ವೃತ್ತಿಪರ ಪಿಸ್ತೂಲ್​ ಸಹ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಉನ್ನತ ಅಧಿಕಾರಿಗಳು ತನಗೆ ತರಬೇತಿ ಸಾಧನವಾಗಿ ಇದನ್ನು ನೀಡಿದ್ದಾರೆ ಎಂದು ಹೇಳಿದ್ದಾಳೆ. ಅಲ್ಲದೆ, ಜಾರ್ಖಂಡ್‌ನ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ನಮ್ಮನ್ನು ನೇಮಿಸಿದ್ದಾರೆ ಎಂದು ಆಕೆ ಪ್ರತಿಪಾದಿಸಿದ್ದಾಳೆ.
ಫುಲ್ಲಿದುಮರ್​ನಲ್ಲಿರುವ ಲೋಧಿಯಾ ಗ್ರಾಮದ ನಿವಾಸಿ ರಮೇಶ್​ ಕುಮಾರ್​ ಮತ್ತು ಸುಲ್ತಾನ್​ ಗಂಜ್​ನ ಖಾನಾಪುರ್​ ನಿವಾಸಿ ಜೂಲಿ ಕುಮಾರಿ ನಕಲಿ ಪೊಲೀಸ್​ ಠಾಣೆಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಅವರನ್ನೂ ಸಹ ಬಂಧಿಸಲಾಗಿದೆ. ಭಗಲ್ಪುರ್​ ಜಿಲ್ಲೆಯ ಖಾನಾಪುರ್​ ನಿವಾಸಿ ಆಕಾಶ್​ ಕುಮಾರ್​ ಎಂಬಾತನನ್ನೂ ಅನೇಕ ದಾಖಲೆ ಮತ್ತು ಒಂದು ಪೊಲೀಸ್​ ಸಮವಸ್ತ್ರದೊಂದಿಗೆ ಬಂಧಿಸಲಾಗಿದೆ.
ಎಲ್ಲ ಆರೋಪಿಗಳು ತಮ್ಮ ಹಿರಿಯ ಅಧಿಕಾರಿ ಭೋಲಾ ಯಾದವ್ ಅವರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಪೊಲೀಸರು ವಿಚಾರಣೆಯ ನಂತರ ಒಪ್ಪಿಕೊಂಡಿದ್ದಾರೆ. ಆರೋಪಿ ಭೋಲಾ ಯಾದವ್ ಫುಲ್ಲಿದುಮರ್​ ನಿವಾಸಿ. ಈ ಕೆಲಸ ಮಾಡಲು ನಮಗೆ ಪ್ರತಿನಿತ್ಯ 500 ರೂಪಾಯಿ ಕೂಲಿ ನೀಡುತ್ತಿದ್ದರು ಎಂದು ಬಂಧಿತ ಆರೋಪಿಗಳು ಹೇಳಿದ್ದಾರೆ. ಹೆಚ್ಚುವರಿಯಾಗಿ ಅತಿಥಿಗೃಹದಲ್ಲಿದ್ದ ಬಾಣಸಿಗನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಮತ್ತು ಪ್ರಸ್ತುತ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.
ಎಸ್‌ಡಿಪಿಒ ಡಿಸಿ ಶ್ರೀವಾಸ್ತವ ಅವರ ಪ್ರಕಾರ, ನಕಲಿ ಪೊಲೀಸ್ ಗ್ಯಾಂಗ್ ಅನ್ನು ನಿರ್ವಹಿಸುತ್ತಿದ್ದ ಮುಖ್ಯ ಗ್ಯಾಂಗ್ ಸದಸ್ಯ ತಲೆಮರೆಸಿಕೊಂಡಿದ್ದು, ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)
ನಮಸ್ತೆ ಟ್ರಂಪ್​: ಡೊನಾಲ್ಡ್​ ಟ್ರಂಪ್​ ಭೇಟಿ ವೇಳೆ ಕೇಂದ್ರ ಸರ್ಕಾರ ಮಾಡಿದ ಖರ್ಚೆಷ್ಟು? RTI ಮಾಹಿತಿಯಲ್ಲಿ ಬಹಿರಂಗ

10ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವ ಮಹಿಳೆಯರಿಗೆ ಬಂಪರ್​ ಆಫರ್​ ಘೋಷಿಸಿದ ರಷ್ಯಾ ಅಧ್ಯಕ್ಷ: ಕಾರಣ ಹೀಗಿದೆ…

ಈತ ತಬ್ಬಿಕೊಂಡಿದ್ದಕ್ಕೆ ಮಹಿಳಾ ಸಹೋದ್ಯೋಗಿಯ ಪಕ್ಕೆಲುಬು ಮುರಿತ: ತಬ್ಬಿಕೊಂಡ ತಪ್ಪಿಗೆ 1.6 ಲಕ್ಷ ರೂ. ದಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + twenty =
Remember me
