ನವದೆಹಲಿ:ದೇವಸ್ಥಾನದ ಅರ್ಚಕರ ನೇಮಕಾತಿಯಲ್ಲಿ “ಜಾತಿ ಆಧಾರಿತ ವಂಶಾವಳಿ” ಯಾವುದೇ ಪಾತ್ರವನ್ನು ವಹಿಸುವುದಿಲ್ಲ. ಧಾರ್ಮಿಕ ಗ್ರಂಥಗಳು ಮತ್ತು ಆಚರಣೆಗಳಲ್ಲಿ ಒಬ್ಬ ವ್ಯಕ್ತಿಯು ಎಷ್ಟು ಪರಿಣತನಾಗಿದ್ದಾನೆ ಎಂಬುದು ಅಂತಹ ನೇಮಕಾತಿಗಳಿಗೆ ಏಕೈಕ ಮಾನದಂಡ ಎಂದು ಮದ್ರಾಸ್ ಹೈಕೋರ್ಟ್ ಸೋಮವಾರ ತನ್ನ ಆದೇಶದಲ್ಲಿ ತಿಳಿಸಿದೆ.
ಸೇಲಂನ ಶ್ರೀ ಸುಗವನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅರ್ಚಕ / ಸ್ಥಾನಿಗ (ದೇವಸ್ಥಾನದ ಅರ್ಚಕ) ಹುದ್ದೆಗೆ ಉದ್ಯೋಗ ಘೋಷಣೆಯನ್ನು ಪ್ರಶ್ನಿಸಿ ಮುತ್ತು ಸುಬ್ರಮಣ್ಯ ಗುರುಕಲ್ ಎಂಬವರು 2018ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ನೇಮಕಾತಿಗಳು ದೇವಸ್ಥಾನವು ಅನುಸರಿಸುವ ನಿರ್ದಿಷ್ಟ ಆಗಮ (ದೇವಸ್ಥಾನದ ಆಚರಣೆಗಳನ್ನು ನಿಯಂತ್ರಿಸುವ ನಿಯಮಗಳು) ತತ್ವಗಳನ್ನು ಅನುಸರಿಸಬೇಕು ಮತ್ತು ಅರ್ಚಕ ಸ್ಥಾನಕ್ಕೆ ಅರ್ಜಿದಾರರ ಮತ್ತು ಇತರರ ಆನುವಂಶಿಕ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದರು.
ಇದನ್ನೂ ಓದಿ:ತಿರುಪತಿ ದೇವಸ್ಥಾನದಲ್ಲೇ ಕೃತಿ ಸನೋನ್​ಗೆ ಮುತ್ತಿಟ್ಟ ನಿರ್ದೇಶಕ! ಹೋಟೆಲ್ ರೂಂ ಬುಕ್ ಮಾಡಿ ಎಂದ ಅರ್ಚಕ…
ದೇವಸ್ಥಾನದ ಅರ್ಚಕರ ನೇಮಕವನ್ನು ಆಗಮ ನಿರ್ವಹಿಸುತ್ತದೆ ಎಂದು ನ್ಯಾಯಮೂರ್ತಿ ಎನ್ ಆನಂದ್ ವೆಂಕಟೇಶ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಆದಾಗ್ಯೂ, ಹಿಂದಿನ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿ, ಅರ್ಚಕರ ಜಾತಿಯು ಧರ್ಮದ ಅವಿಭಾಜ್ಯ ಅಂಗವಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಯಾವುದೇ ವ್ಯಕ್ತಿಯು, ಜಾತಿ ಅಥವಾ ಮತವನ್ನು ಲೆಕ್ಕಿಸದೆ, ಅಗತ್ಯ ಧಾರ್ಮಿಕ ಧರ್ಮಗ್ರಂಥಗಳು ಮತ್ತು ಆಚರಣೆಗಳಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ಹೊಂದಿದ್ದರೆ ಅವರನ್ನು ಅರ್ಚಕರಾಗಿ ನೇಮಿಸಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
