ಬಿಹಾರ:ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಎರಡು ರೂಪಾಯಿ ಲಂಚ ಸ್ವೀಕರಿಸಿದ ಆರೋಪದ ಮೇಲೆ ಅಧಿಕಾರಿ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಭಾಗಲ್ಪುರದ ವಿಜಿಲೆನ್ಸ್ ನ್ಯಾಯಾಲಯವು 37 ವರ್ಷಗಳ ಕಾಲ ನಡೆದ ಪ್ರಕರಣವನ್ನು ಕೊನೆಗೊಳಿಸಿದೆ.
ಐವರು ಪೊಲೀಸರು ಎರಡು ರೂಪಾಯಿ ಲಂಚ ಪಡೆದ 37 ವರ್ಷಗಳ ಹಿಂದಿನ ಪ್ರಕರಣವನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ತೀರ್ಪನ್ನು ಇತ್ತೀಚೆಗೆ ಪ್ರಕಟಿಸಲಾಯಿತು.
ಈ ವಿಚಿತ್ರ ಪ್ರಕರಣದ ವಿವರ:1986ರ ಜೂನ್ 10ರಂದು ರಾತ್ರಿ ಭಾಗಲ್ಪುರದ ಚೆಕ್ ಪೋಸ್ಟ್​​​ನಲ್ಲಿ ಐವರು ಪೊಲೀಸರು ಕರ್ತವ್ಯದಲ್ಲಿದ್ದರು. ಆ ಮಾರ್ಗದಲ್ಲಿ ಹಾದು ಹೋಗುವ ವಾಹನಗಳ ತಪಾಸಣೆ ಮಾಡುತ್ತಿದ್ದರು. ಬೇಗುಸರಾಯ್ ಎಸ್ಪಿ ಅರವಿಂದ್ ವರ್ಮಾ ಅವರು, ಲಂಚ ಪಡೆಯುತ್ತಿರುವ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಮಾಸ್ಟರ್​​ ಪ್ಲ್ಯಾನ್​​ ಮಾಡಿದ್ದಾರೆ.
ಇದನ್ನೂ ಓದಿ:FRIENDSHIP DAY: ಫ್ರೆಂಡ್‌ಶಿಪ್ ಬ್ಯಾಂಡ್ ಖರೀದಿಸುತ್ತೀರಾ, ಯಾವ ಬಣ್ಣ ಏನನ್ನು ಸೂಚಿಸುತ್ತದೆ…?
ಚೆಕ್ ಪೋಸ್ಟ್ ಕಡೆಗೆ ಹೋಗುತ್ತಿದ್ದ ವಾಹನವನ್ನು ಎಸ್ಪಿ ತಡೆದರು. ಆ ವಾಹನದ ಚಾಲಕನಿಗೆ ಎರಡು ರೂಪಾಯಿ ನೋಟುಗಳನ್ನು ನೀಡಲಾಯಿತು. ನೋಟು ಕೊಡುವ ಮುನ್ನ ಎಸ್ಪಿ ಸಹಿ ಮಾಡಿ ಕೊಟ್ಟರು. ನಂತರ ಆ ಮಾರ್ಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸ್ ಸಿಬ್ಬಂದಿ ವಾಹನ ಚಾಲಕರನ್ನು ತಡೆದ ಲಂಚ ಪಡೆದು ವಾಹನಗಳನ್ನು ಬಿಟ್ಟು ಕಳುಹಿಸಿದ್ದಾರೆ. ನಂತರ ಸ್ವಲ್ಪ ಸಮಯದ ನಂತರ ಭಾಗಲ್ಪುರದ ಚೆಕ್ ಪೋಸ್ಟ್​ಗೆ ಎಸ್ಪಿ ಅರವಿಂದ್ ವರ್ಮಾ ಎಂಟ್ರಿ ಕೊಟ್ಟಿದ್ದಾರೆ.
ಚೆಕ್ ಪೋಸ್ಟ್ ಕಾನ್ ಸ್ಟೆಬಲ್ ಜೇಬಿನಿಂದ ಸಹಿ ಹಾಕಿದ್ದ ನೋಟು ವಶಪಡಿಸಿಕೊಂಡಿದ್ದಾರೆ. ಬಳಿಕ ಐವರು ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಎಸ್ಪಿ ಐವರು ಪೊಲೀಸರನ್ನು ರೆಡ್ ಹ್ಯಾಂಡ್ ಆಗಿ ಪತ್ತೆ ಮಾಡಿದರು. ಪೊಲೀಸರು ರಾಮ್ ರತನ್ ಶರ್ಮಾ, ಕೈಲಾಶ್ ಶರ್ಮಾ, ಗಿಯಾನಿ ಶಂಕರ್, ಯುಗೇಶ್ವರ್ ಮಹ್ತೋ ಮತ್ತು ರಾಮ್ ಬಾಲಕ್ ರಾಯ್ ವಿರುದ್ಧ ಮುಫಾಸಿಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಇದನ್ನೂ ಓದಿ:FRIENDSHIP DAY 2023; ಗೆಳೆತನದ ಮಹತ್ವ ಸಾರುವ ಫ್ರೆಂಡ್‌ಶಿಪ್ ದಿನ‌ದ ವಿಶೇಷತೆ ನಿಮಗೆ ಗೊತ್ತಾ?
ಈ ಪ್ರಕರಣ ಹಲವು ಬಾರಿ ತನಿಖೆ ನಡೆದು ಕೊನೆಗೂ ಭಾಗಲ್ಪುರದ ವಿಜಿಲೆನ್ಸ್ ಕೋರ್ಟ್ ಮೆಟ್ಟಿಲೇರಿದ್ದು, ಆದರೆ ಭಾಗಲ್ಪುರದ ಚೆಕ್ ಪೋಸ್ಟ್​​​ನಲ್ಲಿ ಐವರ ಬಳಿ ಇನ್ನು ಹಲವು ನೋಟುಗಳು ಇದ್ದವು. ಆದರೆ ಸರಿಯಾದ ಸಾಕ್ಷ್ಯಾಧಾರಗಳು ಇರದ ಕಾರಣ ಇದಕ್ಕೆ ಸಂಬಧಿಸಿದ  ಎಲ್ಲರೂ ನಿರಪರಾಧಿಗಳು ಎಂಬ ಇತ್ತೀಚಿನ ತೀರ್ಪು ಬಂದಿದ್ದು, ಹೀಗೆ 37 ವರ್ಷಗಳ ಕಾಲ ನಡೆದ ಈ ಪ್ರಕರಣದ ತನಿಖೆ ಕೊನೆಗೂ ಅಂತ್ಯಗೊಂಡಿದೆ.
Friendship Day Gifts; ಬಂಧಗಳನ್ನು ಬಲಪಡಿಸಲು ಉಡುಗೊರೆಗಳನ್ನು ನೀಡಬೇಕು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
