ನಾಗ್ಪುರ:ಬಾಂಬೆ ಹೈಕೋರ್ಟ್​ನ ನ್ಯಾಯಾಧೀಶರಾದ ನ್ಯಾಯಮೂರ್ತಿ ರೋಹಿತ್ ಡಿಯೋ ಅವರು ವೈಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ಹಾಜರಿದ್ದ ವಕೀಲರ ಪ್ರಕಾರ, ನಾಗ್ಪುರದಲ್ಲಿ ಬೆಂಚ್ ಹೊಂದಿರುವ ಮುಂಬೈ ಹೈಕೋರ್ಟ್​ನ ಕೋರ್ಟ್​ರೂಂನಲ್ಲಿ ಪ್ರಕಟಣೆ ನೀಡುತ್ತಾ, ನ್ಯಾಯಮೂರ್ತಿ ಡಿಯೋ ಅವರು ಸ್ವಾಭಿಮಾನದ ಜತೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಘೋಷಣೆ ಮಾಡಿದ ನಂತರ, ಆ ದಿನದಲ್ಲಿ ಅವರ ಮುಂದೆ ಹಾಜರಾಗಬೇಕಾದ ಪ್ರಕರಣಗಳನ್ನು ಮುಂದೂಡಲಾಗಿದೆ.
ಇದನ್ನೂ ಓದಿ:ಹಿಂಡಲಗಾ ಜೈಲಿನ ಮತ್ತೋರ್ವ ಕೈದಿ ಕಸ್ಟಡಿಗೆ ಪಡೆದ ನಾಗ್ಪುರ್ ಪೊಲೀಸ್
“ನ್ಯಾಯಾಲಯದಲ್ಲಿ ಹಾಜರಿದ್ದವರು, ನಿಮ್ಮಲ್ಲಿ ಪ್ರತಿಯೊಬ್ಬರಿಗೂ ನಾನು ಕ್ಷಮೆಯಾಚಿಸುತ್ತೇನೆ. ನೀವು ಸುಧಾರಿಸಬೇಕೆಂದು ನಾನು ಬಯಸುತ್ತೇನೆ. ನಾನು ನಿಮ್ಮಲ್ಲಿ ಯಾರನ್ನೂ ನೋಯಿಸಲು ಬಯಸುವುದಿಲ್ಲ ಏಕೆಂದರೆ ನೀವೆಲ್ಲರೂ ನನಗೆ ಕುಟುಂಬದವರಂತೆ ಇದ್ದೀರಿ. ನಾನು ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಎಂದು ಹೇಳಲು ನನಗೆ ವಿಷಾದವಿದೆ. ನನ್ನ ಸ್ವಾಭಿಮಾನಕ್ಕೆ ವಿರುದ್ಧವಾಗಿ ನಾನು ಕೆಲಸ ಮಾಡಲು ಸಾಧ್ಯವಿಲ್ಲ. ನೀವು ಕಷ್ಟಪಟ್ಟು ಕೆಲಸ ಮಾಡುತ್ತೀರಿ” ಎಂದು ನ್ಯಾಯಮೂರ್ತಿ ಡಿಯೋ ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆ ಎಂದು ವಕೀಲರು ಉಲ್ಲೇಖಿಸಿದ್ದಾರೆ.
ನಂತರ ವರದಿಗಾರರೊಂದಿಗೆ ಮಾತನಾಡಿದ ನ್ಯಾಯಾಧೀಶರು, ವೈಯಕ್ತಿಕ ಕಾರಣಗಳಿಂದಾಗಿ ಅವರು ತಮ್ಮ ನ್ಯಾಯಾಧೀಶ ಪಟ್ಟವನ್ನು ತ್ಯಜಿಸಿದ್ದು ರಾಜೀನಾಮೆ ಪತ್ರವನ್ನು ಭಾರತದ ರಾಷ್ಟ್ರಪತಿಗೆ ಕಳುಹಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ನಿತಿನ್ ಗಡ್ಕರಿಗೆ ಬೆದರಿಕೆ ಹಾಕಿದ್ದ ಶಂಕಿತನನ್ನು ಬೆಳಗಾವಿಯಿಂದ ಕರೆದೊಯ್ದ ನಾಗ್ಪುರ ಪೊಲೀಸರು
2022 ರಲ್ಲಿ, ನ್ಯಾಯಮೂರ್ತಿ ಡಿಯೋ ಮಾಜಿ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಿಎನ್ ಸೈಬಾಬಾ ಅವರನ್ನು ಮಾವೋವಾದಿ ಲಿಂಕ್ ಪ್ರಕರಣದಲ್ಲಿ ಖುಲಾಸೆಗೊಳಿಸಿದ್ದರು. UAPA ಕಾಯ್ದೆ ಅಡಿಯಲ್ಲಿ ಮಾನ್ಯ ಅನುಮೋದನೆಯ ಅನುಪಸ್ಥಿತಿಯಲ್ಲಿ ವಿಚಾರಣೆಯ ಪ್ರಕ್ರಿಯೆಗಳು ಶೂನ್ಯ ಮತ್ತು ಅನೂರ್ಜಿತವಾಗಿವೆ ಎಂದು ಗಮನಿಸಿ ಜಿಎನ್​ ಸೈಬಾಬಾಗೆ ನೀಡಲಾದ ಜೀವಾವಧಿ ಶಿಕ್ಷೆಯನ್ನು ಬದಿಗಿಡಲಾಗಿತ್ತು.
