ನವದೆಹಲಿ:ಭಾರತದಿಂದ ಭೂತಾನ್‌ಗೆ ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆ ಹಾಗೂ ಇಂಧನ ಕ್ಷೇತ್ರ ಸುಧಾರಣೆ ಕುರಿತು ಭಾರತ ಮತ್ತು ಭೂತಾನ್ ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಇದನ್ನೂ ಓದಿ:ವಿಶ್ವಾಸ ಮತ ಸಾಬೀತುಪಡಿಸಿದ ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು ಪೆಟ್ರೋಲಿಯಂ, ತೈಲ, ಲೂಬ್ರಿಕಂಟ್‌ಗಳು ಮತ್ತು ಸಂಬಂಧಿತ ಉತ್ಪನ್ನಗಳ ಸಾಮಾನ್ಯ ಪೂರೈಕೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಮತ್ತು ಭೂತಾನ್‌ನ ರಾಯಲ್ ಸರ್ಕಾರದ ನಡುವಿನ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ತನ್ನ ಅನುಮೋದನೆಯನ್ನು ನೀಡಿದೆ.
ಭಾರತದಿಂದ ಭೂತಾನ್‌ಗೆ ಯಾವುದೇ ಆದಾಯ ಲೆಕ್ಕಿಸದೆ ವಿಶೇಷವಾಗಿ ಹೈಡ್ರೋಕಾರ್ಬನ್ ವಲಯದಲ್ಲಿ ಸುಧಾರಿತ ಆರ್ಥಿಕ ಮತ್ತು ವಾಣಿಜ್ಯ ಸಂಪರ್ಕಗಳೊಂದಿಗೆ ಭಾರತವು ಸರಬರಾಜು ಮಾಡುವ ಗುರಿಯನ್ನು ಇದು ಹೊಂದಿದೆ.
ಏಕೆಂದರೆ, ರಫ್ತುಗಳು ಆತ್ಮನಿರ್ಭರ ಭಾರತವನ್ನು ಸಾಕಾರಗೊಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಈ ತಿಳಿವಳಿಕೆ ಒಪ್ಪಂದವು ಸ್ವಾವಲಂಬಿ ಭಾರತಕ್ಕೆ ಒತ್ತು ನೀಡಲಿದೆ.
ಇಂಧನ ಕ್ಷೇತ್ರ ಸುಧಾರಣೆಗೆ ಒತ್ತು:ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣಾ ಕ್ರಮಗಳ ಕ್ಷೇತ್ರದಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ಭೂತಾನ್ ನಡುವೆ ತಿಳುವಳಿಕಾ ಒಪ್ಪಂದಕ್ಕೆ ಸಹಿ ಹಾಕಲು ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಇಂಧನ ದಕ್ಷತೆ ಮತ್ತು ಇಂಧನ ಸಂರಕ್ಷಣೆಗೆ ಸಂಬಂಧಿಸಿದ ಮಾಹಿತಿ, ದತ್ತಾಂಶ ಮತ್ತು ತಾಂತ್ರಿಕ ತಜ್ಞರ ವಿನಿಮಯವನ್ನು ಈ ಎಂಒಯು ಸಕ್ರಿಯಗೊಳಿಸುತ್ತದೆ.
ಆಹಾರ ಸುರಕ್ಷತೆ ಒಪ್ಪಂದ:ಇನ್ನು ಆಹಾರ ಮತ್ತು ಸುರಕ್ಷತೆ ಕ್ಷೇತ್ರದಲ್ಲಿ ಭಾರತ ಮತ್ತು ಭೂತಾನ್ ನಡುವೆ ಒಪ್ಪಂದಕ್ಕೆ ಸಹಿ ಹಾಕಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಎರಡೂ ದೇಶಗಳು ಉತ್ಪನ್ನಗಳನ್ನು ರಫ್ತು ಮಾಡುವಾಗ, ಎಫ್‌ಎಸ್‌ಎಸ್‌ಎಐ ಸೂಚಿಸಿದ ಅಗತ್ಯತೆಗಳ ಅನುಸರಣೆಯ ಪುರಾವೆಯಾಗಿ ಬಿಎಫ್‌ಡಿಎ ನೀಡುವ ಆರೋಗ್ಯ ಪ್ರಮಾಣಪತ್ರ ನೀಡುವುದೂ ಸೇರಿದಂ ಯೆ ಅನುಸರಣೆ ವೆಚ್ಚವನ್ನು ಕಡಿಮೆ ಮಾಡಲು ಒಪ್ಪಂದ ನೆರವಾಗುತ್ತದೆ.
ಕಾರಿಡಾರ್‌ ನಿರ್ಮಾಣಕ್ಕೆ ಸಹಕಾರ:ಭಾರತ-ಮಧ್ಯಪ್ರಾಚ್ಯ ಯುರೋಪ್ ಆರ್ಥಿಕ ಕಾರಿಡಾರ್‌ನ ಸಬಲೀಕರಣ ಮತ್ತು ಕಾರ್ಯಾಚರಣೆಗೆ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸಹಕಾರಕ್ಕಾಗಿ ಅಂತರ-ಸರ್ಕಾರಿ ಚೌಕಟ್ಟಿನ ಒಪ್ಪಂದಕ್ಕೆ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರಗಳ ನಡುವಿನ ಉನ್ನತ ಮಟ್ಟದ ಭೇಟಿಯ ಸಂದರ್ಭ(13 ಫೆಬ್ರವರಿ 2024) ರಂದು ಸಹಿ ಹಾಕಲಾದ ಅಂತರ ಸರ್ಕಾರಿ ಚೌಕಟ್ಟಿನ ಒಪ್ಪಂದಕ್ಕೆ ಅನುಮೋದನೆಯನ್ನು ನೀಡಿತು.
ಸಹೋದರನೊಂದಿಗೆ ಕೌಟುಂಬಿಕ ಸಂಪರ್ಕ ಕಳೆದುಕೊಂಡ ಮಮತಾ! ಕಾರಣ ಇದೇ ನೋಡಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + three =
Remember me
