ನವದೆಹಲಿ: ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಕ್ರೀಡಾ ಸಹೋದರರ ಕುಟುಂಬಕ್ಕೆ ಕ್ರೀಡಾ ಸಚಿವಾಲಯ ಸಹಾಯಕ್ಕೆ ಮುಂದಾಗಿದ್ದು, ತಲಾ 5 ಲಕ್ಷ ರೂ. ಮಂಜೂರು ಮಾಡಿದೆ.
ಉತ್ತರ ಪ್ರದೇಶದಲ್ಲಿ ನೆಲೆಸಿರುವ ಬಾಕ್ಸರ್ ಸುನಿಲ್​ ಚೌಹಾಣ್​ ಹಾಗೂ ಆತನ ಸಹೋದರ ಆರ್ಚರ್​ ನೀರಜ್​ ಚೌಹಾಣ್​ ಅವರ ತಂದೆ ಕರೊನಾ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದಾರೆ. ಕುಟುಂಬಕ್ಕೆ ಜೀವಾನಾಧಾರ ಆಗಿರುವ ಅವರು ಇದರಿಂದಾಗಿ ಜೀವನನಿರ್ವಹಣೆಗೆ ತರಕಾರಿ ಮಾರಾಟ ಮಾಡಬೇಕಾಗಿದೆ.
ಈ ವಿಷಯ ತಿಳಿದ ಕ್ರೀಡಾ ಸಚಿವ ಕಿರಣ್​ ರಿಜಿಜು ಇಬ್ಬರೂ ಸಹೋದರರಿಗೂ ತಲಾ 5 ಲಕ್ಷ ರೂ. ಮಂಜೂರು ಮಾಡಿದ್ದಾರೆ. ಪಂಡಿತ್ ದೀನದಯಾಳ್​ ಉಪಾಧ್ಯಾಯ ನ್ಯಾಷನಲ್​ ವೆಲ್​ಫೇರ್​ ಫಂಡ್ ಫಾರ್​ ಸ್ಪೋರ್ಟ್ಸ್​ ಪರ್ಸನ್ಸ್​ನಡಿ ಈ ಆರ್ಥಿಕ ನೆರವು ನೀಡಲಾಗುತ್ತಿದೆ.
ನೀರಜ್​ 50 ಮೀ. ಸೀನಿಯರ್ ಆರ್ಚರಿ ಚಾಂಪಿಯನ್​ಷಿಪ್​-2018 ಬೆಳ್ಳಿ ಪದಕ, 65ನೇ ನ್ಯಾಷನಲ್​ ಸ್ಕೂಲ್​ ಗೇಮ್ಸ್​ 2020ರಲ್ಲಿ ಪದಕ ಗಳಿಸಿದ್ದು, ಸುನಿಲ್​ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್​ 2020ರಲ್ಲಿ ಚಿನ್ನದ ಪದಕ ಗಳಿಸಿದ್ದಾರೆ. ಆರ್ಥಿಕ ನೆರವು ಮಂಜೂರು ಹಿನ್ನೆಲೆಯಲ್ಲಿ ಸಚಿವರಿಗೆ ಇಬ್ಬರೂ ಧನ್ಯವಾದ ಸಲ್ಲಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + eighteen =
Remember me
