ಉತ್ತರಾಖಂಡ: ಗರ್ವಾಲ್ ಹಿಮಾಲಯ ಪ್ರದೇಶದಲ್ಲಿ ನೆಲೆಗೊಂಡಿರುವ ಚಾರ್ ಧಾಮ್‌ಗಳಿಗೆ ಭೇಟಿ ನೀಡಿದ ಯಾತ್ರಾರ್ಥಿಗಳ ಸಂಖ್ಯೆ ಮೊದಲ ಬಾರಿಗೆ 50 ಲಕ್ಷದ ಗಡಿ ದಾಟಿದೆ.
ವಿಶ್ವವಿಖ್ಯಾತ ಚಾರ್ ಧಾಮ್‌ಗಳಾದ ಬದರಿನಾಥ್, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿಗೆ ಭೇಟಿ ನೀಡಲು ದೇಶ ಮತ್ತು ವಿದೇಶಗಳಿಂದ ದಾಖಲೆ ಸಂಖ್ಯೆಯ ಯಾತ್ರಾರ್ಥಿಗಳು ಇಲ್ಲಿಗೆ ಆಗಮಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇಲ್ಲಿಯವರೆಗೆ 50 ಲಕ್ಷ ಯಾತ್ರಾರ್ಥಿಗಳು ಯಾತ್ರೆಗೆ ಆಗಮಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ 16 ರವರೆಗೆ ಚಾರ್ ಧಾಮ್‌ಗೆ ಭೇಟಿ ನೀಡಿದ ಯಾತ್ರಿಕರ ಸಂಖ್ಯೆ 50 ಲಕ್ಷ ದಾಟಿದೆ. ಇದರೊಂದಿಗೆ ಸುಮಾರು 5.41 ಲಕ್ಷ ವಾಹನಗಳೂ ಚಾರ್ ಧಾಮ್ ತಲುಪಿವೆ. ಏಪ್ರಿಲ್-ಮೇನಲ್ಲಿ ಯಾತ್ರೆ ಪ್ರಾರಂಭವಾದ ನಂತರ, ಸುಮಾರು 17.08 ಲಕ್ಷ ಯಾತ್ರಿಕರು ಕೇದಾರನಾಥ ಧಾಮವನ್ನು ತಲುಪಿದ್ದಾರೆ, 15.90 ಲಕ್ಷ ಬದರಿನಾಥ ಧಾಮ, 8.46 ಲಕ್ಷ ಗಂಗೋತ್ರಿ ಮತ್ತು 6.94 ಲಕ್ಷ ಯಮುನೋತ್ರಿಗೆ ತಲುಪಿದ್ದಾರೆ.ಇದಲ್ಲದೆ, 1.77 ಲಕ್ಷಕ್ಕೂ ಹೆಚ್ಚು ಭಕ್ತರು ಹೇಮಕುಂಡ್ ಸಾಹಿಬ್‌ಗೆ ಭೇಟಿ ನೀಡಿದ್ದಾರೆ. ಅಕ್ಟೋಬರ್ 11 ರಂದು ಹೇಮಕುಂಡ್ ಸಾಹಿಬ್‌ನ ಪೋರ್ಟಲ್‌ಗಳನ್ನು ಚಳಿಗಾಲಕ್ಕಾಗಿ ಮುಚ್ಚಲಾಯಿತು.
ಅಂದಹಾಗೆ ಕಳೆದ ವರ್ಷ 47 ಲಕ್ಷ ಭಕ್ತರು ಚಾರ್ ಧಾಮ್‌ಗೆ ಭೇಟಿ ನೀಡಿದ್ದರು. ಉತ್ತರಾಖಂಡ್ ಪೊಲೀಸ್ ಮಹಾನಿರ್ದೇಶಕ ಅಶೋಕ್ ಕುಮಾರ್, ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಚಾರ್ ಧಾಮ್ ಯಾತ್ರೆಗೆ ರಾಜ್ಯ ಪೊಲೀಸರು ಪ್ರತಿ ಹಂತದಲ್ಲೂ ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದಾರೆ ಎಂದು ಹೇಳಿದರು.
ಗರ್ವಾಲ್ ಹಿಮಾಲಯದಲ್ಲಿರುವ ಚಾರ್ ಧಾಮ್ ಅನ್ನು ಪ್ರತಿ ವರ್ಷ ಅಕ್ಟೋಬರ್-ನವೆಂಬರ್‌ನಲ್ಲಿ ಅಂದರೆ ದೀಪಾವಳಿಯ ನಂತರ ಚಳಿಗಾಲದ ಅವಧಿಯಲ್ಲಿ ಭಕ್ತರಿಗೆ ಮುಚ್ಚಲಾಗುತ್ತದೆ. ಏಪ್ರಿಲ್-ಮೇನಲ್ಲಿ ಆರು ತಿಂಗಳ ನಂತರ ಮತ್ತೆ ತೆರೆಯಲಾಗುತ್ತದೆ.
‘ಅರ್ಧದಷ್ಟು ಶಾಸಕರು ಬಿಟ್ಟು ಹೋಗುತ್ತಿದ್ದರು…’, ಮೋದಿ, ಅಮಿತ್ ಶಾ ಬಗ್ಗೆ ಅಶೋಕ್ ಗೆಹ್ಲೋಟ್ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