ಸುಪ್ರೀಂ ಕೋರ್ಟ್ ನಂತರ ಈ ಆದೇಶವಕ್ಕೆ ತಡೆ ಒಡ್ಡಿ ಹೈಕೋರ್ಟ್​ನ ನಾಗ್ಪುರ ಬೆಂಚ್​ಗೆ ಈ ಪ್ರಕರಣವನ್ನು ಹೊಸದಾಗಿ ಪರಿಶೀಲನೆ ನಡೆಸಲು ಆದೇಶಿಸಿತ್ತು.
ಇದನ್ನೂ ಓದಿ:ಮತ್ತೆ ಗಡಿ ವಿವಾದ ಕೆದಕಿದ ಮಹಾರಾಷ್ಟ್ರ: ನಾಗ್ಪುರ ವಿಧಾನಮಂಡಲ ಅಧಿವೇಶನದಲ್ಲಿ ಕರ್ನಾಟಕದ ವಿರುದ್ಧ ನಿರ್ಣಯ
ಕಳೆದ ವಾರ, ನ್ಯಾಯಮೂರ್ತಿ ಡಿಯೋ ಜನವರಿ 3ರ ಮಹಾರಾಷ್ಟ್ರ ಸರ್ಕಾರದ ನಿರ್ಣಯ (ಆದೇಶ) ಕಾರ್ಯಾಚರಣೆಯನ್ನು ತಡೆದು, ಈ ಮೂಲಕ ನಾಗ್ಪುರ-ಮುಂಬೈ ಸಮೃದ್ಧಿ ಎಕ್ಸ್​ಪ್ರೆಸ್​ವೇ ನಿರ್ಮಾಣದಲ್ಲಿ ತೊಡಗಿರುವ ಗುತ್ತಿಗೆದಾರು ಅಕ್ರಮವಾಗಿ ನಡೆಸುತ್ತಿದ್ದ ಸಣ್ಣ ಖನಿಜಗಳ ಉತ್ಖನನಕ್ಕೆ ಸಂಬಂಧಿಸಿದ ಆದಾಯ ಇಲಾಖೆಯಿಂದ ಪ್ರಾರಂಭಿಸಲಾದ ದಂಡನಾತ್ಮಕ ಕ್ರಮಗಳನ್ನು ರದ್ದುಗೊಳಿಸಲು ರಾಜ್ಯಕ್ಕೆ ಅಧಿಕಾರ ನೀಡಲಾಗಿತ್ತು.
ನ್ಯಾಯಮೂರ್ತಿ ಡಿಯೋ ಅವರನ್ನು ಜೂನ್ 2017 ರಲ್ಲಿ ಬಾಂಬೆ ಹೈಕೋರ್ಟ್​ನ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಅದಕ್ಕೂ ಮೊದಲು, ಅವರು 2016 ರಲ್ಲಿ ಮಹಾರಷ್ಟ್ರಾದ ಅಡ್ವೊಕೇಟ್ ಜನರಲ್ ಆಗಿದ್ದರು. ಅವರು ಡಿಸೆಂಬರ್ 2025ರಲ್ಲಿ ನಿವೃತ್ತರಾಗಬೇಕಿತ್ತು.(ಏಜೆನ್ಸೀಸ್)
ಮೈ-ಬೆಂ ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಇಳಿಮುಖ; ವೇಗಮಿತಿ ಹೆಚ್ಚಿಸಲು ಚಿಂತನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
