ತಿರುಪತಿ (ಆಂಧ್ರಪ್ರದೇಶ) : ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಾವಿರಾರು ಕೋಳಿಗಳು ಹಾಗೂ ಮೊಟ್ಟೆಗಳನ್ನು ನಾಶ ಮಾಡಲಾಗಿದೆ. ನೆಲ್ಲೂರು ಜಿಲ್ಲೆಯಲ್ಲಿ ಹಕ್ಕಿ ಜ್ವರ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ ಆಂಧ್ರ ಪ್ರದೇಶ ಸರ್ಕಾರ ಈ ಕ್ರಮ ಕೈಗೊಂಡಿದೆ.
ಇದನ್ನೂ ಓದಿ:ಲೋಕಸಭೆ ಚುನಾವಣೆ 20 ಕ್ಷೇತ್ರದಲ್ಲಿ ಗೆಲುತ್ತೇವೆ: ಸಿದ್ದರಾಮಯ್ಯ
ನೆಲ್ಲೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲೂ ಪೌಲ್ಟ್ರಿ ಫಾರಂಗಳ ಮೇಲೆ ನಿಗಾ ವಹಿಸಲಾಗಿದೆ. ಹಕ್ಕಿ ಜ್ವರದ ಲಕ್ಷಣ ಕಂಡು ಬಂದರೆ ಕೋಳಿ ಫಾರಂನಲ್ಲಿ ಇರುವ ಎಲ್ಲ ಹಕ್ಕಿಗಳನ್ನೂ ಕೊಂದು ಮುಚ್ಚಲಾಗುತ್ತಿದೆ. ಜೊತೆಯಲ್ಲೇ ರಸ್ತೆ ಬದಿಯ ಅಂಗಡಿಗಳು, ಹೋಟೆಲ್‌ಗಳಲ್ಲಿ ಯಾವುದೇ ಕಾರಣಕ್ಕೂ ಚಿಕನ್‌ ಪದಾರ್ಥಗಳನ್ನು ತಯಾರಿ, ಮಾರಾಟ ಮಾಡದಂತೆ ನೋಟಿಸ್​ ನೀಡಲಾಗಿದೆ.
ಕೋಳಿಗಳ ಸಾಗಣೆಗೆ ಕಡಿವಾಣ ಹಾಕಲು ನೆಲ್ಲೂರು ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ವಿಶೇಷ ಚೆಕ್ ಪೋಸ್ಟ್ ಗಳನ್ನು ಸಹ ಸ್ಥಾಪಿಸಲಾಗಿದೆ. ಹೊಸದಾಗಿ ಹಕ್ಕಿ ಜ್ವರ ಪ್ರಕರಣಗಳು ನೆಲ್ಲೂರು ಜಿಲ್ಲೆಯಲ್ಲಿ ವರದಿಯಾಗಿಲ್ಲವಾದರೂ. ಯಾವುದೇ ಕಾರಣಕ್ಕೂ ಹಕ್ಕಿ ಜ್ವರ ಪಕ್ಕದ ಜಿಲ್ಲೆಗಳಿಗೆ ಹರಡದಂತೆ ತಡೆಯಲು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನಲಾಗಿದೆ.
ನೆಲ್ಲೂರು ಸುತ್ತಮುತ್ತ ಮಾತ್ರವಲ್ಲ ಇಡೀ ರಾಜ್ಯಾದ್ಯಂತ ಕೋಳಿ ಫಾರಂಗಳಲ್ಲಿ ಪರಿಶೀಲನೆ ನಡೆಸುವಂತೆ ಹಾಗೂ ಕಟ್ಟೆಚ್ಚರ ವಹಿಸುವಂತೆ ಆಂಧ್ರ ಪ್ರದೇಶ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಸೋಂಕಿತ ಹಕ್ಕಿಗಳ ಜೊತೆ ಸಂಪರ್ಕಕ್ಕೆ ಯಾರಾದ್ರೂ ಬಂದರೆ ಅವರಲ್ಲಿ ಯಾವ ರೀತಿಯ ರೋಗ ಲಕ್ಷಣಗಳು ಕಂಡು ಬರುತ್ತವೆ, ಚಿಕಿತ್ಸೆ ಹೇಗೆ ನೀಡಬೇಕು ಎಂಬುದರ ಕುರಿತಾಗಿ ಸುತ್ತೋಲೆ ಹೊರಡಿಸಲಾಗಿದೆ. ಎನ್‌5ಎನ್‌1 ಸೋಂಕನ್ನ ಹಕ್ಕಿ ಜ್ವರ ಹೊತ್ತ ತರುತ್ತದೆ. ಈ ಸೋಂಕು ಕೋಳಿಗಳಿಂದ ಮಾನವನಿಗೆ ಹರಡಬಹುದಾಗಿದೆ.
