ಲಖನೌ:ಮದುವೆಯ ಹಿಂದಿನ ದಿನ ತನ್ನ ಪ್ರಿಯಕರನೊಂದಿಗೆ ಎಸ್ಕೇಪ್​ ಆಗುವಾಗ ಅಪಘಾತಕ್ಕೀಡಾಗಿ ಇಬ್ಬರೂ ಮೃತಪಟ್ಟಿರುವ ದುರಂತ ಘಟನೆ ಉತ್ತರ ಪ್ರದೇಶದ ಮಿರ್ಜಾಪುರ್​ನಲ್ಲಿ ನಡೆದಿದೆ. ಪರಾರಿಯಾಗಲು ವಧುವಿಗೆ ಸಹಾಯ ಮಾಡಿದ ಸೋದರ ಸಂಬಂಧಿಯು ಕೂಡ ಅಪಘಾತಕ್ಕೆ ಬಲಿಯಾಗಿದ್ದಾರೆ.
ಮೃತರನ್ನು ಮಿರ್ಜಾಪುರ ಮೂಲದ ರಾಣಿ (21), ಕರಣ್ (21) ಮತ್ತು ವಿಕಾಸ್ (21) ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ಈ ದುರ್ಘಟನೆ ನಡೆದಿದೆ.
ಇದನ್ನೂ ಓದಿ:ಟಿಕ್​ಟಾಕ್​ ವಿಡಿಯೋ ನೋಡಿ ಮೊಟ್ಟೆ ಬೇಯಿಸುವ ಯತ್ನ: ಸ್ಫೋಟಗೊಂಡ ಮೊಟ್ಟೆ, ವಿರೂಪವಾಯ್ತು ಮುಖ!
ರಾಣಿಯ ವಿವಾಹವು ಪ್ರಯಾಗ್‌ರಾಜ್‌ನ ವ್ಯಕ್ತಿಯೊಂದಿಗೆ ನಿಶ್ಚಯವಾಗಿತ್ತು. ಪೊಲೀಸರ ಪ್ರಕಾರ, ಮಹಿಳೆ ತನ್ನ ಸೋದರಸಂಬಂಧಿಯ ಸ್ನೇಹಿತನಾಗಿದ್ದ ಸ್ಥಳೀಯ ಹುಡುಗನನ್ನು ಪ್ರೀತಿಸುತ್ತಿದ್ದಳು. ಆದರೆ, ಇದಕ್ಕೆ ಪಾಲಕರ ವಿರೋಧವಿತ್ತು. ಬಲವಂತದ ಮದುವೆ ಇಷ್ಟವಿಲ್ಲದಿದ್ದರಿಂದ ಸೋದರಸಂಬಂಧಿಯ ಸಹಾಯದಿಂದ ಇಬ್ಬರೂ ಪಲಾಯನ ಮಾಡಲು ಯೋಜಿಸಿದರು.
ಪೋಲೀಸರ ಪ್ರಕಾರ ಮದುವೆಯ ಹಿಂದಿನ ದಿನ ರಾಣಿಯ ಪ್ರಿಯಕರ ಮತ್ತು ಸೋದರಸಂಬಂಧಿ ಬೈಕ್​ನಲ್ಲಿ ಆಕೆಯ ಮನೆಗೆ ತಲುಪಿದರು. ಮದುವೆಯ ಸಿದ್ಧತೆಯಲ್ಲಿ ನಿರತರಾಗಿದ್ದ ಸಂಬಂಧಿಕರ ಕಣ್ಣು ತಪ್ಪಿಸಿ, ಅಲ್ಲಿಂದ ಎಸ್ಕೇಪ್​ ಆದರು. ಮದುವೆ ಮನೆಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲೇ ಅಪಘಾತವಾಗಿದ್ದು, ಮೂವರು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.(ಏಜೆನ್ಸೀಸ್​)
IPL ಮ್ಯಾಚ್: ಸ್ವಿಗ್ಗಿಯಿಂದ ಹೆಚ್ಚು ಡೆಲಿವರಿ ಆಗಿದ್ದು ಕಾಂಡೋಮ್‌, ಬಿರಿಯಾನಿ!

ರಾಜ್ಯದ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
