ನವದೆಹಲಿ:ದೇಶದ ಮುಸ್ಲಿಮರು ಮದರಸಾ ಅಂತ ಯಾವುದೇ ಕಟ್ಟುಪಾಡುಗಳಿಗೆ ಕಟ್ಟುಬೀಳದೆ, ಈ ಆಧುನಿಕ ಜಗತ್ತಿನಲ್ಲಿ ತಮ್ಮ ಬೌದ್ಧಿಕ ಬೆಳವಣಿಗೆ ಕಡೆ ಗಮನ ವಹಿಸಬೇಕೆಂದು ಸಲಹೆ ನೀಡಿರುವ ಬಾಲಿವುಡ್​ ಹಿರಿಯ ನಟ ನಾಸಿರುದ್ದೀನ್ ಶಾ, ಪ್ರಧಾನಿ ಮೋದಿ ಅಧಿಕಾರಕ್ಕೂ ಬರುವ ಮುನ್ನವೇ ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆದಿವೆ ಎಂದಿದ್ದಾರೆ.
ಮೋದಿ ಸರ್ಕಾರದಲ್ಲಿ ಮುಸ್ಲಿಮರನ್ನು ಕಡೆಗಣಿಸಲಾಗುತ್ತಿದೆ ಎಂಬ ಚರ್ಚೆಯ ನಡುವೆ ನಾಸಿರುದ್ದೀನ್ ಶಾ ಅವರ ಸಲಹೆ ಮಹತ್ವ ಪಡೆದುಕೊಂಡಿದೆ.
ದಿ ವೈರ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಾಸಿರುದ್ದೀನ್ ಶಾ, ಮುಸ್ಲಿಮರು ಹಿಜಾಬ್​ ಮತ್ತು ಸಾನಿಯಾ ಮಿರ್ಜಾರ ಸ್ಕರ್ಟ್​ನ ಉದ್ದದ​ ಬಗ್ಗೆಯೇ ಸದಾ ಚಿಂತಿಸುತ್ತಾರೆ. ಅದನ್ನು ಬಿಟ್ಟು ಶಿಕ್ಷಣದ ಕಡೆ ಗಮನ ಹರಿಸಬೇಕು ಹಾಗೂ ಮದರಸಾಗಳ ಬದಲಾಗಿ ಪ್ರಬುದ್ಧತೆ ಮತ್ತು ಆಧುನಿಕ ಕಲ್ಪನೆಯನ್ನು ಬೆಳಸಿಕೊಳ್ಳಬೇಕು ಎಂದು ಮಹತ್ವದ ಸಲಹೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಬಗ್ಗೆ ಮಾತನಾಡಿದ ನಾಸಿರುದ್ದೀನ್ ಶಾ, ಮೋದಿಯನ್ನು ವಿರೋಧಿಸುವುದು ತುಂಬಾ ಸುಲಭ. ಆದರೆ, ಮೋದಿ ಬರುವುದಕ್ಕೂ ಮುಂಚೆಯೇ ಈ ದೇಶದಲ್ಲಿ ಸಾಕಷ್ಟು ತಪ್ಪುಗಳು ನಡೆದಿದ್ದವು. ನಮ್ಮ ದೇಶದಲ್ಲಿ ಯಾವಾಗಲೂ ಧರ್ಮಗಳ ನಡುವಿನ ದ್ವೇಷದ ಒಳಹರಿವು ಇದೆ ಎಂದು ವಾಸ್ತವಾಂಶವನ್ನು ತೆರೆದಿಟ್ಟರು.
BIG NEWS 🚨 Bollywood Actor Naseeruddin Shah said that "Muslims are worried about Hizab, length of Sania Mirza's skirt"
He said "Muslims should be worried about Education, enlightening, modern idea instead of madrassas"
He said "It is very easy to oppose Modi. The fact is that…pic.twitter.com/fQPglC8pZe
— Times Algebra (@TimesAlgebraIND)June 11, 2024

ತನನ್ನು ದೇವರು ಕಳುಹಿಸಲ್ಪಟ್ಟಿದ್ದೇನೆ ಅಥವಾ ತನ್ನನ್ನೇ ದೇವರು ಎಂದು ಮೋದಿ ನಂಬಿದರೆ, ಅದು ಎಲ್ಲರನ್ನೂ ಹೆದರಿಸುವಂತೆ ಮಾಡುತ್ತದೆ. ಮೋದಿ ಅವರು ಜೀವನಪರ್ಯಂತ ಪ್ರಧಾನಿಯಾಗಿರುತ್ತೇನೆಂದು ಅಂದುಕೊಂಡಿದ್ದರು. ಆದರೆ, ಅಧಿಕಾರವನ್ನು ಹಂಚಿಕೊಳ್ಳುವುದು ಅವರಿಗೆ ನುಂಗಲು ಕಹಿ ಮಾತ್ರೆಯಾಗಿದೆ ಎನ್ನುವ ಮೂಲಕ ಲೋಕಸಭೆಯ ಅತಂತ್ರ ಫಲಿತಾಂಶದ ಬಗ್ಗೆ ಮಾತನಾಡಿದರು ಮತ್ತು ಈ ಫಲಿತಾಂಶ ನೆಮ್ಮದಿ ತಂದಿದೆ ಎಂದರು.
ಹಳೇ ಮೋದಿಯಿಂದ ಹೊಸ ಮೋದಿಯಾಗಿ ಪರಿವರ್ತನೆಗೊಳ್ಳುವುದು ಮೋದಿಗೆ ಸುಲಭವೋ ಅಥವಾ ಕಷ್ಟವೋ ಎಂದು ದಿ ವೈರ್‌ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾ, ಪ್ರಧಾನಿಗೆ ಇದು ತುಂಬಾ ಕಷ್ಟಕರವಾದ ಕೆಲಸವಾಗಿದೆ ಎಂದರು. ಅವರು ಅಷ್ಟು ಒಳ್ಳೆಯ ನಟನಲ್ಲ, ಅವರ ಅಳತೆಯ ನಗು ಮತ್ತು ಮೊಸಳೆ ಕಣ್ಣೀರು ನನಗೆ ಎಂದಿಗೂ ಮನವರಿಕೆ ಮಾಡಿಲ್ಲ. ಅವರು ಹೊಸ ಮೋದಿಯಾಗಲು ಸಾಧ್ಯವಿಲ್ಲ ಎಂದು ಎಂದು ಶಾ ಹೇಳಿದರು.(ಏಜೆನ್ಸೀಸ್​)
ಇದೆಲ್ಲವೂ ನಿನ್ನಿಂದಲೇ ಆಗಿದ್ದು… ಪವಿತ್ರಾ ಗೌಡ ಮೇಲೆಯೂ ಹಲ್ಲೆ ಮಾಡಿದ್ದರಂತೆ ನಟ ದರ್ಶನ್​!?

ಅಂದು ದರ್ಶನ್ ಜತೆಗೆ ಪವಿತ್ರಾ ಗೌಡ ಕೂಡ ಇದ್ದರಂತೆ? ಬಯಲಾಯ್ತು ಸ್ಫೋಟಕ ಸಂಗತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
