ಬೆಂಗಳೂರು:ವನ್ಯಜೀವಿ ಲೋಕ ಅದ್ಭುತ, ಅನೂಹ್ಯ, ರೋಮಾಂಚನಕಾರಿ ಹಾಗೂ ಸಾಹಸದಾಯಕ. ಇನ್ನು ವನ್ಯಜೀವಿಗಳ ಛಾಯಾಗ್ರಹಣ ನೀಡುವ ಅನುಭವವೇ ವಿಶಿಷ್ಟ. ಅದರಲ್ಲೂ ಅಪರೂಪದ ಪ್ರಾಣಿಗಳು ಕಣ್ಣಿಗೆ ಬಿದ್ದರಂತೂ ಹಬ್ಬವೋಹಬ್ಬ…!
ಅಂಥದ್ದೇ ಒಂದು ಹಬ್ಬಕ್ಕೆ ಸಾಕ್ಷಿಯಾಗಿದೆ ಕಬಿನಿ ನದಿಯಂಚಿನ ಕಾಡು. ಹೌದು ಇಲ್ಲಿ ಅತ್ಯಪರೂಪದ ಪ್ರಸಂಗಕ್ಕೆ ಕ್ಯಾಮರಾ ಕಣ್ಣು ಸಾಕ್ಷಿಯಾಗಿದೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.
ಇದನ್ನೂ ಓದಿ;ಭೂತಾನ್​​ ಸಕ್ಟೆಂಗ್​ ವನ್ಯಜೀವಿ ಅಭಯಾರಣ್ಯವೂ ತನ್ನ ವ್ಯಾಪ್ತಿಗೆ ಸೇರಿದೆ ಎಂದು ಗಡಿ ತಂಟೆ ಶುರು ಮಾಡಿದ ಚೀನಾ


ಇಲ್ಲಿ ಕರಿ ಚಿರತೆಯೊಂದು ಕಾಣಿಸಿಕೊಂಡಿದೆ. ಭಾರತದಲ್ಲಿ ಕರಿ ಚಿರತೆಗಳೂ ಭಾರಿ ಅಪರೂಪ. ಅದರಲ್ಲೂ ಇವುಗಳ ಸಂಖ್ಯೆ ವಿರಳಾತಿವಿರಳ. ಹೀಗಾಗಿ ಕಣ್ಣಿಗೆ ಬಿದ್ದಿತೆಂದರೆ ಅದೊಂದು ಸುಸಂದರ್ಭ. ಆ ಅಮೂಲ್ಯ ಕ್ಷಣಗಳು ಸೆರೆಯಾದರೆ, ಅದಕ್ಕಿಂತ ಭಾಗ್ಯ ಇನ್ನೊಂದಿಲ್ಲ ಎನ್ನುತ್ತಾರೆ ವನ್ಯಜೀವಿ ಛಾಯಾಚಿತ್ರಗ್ರಾಹಕರು.
ಈಗ ಸೋಷಿಯಲ್​ ಮಿಡಿಯಾದಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಫೋಟೋಗಳನ್ನು ಸೆರೆ ಹಿಡಿದಿರುವುದು ಶಾಜ್​ಝಂಗ್​ ಎಂಬುವರು. ಅರ್ಥ ಎಂಬ ಟ್ವಿಟರ್​ ಪುಟದಲ್ಲಿ ಇದನ್ನು ಅಪ್​ಲೋಡ್​ ಮಾಡಲಾಗಿದೆ.
ಕಾಲೇಜು, ವಿಶ್ವವಿದ್ಯಾಲಯಗಳ ಪರೀಕ್ಷೆಗಳೂ ರದ್ದು; ಇವರೇ ಭಾಗ್ಯವಂತರು…!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:fifteen − 13 =
Remember me
