ಚಂಡಿಗಢ್​:ಅಗೋಚರ ಶತ್ರು ಕರೊನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರು ವೈದ್ಯರು, ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ. ಇವರಿಗೆ ಸಾಥ್​ ನೀಡುತ್ತಿರುವವರು ಪೊಲೀಸರು ಮತ್ತು ಸ್ವಚ್ಛತಾ ಸಿಬ್ಬಂದಿ.
ಇವರ ಕಾರ್ಯಕ್ಕೆ ಅಭಿನಂದನೆ ರೂಪದಲ್ಲಿ ಹಲವು ಯೋಜನೆಗಳನ್ನು ಚಂಡಿಗಢ್​ ವಿಶ್ವವಿದ್ಯಾಲಯ ಘೋಷಿಸಿದೆ. ಇವರಿಗೆ ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ಶೇ.10 ಸಿಟುಗಳನ್ನು ಮೀಸಲಿಟ್ಟಿದೆ. ಕೋರ್ಸ್​ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಐದು ಕೋಟಿ ರೂ. ಮೊತ್ತದ ಸ್ಕಾಲರ್​ಶಿಪ್​ ಯೋಜನೆಯನ್ನು ಪ್ರಕಟಿಸಿದೆ.
ವಿಶೇಷವೆಂದರೆ ಮಾಧ್ಯಮದ ಸಿಬ್ಬಂದಿಯನ್ನೂ ಕರೊನಾ ವಾರಿಯರ್ಸ್​ ಎಂದು ವಿವಿ ಪರಿಗಣಿಸಿದೆ ಹಾಗೂ ಮೇಲಿನ ಸೌಲಭ್ಯಗಳಿಗೆ ಅವರೂ ಭಾಜನರೆಂದು ಹೇಳಿದೆ.
ಈ ಯೋಜನೆಯಡಿಯಲ್ಲಿ ವಿವಿ ಮೂಲಕ ನಡೆಸಲಾಗುವ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್​ಗಳಲ್ಲಿ ಶೇ.10 ಸೀಟುಗಳನ್ನು ಮೀಸಲಿಡಲಾಗುತ್ತದೆ. ಈ ಯೋಜನೆಯನ್ವಯ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕೋರ್ಸ್​ ಅವಧಿಯುದ್ದಕ್ಕೂ ಶುಲ್ಕದಲ್ಲಿ ಶೇ. 10 ವಿನಾಯ್ತಿ ನೀಡಲಾಗುತ್ತದೆ ಎಂದು ವಿವಿ ಕುಲಪತಿ ಸತ್ನಾಮ್​ ಸಂಧು ಮಾಹಿತಿ ನೀಡಿದ್ದಾರೆ.
ಕರೊನಾ ವಾರಿಯರ್ಸ್​ಗೆ ಇಡೀ ದೇಶವೇ ಆಭಾರಿಯಾಗಬೇಕಿದೆ. ಅವರ ಕುಟುಂಬದ ಹಾಗೂ ಅವರ ಮಕ್ಕಳಿಗಾಗಿ ವಿವಿ ಸ್ಕಾಲರ್​ಶಿಪ್​ ಯೋಜನೆ ಘೋಷಿಸುವ ಮೂಲಕ ಸಣ್ಣ ಸಹಾಯ ನೀಡುತ್ತಿದೆ ಎಂದು ಸತ್ನಾಮ್​ ತಿಳಿಸಿದ್ದಾರೆ.
ಇದಲ್ಲದೇ, ವಿವಿ ಮೂಲಕ ಸುತ್ತಲಿನ ಹಳ್ಳಿಗಳ 200ಕ್ಕೂ ಅಧಿಕ ಜನರಿಗೆ ನಿತ್ಯವೂ ಆಹಾರ ಪೂರೈಸಲಾಗುತ್ತಿದೆ. ವಿವಿ 3,500 ಲೀಟರ್​ ಸ್ಯಾನಿಟೈಸರ್​ಅನ್ನು ವಿವಿಧ ಆಸ್ಪತ್ರೆಗಳಿಗೆ ವಿತರಿಸಿದೆ. ಮೊಹಾಲಿಯ ಜಿಲ್ಲಾಡಳಿತಕ್ಕಾಗಿ 1,000 ಹಾಸಿಗೆ ಸಾಮರ್ಥ್ಯದ ಐಸೋಲೇಷನ್​ ಕೇಂದ್ರದ ವ್ಯವಸ್ಥೆ ಸ್ಥಾಪಿಸಿಕೊಟ್ಟಿದೆ ಎಂದು ಹೇಳಿದರು.
ಅಬ್ಬಾ… ಪಿಯುಸಿ ಪರೀಕ್ಷೆ ನಡೆಸಲ್ವಂತೆ, ನಿಟ್ಟುಸಿರುಬಿಟ್ಟ ವಿದ್ಯಾರ್ಥಿಗಳು, ಆನ್​ಲೈನ್​ ಅಭಿಯಾನಕ್ಕೆ ಮಣಿದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + one =
Remember me