ಆಂಧ್ರ ಪ್ರದೇಶ ಜಿಲ್ಲೆಗಳಾದ ಕೃಷ್ಣಾ ಹಾಗೂ ಗೋದಾವರಿ ಜಿಲ್ಲೆಗಳಲ್ಲಿ ವಿಶೇಷ ನಿಗಾ ವಹಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ. ಏಕೆಂದರೆ ಈ ಜಿಲ್ಲೆಗಳು ಆಂಧ್ರದ ಪೌಲ್ಟ್ರಿ ಉದ್ಯಮದ ಅತಿ ದೊಡ್ಡ ನೆಲೆಗಳಾಗಿವೆ.
ಸದ್ಯದ ಮಟ್ಟಿಗೆ ನೆಲ್ಲೂರು ಜಿಲ್ಲೆಯಲ್ಲಿ ಮಾತ್ರ ಹಕ್ಕಿ ಜ್ವರದ ಭೀತಿ ಎದುರಾಗಿದೆ. ಇಲ್ಲಿ ದೊಡ್ಡ ಮಟ್ಟದ ವಾಣಿಜ್ಯ ಫಾರಂಗಳು ಇಲ್ಲ. ಒಂದು ವೇಳೆ ಕೃಷ್ಣಾ ಹಾಗೂ ಗೋದಾವರಿಗೆ ಹಕ್ಕಿ ಜ್ವರ ಹರಡಿದ್ದರೆ ಸಾಕಷ್ಟು ನಷ್ಟ ಎದುರಾಗುವ ಭೀತಿ ಇತ್ತು. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಹಕ್ಕಿ ಜ್ವರ ಸೋಂಕು ನೆಲ್ಲೂರಿನಿಂದ ಆಚೆ ಹರಡದಂತೆ ತಡೆಯುವ ನಿಟ್ಟಿನಲ್ಲಿ ಸೂಕ್ತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರಿಗೂ ಕೂಡಾ ಈ ಸೋಂಕಿನ ಕುರಿತಾಗಿ ಹೆಚ್ಚಿನ ಮಾಹಿತಿ ಒದಗಿಸಲಾಗುತ್ತಿದೆ.
ನೆಲ್ಲೂರು ಜಿಲ್ಲೆಯಲ್ಲಿ ಫೆಬ್ರವರಿ 7 ರಂದು ಹಕ್ಕಿ ಜ್ವರದ ಮೊದಲ ಪ್ರಕರಣ ಕಂಡು ಬಂದಿತ್ತು. ನೆಲ್ಲೂರು ಜಿಲ್ಲಾಧಿಕಾರಿ ಎಂ. ಹರಿನಾರಾಯಣ ಅವರು ಕೂಡಲೇ ಸಕಲ ಕ್ರಮ ಕೈಗೊಂಡು ಸೋಂಕು ಅಕ್ಕಪಕ್ಕದ ಜಿಲ್ಲೆಗಳಿಗೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಯ್ತು ಎಂದು ಮಾಹಿತಿ ನೀಡಿದ್ದಾರೆ. ಬುಚ್ಚಿರೆಡ್ಡಿಪಾಲೆಂ, ವೆಂಕಟಾಚಲಂ, ಕೋವೂರು, ಪಾತೂರು, ಕೊತ್ತೂರು, ನರಕೂರು, ಪೊದಲಕೂರ್ ಮತ್ತು ಅಲ್ಲಿಪುರಂ ವ್ಯಾಪ್ತಿಯಲ್ಲಿ ಹೆಚ್ಚು ಕೋಳಿ ಫಾರಂಗಳಿವೆ.
ನೆಲ್ಲೂರಿನ ಪಶುಸಂಗೋಪನಾ ಜಂಟಿ ನಿರ್ದೇಶಕ ಡಾ.ಬಿ.ಮಹೇಶ್ವರುಡು ಮಾತನಾಡಿ, ಹಕ್ಕಿಜ್ವರದ ಉಲ್ಬಣವು ಆತಂಕಕಾರಿಯಾಗಿದ್ದರೂ, ಎರಡೂ ಪೀಡಿತ ಹಳ್ಳಿಗಳಲ್ಲಿ ವಾಣಿಜ್ಯ ಕೋಳಿ ಕಾರ್ಯಾಚರಣೆ ನಡೆಯದ ಕಾರಣ ಹಾನಿಯು ಸಾಕಷ್ಟು ಸೀಮಿತವಾಗಿದೆ. 10 ಕಿ,ಮೀ ವ್ಯಾಪ್ತಿಯಲ್ಲಿ ರಸ್ತೆ ಬದಿಯ ಅಂಗಡಿಗಳು, ಹೋಟೆಲ್‌ಗಳಲ್ಲಿ ಯಾವುದೇ ಕಾರಣಕ್ಕೂ ಚಿಕನ್‌ ಪದಾರ್ಥಗಳನ್ನು ತಯಾರಿ, ಮಾರಾಟ ಮಾಡದಂತೆ ನೋಟಿಸ್​ ನೀಡಲಾಗಿದೆ.
ಬೇಸಿಗೆಯಲ್ಲಿ ಹಳದಿ ಕಲ್ಲಂಗಡಿ ಹಣ್ಣು ತಿನ್ನುವುದರಿಂದ, ಇಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ…?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
