ಹರಿಯಾಣ:ಭಾರತೀಯ ಜನತಾ ಪಾರ್ಟಿಯನ್ನು ಬೆಂಬಲಿಸಿ ಅದಕ್ಕೆ ಮತ ಹಾಕುವವರು ರಾಕ್ಷಸರು ಎಂದು ಹೇಳುವ ಮೂಲಕ ಕಾಂಗ್ರೆಸ್​ ನಾಯಕ, ರಾಜ್ಯಸಭೆ ಸದಸ್ಯ ರಣದೀಪ್​ ಸಿಂಗ್​ ಸುರ್ಜೇವಾಲ ಹೊಸ ವಿವಾದ ಒಂದನ್ನು ಹುಟ್ಟುಹಾಕಿದ್ದಾರೆ.
ಹರಿಯಾಣದಲ್ಲಿ ಪಕ್ಷದ ಕಾರ್ಯಕ್ರಮ ಒಂದನ್ನು ಉದ್ದೇಶಿಸಿ ಮಾತನಾಡುವ ವೇಳೆ ಬಿಜೆಪಿಯ ಮಿತ್ರ ಪಕ್ಷ ಜನನಾಯಕ ಜನತಾ ಪಾರ್ಟಿಯನ್ನು ಬೆಂಬಲಿಸುವವರು ಸಹ ರಾಕ್ಷಸರು ಎಂದು ಹರಿಹಾಯ್ದಿದ್ದಾರೆ.
ಸುರ್ಜೇವಾಲಾ ಹೇಳಿಕೆ ವೈರಲ್​ ಆಗುತ್ತಿದ್ದಂತೆ ಕಿಡಿಕಾರಿದ ಬಿಜೆಪಿ ನಾಯಕರು ಚುನಾವಣೆಯಲ್ಲಿನ ಸೋಲುಗಳು ಕಾಂಗ್ರೆಸ್​ನ ಈ ಹತಾಶೆ ಮನಸ್ಥಿತಿಗೆ ಕಾರಣವಾಗಿದೆ. ತಮ್ಮ ಪಕ್ಷದ ಯುವರಾಜನನ್ನು ಲಾಂಚ್​ ಮಾಡುವಲ್ಲಿ ವಿಫಲರಾಗಿರುವವರು ಈಗ ಸಾರ್ವಕಜನಿಕರನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆಲ್ಲಾ ಉತ್ತರ ಕೊಡಲಿದ್ದಾರೆ ಎಂದು ಕಾಂಗ್ರೆಸ್​ ನಾಯಕನ ಹೇಳಿಕೆಗೆ ಚಾಟಿ ಬೀಸಿದ್ದಾರೆ.
Randeep Surjewala & his party refer to Afzal Guru, Osama & Hafiz Saeed with “Ji” & “Sahab” but here he is abusing voters – 22.9cr votersSays those who vote BJP are “Rakshas pravriti vale (राक्षस प्रवृत्ति वाले )First abuse ECI,EVMs & now No Confidence in Janta ? Janta will…pic.twitter.com/gjQSyBSRCt
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ KSRP ಪೊಲೀಸ್​ ಪೇದೆಗಳಿಬ್ಬರ ಮೃತ್ಯು ​
ಸುರ್ಜೇವಾಲಾ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಮಧ್ಯಪ್ರದೇಶ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​ ನಿಮ್ಮ ಪಕ್ಷದವರು ಸಾರ್ವಜನಿಕರನ್ನು ರಾಕ್ಷಸರು ಎಂದು ಕರೆಯುತ್ತಿದ್ದಾರೆ. ರಾಹುಲ್​ ಹಾಗೂ ಸೋನಿಯಾ ಗಾಂಧಿ ಅವರೇ ಇದು ನಿಮ್ಮ ಪ್ರೇಮದ ಆಂಗಡಿಯೇ. ನಿಮ್ಮನೇ ನೀವು ದೇವರು ಎಂದುಕೊಂಡಿದ್ದೀರಾ ಅದಕ್ಕಾಗಿ ಜನರನ್ನು ದೂಷಿಸುವುದು ಒಳ್ಳೆಯ ನಡೆಯಲ್ಲ ಎಂದು ಕಿಡಿಕಾರಿದ್ದಾರೆ.
ಇತ್ತ ತಮ್ಮ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ ರಣದೀಪ್​ ಸುರ್ಜೇವಾಲಾ ಸಮಾಜದಲ್ಲಿ ಬೆಂಕಿ ಹಚ್ಚಿ, ಯುವ ಜನರ ಕನಸುಗಳನ್ನೂ ಸಾಯಿಸುತ್ತಿರುವವರು ರಾಕ್ಷಸರಲ್ಲದೇ ಮತ್ತೇನೂ. ತನ್ನ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಬಿಜೆಪಿ ನಾಯಕರು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ.
ನಾನು ಒಬ್ಬ ಜನಪ್ರತಿನಿಧಿಯಾಗಿ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವುದು ನನ್ನ ಕರ್ತವ್ಯ. ನನ್ನ ಕೊನೆಯ ಉಸಿರಿರುವವರೆಗೂ ನಾನು ಜನರ ಪರ ಧ್ವನಿ ಎತ್ತಲು ಸಿದ್ದನಿದ್ದೇನೆ ಎಂದು ಕಾಂಗ್ರೆಸ್​ ನಾಯಕ, ರಾಜ್ಯಸಭೆ ಸದಸ್ಯ ರಣದೀಪ್​ ಸುರ್ಜೇವಾಲಾ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
भरा नही जो करुणा से,जिसको जनजन से प्यार नही !शासक नही वह असुर है,जिसे किसान,-मजदूर-अबला-युवा से प्यार नही !!संवाद में भावना और भावुकता शब्दों से कहीं ज़्यादा महत्वपूर्ण है, जिसे कोई संवेदनशील व्यक्ति ही समझ सकता है।जैसे कौरवों ने पांडवों के साथ छल करके उनके अधिकार छीने…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
