ನವದೆಹಲಿ:ಪಾಕಿಸ್ತಾನದಲ್ಲಿನ ಬ್ರಿಟಿಷ್ ರಾಯಭಾರಿಯವರು ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭೇಟಿ ನೀಡಿರುವುದಕ್ಕೆ ಕೇಂದ್ರ ಸರ್ಕಾರ ಶನಿವಾರ ಆಕ್ಷೇಪ ವ್ಯಕ್ತಪಡಿಸಿದೆ.
ಪಾಕಿಸ್ತಾನದಲ್ಲಿರುವ ಯುಕೆ ಹೈಕಮಿಷನರ್ ಜೇನ್ ಮ್ಯಾರಿಯಟ್ ಜನವರಿ 10 ರಂದು ಪಿಒಕೆಯ ಮೀರಪುರಕ್ಕೆ ಭೇಟಿ ನೀಡಿದ್ದರು.
ಮ್ಯಾರಿಯಟ್ ಅವರ ಭೇಟಿಯು “ಅತ್ಯಂತ ಆಕ್ಷೇಪಾರ್ಹ” ಮತ್ತು “ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ” ಕ್ರಮವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಉಲ್ಲಂಘನೆಯ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್‌ಗೆ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುತ್ತವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಪ್ರದೇಶಕ್ಕೆ ತಮ್ಮ ಭೇಟಿಯ ನಂತರ, ಜೇನ್ ಮ್ಯಾರಿಯ​ಟ್ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು 70 ಪ್ರತಿಶತದಷ್ಟು ಬ್ರಿಟಿಷ್ ಪಾಕಿಸ್ತಾನಿಯರು ಮೀರಪುರ ಮೂಲದವರು ಎಂದು ಹೇಳಿದರು.
“ಅಮೆರಿಕ ಮತ್ತು ಪಾಕಿಸ್ತಾನದ ಜನರ ಹೃದಯದ ಹೃದಯವಾಗಿರುವ ಮೀರಪುರದಿಂದ ಸಲಾಮ್! 70% ಬ್ರಿಟಿಷ್ ಪಾಕಿಸ್ತಾನಿ ಬೇರುಗಳು ಮೀರ್‌ಪುರದಿಂದ ಬಂದಿವೆ, ಈ ಸಮುದಾಯದ ಹಿತಾಸಕ್ತಿಗಳಿಗಾಗಿ ನಮ್ಮ ಕೆಲಸವು ನಿರ್ಣಾಯಕವಾಗಿದೆ. ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು!” ಎಂದು ಬ್ರಿಟಿಷ್ ರಾಯಭಾರಿ ಹೇಳಿದ್ದಾರೆ.
ಈ ಭೇಟಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಬ್ರಿಟನ್​ ಸರ್ಕಾರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ “ತನ್ನ ಪ್ರತಿನಿಧಿಗಳನ್ನು ಕಳುಹಿಸಿದೆ” ಎಂಬುದು “ನಾಚಿಕೆಗೇಡಿನ ಸಂಗತಿ” ಎಂದು ಅವರು ಹೇಳಿದ್ದಾರೆ. ಜೇನ್ ಮ್ಯಾರಿಯಟ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೆಲವು ಬಳಕೆದಾರರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು ಒತ್ತಾಯಿಸಿದ್ದಾರೆ.
ಅಕ್ಟೋಬರ್ 2023 ರಲ್ಲಿ ಪಾಕಿಸ್ತಾನದ ಅಮೆರಿಕ ರಾಯಭಾರಿ ಡೇವಿಡ್ ಬ್ಲೋಮ್ ಅವರು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಭೇಟಿ ನೀಡಿದಾಗ ಇದೇ ರೀತಿಯ ವಿವಾದ ಉಂಟಾಗಿತ್ತು. . ನಂತರ, ಕೇಂದ್ರ ಸರ್ಕಾರವು ಅಮೆರಿಕ ಅಧಿಕಾರಿಗಳ ಈ ಕುರಿತು ತಕರಾರು ವ್ಯಕ್ತಪಡಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಪ್ರದೇಶವು “ಭಾರತದ ಅವಿಭಾಜ್ಯ ಅಂಗ” ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿತ್ತು. ಪಿಒಕೆಯನ್ನು ಭಾರತದ ಅವಿಭಾಜ್ಯ ಅಂಗ ಎಂದೇ ಪರಿಗಣಿಸುವುದರಿಂದ ಇತರೆ ದೇಶಗಳ ರಾಯಭಾರಿಗಳು, ಮುಖ್ಯಸ್ಥರು ಅಲ್ಲಿ ಭೇಟಿ ನೀಡುವುದಕ್ಕೆ ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತ ಬಂದಿದೆ.
ನವದೆಹಲಿ:ಪಾಕಿಸ್ತಾನದಲ್ಲಿನ ಬ್ರಿಟಿಷ್ ರಾಯಭಾರಿಯವರು ಇತ್ತೀಚೆಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಭೇಟಿ ನೀಡಿರುವುದಕ್ಕೆ ಕೇಂದ್ರ ಸರ್ಕಾರ ಶನಿವಾರ ಆಕ್ಷೇಪ ವ್ಯಕ್ತಪಡಿಸಿದೆ.
ಪಾಕಿಸ್ತಾನದಲ್ಲಿರುವ ಯುಕೆ ಹೈಕಮಿಷನರ್ ಜೇನ್ ಮ್ಯಾರಿಯಟ್ ಜನವರಿ 10 ರಂದು ಪಿಒಕೆಯ ಮೀರಪುರಕ್ಕೆ ಭೇಟಿ ನೀಡಿದ್ದರು.
