ನವದೆಹಲಿ: ಕಾರ್ವಿುಕರ ಸಂಹಿತೆಗೆ ಮೂರು ಕಾನೂನು ಸೇರಿಸುವ ಪ್ರಸ್ತಾವನೆಗೆ ಪ್ರಧಾನಿ ನೇಂದ್ರ ಮೋದಿ ನೇತೃತ್ವದಲ್ಲಿ ಶನಿವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಇದು ಮುಂದಿನ ಸೋಮವಾರದಿಂದ ಆರಂಭವಾಗಲಿರುವ ಮುಂಗಾರು ಅಧಿವೇಶನದಲ್ಲಿ ಮಂಡನೆಯಾಗಲಿದೆ.
ಕಾರ್ವಿುಕರಿಗೆ ಸಾಮಾಜಿಕ ಭದ್ರತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಹಾಗೂ ಕೈಗಾರಿಕಾ ಸಂಬಂಧ ಕುರಿತ ಹೊಸ ಕಾನೂನುಗಳು ಇವಾಗಿವೆ. ಕಾರ್ವಿುಕರಿಗೆ ಸಂಬಂಧಿಸಿದ 44 ಕಾನೂನುಗಳನ್ನು ನಾಲ್ಕು ಸಂಹಿತೆ (ಕೋಡ್)ಗಳಲ್ಲಿ ಕ್ರೋಡೀಕರಿಸಿದ ಮಸೂದೆಯನ್ನು ಕಳೆದ ವರ್ಷ ಜೂನ್​ನಲ್ಲಿ ಸರ್ಕಾರ ಮಂಡಿಸಿತ್ತು. ಆಗ ಈ ಮೂರು ಅಂಶಗಳನ್ನು ಸಂಸತ್ತಿನ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಪ್ಪಿಸಲಾಗಿತ್ತು. ಹೀಗಾಗಿ ಪರಿಷ್ಕರಿಸಲಾದ ಈ ಮೂರು ಸಂಹಿತೆಗಳನ್ನು ಸಂಪುಟ ಅನುಮೋದಿಸಿದೆ.
ಇದನ್ನೂ ಓದಿ:ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ ಜಮೀರ್​ ಅಹ್ಮದ್​ ದೂರು
ಸಾಮಾಜಿಕ ಭದ್ರತೆ ಸಂಹಿತೆಯು ಭವಿಷ್ಯ ನಿಧಿ, ವಿಮೆ, ಮಹಿಳಾ ಉದ್ಯೋಗಿಗಳಿಗೆ ಮಾತೃತ್ವ ಸಮಯದ ಸೌಕರ್ಯಗಳನ್ನು ಒಳಗೊಂಡಿದೆ. ಔದ್ಯೋಗಿಕ ಸುರಕ್ಷತೆಯಲ್ಲಿ ಕಾರ್ಖಾನೆಯಲ್ಲಿ ಅಳವಡಿಸಬೇಕಾದ ಸುರಕ್ಷತೆ, ಕಾರ್ವಿುಕ ಕಲ್ಯಾಣ ಕಾನೂನುಗಳನ್ನು ವಿವರಿಸಲಾಗಿದೆ. ಕೈಗಾರಿಕಾ ಸಂಬಂಧದ ಸಂಹಿತೆಯಲ್ಲಿ ಕೈಗಾರಿಕಾ ವಿವಾದ, ಕಾರ್ವಿುಕ ಒಕ್ಕೂಟಕ್ಕೆ ಸಂಬಂಧಿಸಿ ಅಂಶಗಳು ಇವೆ.
ವಿಡಿಯೋ: ಆನ್​ಲೈನ್​ ತರಗತಿ ನಡೆಯುವಾಗಲೇ ಬಂದರು ದರೋಡೆಕೋರರು! ವಿದ್ಯಾರ್ಥಿಗಳು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 7 =
Remember me
