ಪಾಟ್ನಾ:ಬಿಹಾರದ ರಾಜಧಾನಿ ಪಾಟ್ನಾದಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಭದ್ರತಾ ವ್ಯವಸ್ಥೆಗೆ ಸಂಬಂಧಿಸಿದಂತೆ ಸಿಎಂ ಬೆಂಗಾವಲು ಪಡೆ ಸಂಚರಿಸಲು ಆಂಬ್ಯುಲೆನ್ಸ್​​ನ್ನು ತಡೆದು ನಿಲ್ಲಿಸಿರುವ ಘಟನೆ ನಡೆದಿದೆ.ಮುಖ್ಯಮಂತ್ರಿಗಳ ಭದ್ರತಾ ಪ್ರೋಟೋಕಾಲ್‌ಗಾಗಿ ತುರ್ತು ಪರಿಸ್ಥಿತಿಯಲ್ಲಿ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಆಂಬ್ಯುಲೆನ್ಸ್ ಸೇರಿದಂತೆ ಸಾಮಾನ್ಯ ಜನರ ವಾಹನಗಳನ್ನು ಗಾಯಿ ಘಾಟ್​​ನ ಸೇತುವೆಯಲ್ಲಿ ನಿಲ್ಲಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇತ್ತ, ಆಂಬ್ಯುಲೆನ್ಸ್‌ನಲ್ಲಿ ಮಹಿಳಾ ರೋಗಿಯೊಬ್ಬ ಜತೆಗಿದ್ದ ಅವರ ಸಂಬಂಧಿಕರು ಅಳುತ್ತಿದ್ದು, ಈ ಕುರಿತಾದ ವಿಡಿಯೋವೊಂದು ವೈರಲ್​ ಆಗಿದೆ.
ಇದನ್ನೂ ಓದಿ:ಮುಚ್ಚಿದ ಕೋಣೆಯಲ್ಲಿ ಪ್ರಿಯಕರನ ಜತೆ ಮಗಳನ್ನು ನೋಡಿದ ತಂದೆ: ಮುಂದೆ ನಡೆದದ್ದು ದುರಂತ..ವೀಡಿಯೋ ವೈರಲ್ ಆದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ವಿಐಪಿ ಸಂಸ್ಕೃತಿಯ ಬಗ್ಗೆ ಮತ್ತೊಮ್ಮೆ ಚರ್ಚೆಯಾಗುತ್ತಿದ್ದು, ಈ ಕುರಿತಾಗಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವೀಡಿಯೊವನ್ನು ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಪ್ರಧಾನಿಯಾಗುವ ಕನಸು ಕಾಣುತ್ತಿರುವ ನಿತೀಶ್ ಕುಮಾರ್​ರನ್ನು ನೋಡಿ. ಅವರು ತಮ್ಮ ಬೆಂಗಾವಲಿನ ವೇಗವನ್ನು ಕಡಿಮೆ ಮಾಡದಂತೆ ನೋಡಿಕೊಳ್ಳಲು ಇನ್ನೊಬ್ಬರ ಪ್ರಾಣವನ್ನು ಅಪಾಯಕ್ಕೆ ತಳ್ಳಬಹುದಾಗಿದೆ. ಒಂದೆಡೆ ಮೋದಿಜಿಯವರು ತಮ್ಮ ಬೆಂಗಾವಲು ಪಡೆಯನ್ನಷ್ಟೇ ಅಲ್ಲ, ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡಲು ಹಲವಾರು ಬಾರಿ ರೋಡ್‌ಶೋಗಳನ್ನು ನಿಲ್ಲಿಸಿದ್ದರೂ, ನಿತೀಶ್ ಅವರು ಆಂಬ್ಯುಲೆನ್ಸ್‌ನಲ್ಲಿ ಅಳುತ್ತಿರುವ ಕುಟುಂಬದ ಬಗ್ಗೆ ಕಿಂಚಿತ್ತೂ ಯೋಚಿಸಲಿಲ್ಲ. ಇದು ಭ್ರಷ್ಟರ ಹೆಮ್ಮೆಯ ಒಕ್ಕೂಟವಾಗಿದೆ. ಇದು ನಾಚಿಕೆಗೇಡು ಎಂದು ಟ್ವಿಟ್ ಮಾಡಿದ್ದಾರೆ.ನಿತೀಶ್ ಕುಮಾರ್ 18 ವರ್ಷಗಳಿಂದ ಸಿಎಂ ಆಗಿದ್ದು, ಅವರ ಸ್ವಭಾವದ ಪರಿಣಾಮ ಆಡಳಿತದ ಮೇಲೆ ಗೋಚರಿಸುತ್ತಿದೆ. ಬಿಹಾರದಲ್ಲಿ ನಿತೀಶ್ ಹೋದಲ್ಲೆಲ್ಲಾ ಆಡಳಿತದ ಜನರು ರಸ್ತೆಯಲ್ಲಿ ಭಯದ ವಾತಾವರಣ ಎದುರಿಸುತ್ತಾರೆ ಎಂದು ಬಿಹಾರ ಬಿಜೆಪಿ ವಕ್ತಾರ ನಿಖಿಲ್ ಆನಂದ್ ಹೇಳಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − two =
Remember me