ಮ್ಯಾರಿಯಟ್ ಅವರ ಭೇಟಿಯು “ಅತ್ಯಂತ ಆಕ್ಷೇಪಾರ್ಹ” ಮತ್ತು “ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುವ” ಕ್ರಮವಾಗಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಉಲ್ಲಂಘನೆಯ ಕುರಿತು ವಿದೇಶಾಂಗ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಅವರು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್‌ಗೆ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿದ್ದಾರೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
“ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಮತ್ತು ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುತ್ತವೆ” ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಈ ಪ್ರದೇಶಕ್ಕೆ ತಮ್ಮ ಭೇಟಿಯ ನಂತರ, ಜೇನ್ ಮ್ಯಾರಿಯ​ಟ್ ಅವರು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ಮತ್ತು 70 ಪ್ರತಿಶತದಷ್ಟು ಬ್ರಿಟಿಷ್ ಪಾಕಿಸ್ತಾನಿಯರು ಮೀರಪುರ ಮೂಲದವರು ಎಂದು ಹೇಳಿದರು.
“ಅಮೆರಿಕ ಮತ್ತು ಪಾಕಿಸ್ತಾನದ ಜನರ ಹೃದಯದ ಹೃದಯವಾಗಿರುವ ಮೀರಪುರದಿಂದ ಸಲಾಮ್! 70% ಬ್ರಿಟಿಷ್ ಪಾಕಿಸ್ತಾನಿ ಬೇರುಗಳು ಮೀರ್‌ಪುರದಿಂದ ಬಂದಿವೆ, ಈ ಸಮುದಾಯದ ಹಿತಾಸಕ್ತಿಗಳಿಗಾಗಿ ನಮ್ಮ ಕೆಲಸವು ನಿರ್ಣಾಯಕವಾಗಿದೆ. ನಿಮ್ಮ ಆತಿಥ್ಯಕ್ಕೆ ಧನ್ಯವಾದಗಳು!” ಎಂದು ಬ್ರಿಟಿಷ್ ರಾಯಭಾರಿ ಹೇಳಿದ್ದಾರೆ.
ಈ ಭೇಟಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಬ್ರಿಟನ್​ ಸರ್ಕಾರವು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ “ತನ್ನ ಪ್ರತಿನಿಧಿಗಳನ್ನು ಕಳುಹಿಸಿದೆ” ಎಂಬುದು “ನಾಚಿಕೆಗೇಡಿನ ಸಂಗತಿ” ಎಂದು ಅವರು ಹೇಳಿದ್ದಾರೆ. ಜೇನ್ ಮ್ಯಾರಿಯಟ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೆಲವು ಬಳಕೆದಾರರು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರನ್ನು ಒತ್ತಾಯಿಸಿದ್ದಾರೆ.
ಅಕ್ಟೋಬರ್ 2023 ರಲ್ಲಿ ಪಾಕಿಸ್ತಾನದ ಅಮೆರಿಕ ರಾಯಭಾರಿ ಡೇವಿಡ್ ಬ್ಲೋಮ್ ಅವರು ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಭೇಟಿ ನೀಡಿದಾಗ ಇದೇ ರೀತಿಯ ವಿವಾದ ಉಂಟಾಗಿತ್ತು. . ನಂತರ, ಕೇಂದ್ರ ಸರ್ಕಾರವು ಅಮೆರಿಕ ಅಧಿಕಾರಿಗಳ ಈ ಕುರಿತು ತಕರಾರು ವ್ಯಕ್ತಪಡಿಸಿತ್ತು. ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಪ್ರದೇಶವು “ಭಾರತದ ಅವಿಭಾಜ್ಯ ಅಂಗ” ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿತ್ತು. ಪಿಒಕೆಯನ್ನು ಭಾರತದ ಅವಿಭಾಜ್ಯ ಅಂಗ ಎಂದೇ ಪರಿಗಣಿಸುವುದರಿಂದ ಇತರೆ ದೇಶಗಳ ರಾಯಭಾರಿಗಳು, ಮುಖ್ಯಸ್ಥರು ಅಲ್ಲಿ ಭೇಟಿ ನೀಡುವುದಕ್ಕೆ ಭಾರತ ಸರ್ಕಾರ ಆಕ್ಷೇಪ ವ್ಯಕ್ತಪಡಿಸುತ್ತ ಬಂದಿದೆ.

ಅಯೋಧ್ಯೆ ಸಂಬಂಧಿತ ಮತ್ತೊಂದು ಷೇರು: ಎರಡೇ ದಿನಗಳಲ್ಲಿ ಶೇಕಡಾ 37.6 ಹೆಚ್ಚಳ

ರಾಮ ಮಂದಿರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿ: ಉದ್ಧವ್ ಠಾಕ್ರೆ ಆಗ್ರಹ

ರಾಮ ಮಂದಿರ ಉದ್ಘಾಟನೆ: ಹಿಂದೂ ಅಧಿಕಾರಿಗಳಿಗೆ ವಿಶೇಷ ರಜೆ ನೀಡಿದ ಮಾರಿಷಸ್​ ಸರ್ಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven + two =
Remember me