“ಸುಪ್ರೀಂ ಕೋರ್ಟ್ ಧಾರ್ಮಿಕ ಭಾಗ ಮತ್ತು ಜಾತ್ಯತೀತ ಭಾಗಗಳ ನಡುವಿನ ವ್ಯತ್ಯಾಸವನ್ನು ಗುರುತಿಸಿದ್ದು ಅರ್ಚಕನ ಸೇವೆಯು ಧರ್ಮದ ಜಾತ್ಯತೀತ ಭಾಗವಾಗಿದೆ. ಧಾರ್ಮಿಕ ಸೇವೆಯ ಪ್ರದರ್ಶನವು ಧರ್ಮದ ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯಪಟ್ಟಿದೆ. ಆದ್ದರಿಂದ, ಧಾರ್ಮಿಕ ಸೇವೆಯ ಕಾರ್ಯನಿರ್ವಹಣೆಯ ವಿಷಯಕ್ಕೆ ಬಂದಾಗ ಮಾತ್ರ ಆಗಮಗಳು ಒದಗಿಸುವ ಪ್ರಿಸ್ಕ್ರಿಪ್ಷನ್ ಮಹತ್ವವನ್ನು ಪಡೆಯುತ್ತದೆ. ಇದರ ಪರಿಣಾಮವಾಗಿ, ಯಾವುದೇ ಜಾತಿ ಅಥವಾ ಧರ್ಮಕ್ಕೆ ಸೇರಿದ ಯಾವುದೇ ವ್ಯಕ್ತಿಯು ದೇವಾಲಯದಲ್ಲಿ ನಿರ್ವಹಿಸಬೇಕಾದ ಆಗಮಗಳು ಮತ್ತು ಆಚರಣೆಗಳಲ್ಲಿ ಪರಿಣಿತ ಮತ್ತು ನಿಪುಣ ವ್ಯಕ್ತಿಯಾಗಿದ್ದರೆ ಅವರನ್ನು ಅರ್ಚಕರನ್ನಾಗಿ ನೇಮಿಸಬಹುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ:ಮೈಸೂರಲ್ಲಿ ಕೊರಗಜ್ಜ ದೈವದ ಹೆಸರಲ್ಲಿ ದಂಧೆ; ಕಾಣಿಕೆ ಹುಂಡಿಯನ್ನು ಮನೆಗೆ ಕೊಂಡೊಯ್ದ ಅರ್ಚಕ!
“… ಹೀಗೆ ಆಯ್ಕೆ ಮಾಡಿದ ವ್ಯಕ್ತಿಯು ಅವಶ್ಯಕತೆಗಳನ್ನು ಪೂರೈಸಿದರೆ, ಜಾತಿ ಹಾಗೂ ವಂಶಾವಳಿಯು ಅರ್ಚಕರ ನೇಮಕಾತಿಯಲ್ಲಿ ಯಾವುದೇ ಪಾತ್ರವನ್ನು ವಹಿಸುವುದಿಲ್ಲ ಎಂದು ಸಾಕಷ್ಟು ಬಾರಿ ಸ್ಪಷ್ಟಪಡಿಸಲಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.
2018ರಲ್ಲಿ ಸಲ್ಲಿಸಿದ ಅರ್ಜಿಯ ನಂತರ, ಹೈಕೋರ್ಟಿನ ಮೊದಲ ವಿಭಾಗೀಯ ಪೀಠವು 2022 ರಲ್ಲಿ ನಿವೃತ್ತ ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶ ಎಂ.ಚೊಕ್ಕಲಿಂಗಂ ನೇತೃತ್ವದ ಸಮಿತಿಯನ್ನು ರಚಿಸಿತ್ತು.
ಇದನ್ನೂ ಓದಿ:ಕಾರಿನಲ್ಲಿ ಹೊತ್ತೊಯ್ದು ಅರ್ಚಕನ ಮೇಲೆ ಹಲ್ಲೆ
ನಿರ್ದಿಷ್ಟ ದೇವಾಲಯಕ್ಕೆ ಅನುಸರಿಸಬೇಕಾದ ನಿರ್ದಿಷ್ಟ ಆಗಮದ ಬಗ್ಗೆ ಯಾವುದೇ ಸಂದೇಹವಿಲ್ಲದಿದ್ದರೆ, ಸಮಿತಿಯು ತನ್ನ ವರದಿಯನ್ನು ಸಲ್ಲಿಸುವ ಮೊದಲೇ ದೇವಾಲಯಗಳಲ್ಲಿ ನೇಮಕಾತಿಗಳು ಎಂದಿನಂತೆ ಮುಂದುವರಿಯಬಹುದು ಎಂದು ಹೈಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ. ಶ್ರೀ ಸುಗವನೇಶ್ವರ ಸ್ವಾಮಿ ದೇವಾಲಯದಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲು ಅದು ಅವಕಾಶ ನೀಡಿತು. ಹಾಗೂ ಅರ್ಜಿದಾರರು ದೇವಾಲಯದ ಅರ್ಚಕ ಹುದ್ದೆಗೆ ಅರ್ಜಿ ಸಲ್ಲಿಸಲು ಮುಕ್ತರಾಗಿದ್ದಾರೆ ಎಂದು ಹೇಳಿದೆ.(ಏಜೆನ್ಸೀಸ್)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × three =
Remember me
