ನವದೆಹಲಿ:ಬಳಕೆದಾರರ ಅಭಿರುಚಿಗಳು ಬದಲಾಗುತ್ತವೆ. ನೀವು ಕಾಲಕಾಲಕ್ಕೆ ಅವರ ಆದ್ಯತೆಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ಯೋಜನೆಗಳನ್ನು ಮಾಡಿದರೆ ಮಾತ್ರ ಯಾವುದೇ ವ್ಯವಹಾರವು ಹಿಟ್ ಆಗುತ್ತದೆ. ಅದಕ್ಕಾಗಿಯೇ ವ್ಯಾಪಾರದಲ್ಲಿರುವವರು ಕಾಲಕಾಲಕ್ಕೆ ಗ್ರಾಹಕರ ಮನಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಓಲಾ ಕ್ಯಾಬ್ಸ್‌ನ ಹೊಸ ಸಿಇಒ ಹೇಮಂತ್ ಭಕ್ಷಿ ಇತ್ತೀಚೆಗೆ ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಕ್ಯಾಬ್ ಚಾಲಕನ ಅವತಾರವನ್ನು ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ:ಶ್ರೀರಾಮ ಮಂದಿರ ವಿಚಾರ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಿ ಕಿರಿಕ್​ ಮಾಡಲು ಯತ್ನಿಸಿದ ಪಾಕ್​!
ಓಲಾ ಕ್ಯಾಬ್ಸ್‌ನ ಹೊಸ ಸಿಇಒ ಆಗಿ ಹೇಮಂತ್ ಭಕ್ಷಿ ಅವರನ್ನು ನೇಮಿಸಲಾಗಿದೆ. ಇದು ಇತ್ತೀಚೆಗೆ ಬಹಿರಂಗವಾಗಿದೆ. ಹಿಂದೆ ಅವರು ಇಂಡೋನೇಷ್ಯಾದ ಯುನಿಲಿವರ್ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಹಲವು ವರ್ಷಗಳಿಂದ ಈ ಹುದ್ದೆಯಲ್ಲಿದ್ದ ಓಲಾ ಸಹ ಸಂಸ್ಥಾಪಕ ಭವೇಶ್ ಅಗರ್ವಾಲ್ ಆ ಸ್ಥಾನದಿಂದ ಕೆಳಗಿಳಿದಿದ್ದಾರೆ. ಐಐಎಂ-ಅಹಮದಾಬಾದ್ ಮತ್ತು ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿ ಹೇಮಂತ್ ಭಕ್ಷಿ ನಾಲ್ಕು ತಿಂಗಳ ಹಿಂದೆ ಓಲಾಗೆ ಸೇರಿದ್ದಾರೆ.
ಓಲಾ ತ್ರೈಮಾಸಿಕ ಫಲಿತಾಂಶಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ಗುರುವಾರ ಮಾತನಾಡಿದ ಭಕ್ಷಿ, ತಾನು ಕ್ಯಾಬ್ ಡ್ರೈವರ್‌ನ ಪಾತ್ರವನ್ನೂ ವಹಿಸಿದ್ದೇನೆ ಎಂದು ಬಹಿರಂಗಪಡಿಸಿದರು. ವಾರಾಂತ್ಯದಲ್ಲಿ ರಾತ್ರಿ ಬೆಂಗಳೂರಿನ ಬೀದಿಗಳಲ್ಲಿ ಗ್ರಾಹಕರ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಕ್ಯಾಬ್ ಓಡಿಸಿದ್ದೇನೆ ಎಂದು ಹೇಳಿದರು.
ಅನುಭವದ ಮೂಲಕ ತಿಳಿದುಕೊಳ್ಳುವುದಕ್ಕಿಂತ ಮಿಗಿಲಾದದ್ದು ಮತ್ತೊಂದಿಲ್ಲ. ಅದಕ್ಕಾಗಿಯೇ ಕ್ಯಾಬ್​ ಡ್ರೈವರ್​ ಪಾತ್ರ ನಿರ್ವಹಿಸಿದ್ದೆ. ಹಿಂದೆ, ಉಬರ್ ಸಿಇಒ ದಾರಾ ಖೋಸ್ರೋಶಾಹಿ ಕೆಲವು ತಿಂಗಳುಗಳ ಕಾಲ ಉಬರ್ ಡ್ರೈವರ್ ಮತ್ತು ಡೆಲಿವರಿ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು.
ಮತ್ತೆ ಕೆರಳಿಸಿದ ಕೆನಡಾ: ಆ ದೇಶದ ಚುನಾವಣೆಯಲ್ಲಿ ಭಾರತದ ಹಸ್ತಕ್ಷೇಪ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 15 =
Remember me
