ತಮಿಳುನಾಡು:ಶುಕ್ರವಾರ (ಏ.12) ತಮಿಳುನಾಡಿನ ಬೃಹತ್ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಖಂಡಿತ ಭಾರತದ ಸಂವಿಧಾನವನ್ನು ಬದಲಾಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಜಯದ ಹಳಿ ಏರಲು ರಾಜಸ್ಥಾನ-ಪಂಜಾಬ್ ಫೈಟ್: ಒತ್ತಡದಲ್ಲಿ ಧವನ್ ಪಡೆ
ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್, “ದೇಶದ ಹಣಕಾಸು ವ್ಯವಸ್ಥೆಯ ಮೇಲೆ ಏಕಸ್ವಾಮ್ಯವನ್ನು ಹೊಂದಲು ಮಾತ್ರ ಅವರು ಕಾಳಜಿ ವಹಿಸುತ್ತಾರೆ. ಕೇಸರಿ ಪಕ್ಷದ ಸಂಸದರು ಕೇಂದ್ರದಲ್ಲಿ ಅಧಿಕಾರವನ್ನು ಉಳಿಸಿಕೊಂಡರೆ, ಅವರು ಸಂವಿಧಾನವನ್ನು ಬದಲಾಯಿಸಲಿದ್ದಾರೆ” ಎಂದು ಬಹಿರಂಗವಾಗಿ ಆರೋಪಿಸಿದರು. “ಈ ಹಿಂದೆ ಪ್ರಪಂಚದ ಇತರೆ ಭಾಗಗಳು ಭಾರತವನ್ನು ಪ್ರಜಾಪ್ರಭುತ್ವದ ದಾರಿದೀಪವಾಗಿ ನೋಡುತ್ತಿದ್ದವು. ಆದರೆ ಈಗ ಭಾರತದ ಪ್ರಜಾಪ್ರಭುತ್ವವು ಇನ್ನು ಮುಂದೆ ಪ್ರಜಾಪ್ರಭುತ್ವವಲ್ಲ ಎಂದು ಅಭಿಪ್ರಾಯಪಟ್ಟಿದೆ” ಎಂದರು.
“ಮೋದಿ ಕಾಳಜಿ ವಹಿಸುವ ಏಕೈಕ ವಿಷಯವೆಂದರೆ, ಈ ದೇಶದ ಹಣಕಾಸು ಮತ್ತು ಸಂವಹನ ವ್ಯವಸ್ಥೆ ಮೇಲೆ ಏಕಸ್ವಾಮ್ಯವನ್ನು ಹೊಂದಿರುವುದು. ಇಂದು ರಾಷ್ಟ್ರವು ಸೈದ್ಧಾಂತಿಕ ಹೋರಾಟವನ್ನು ಎದುರಿಸುತ್ತಿದೆ” ಎಂದರು.
ಇದನ್ನೂ ಓದಿ:ಜನರಿಂದಲೇ 34 ಕೋಟಿ ರೂ. ಸಂಗ್ರಹಿಸಿ ಅಬ್ದುಲ್ ರಹೀಮ್​ಗೆ ಮರಣ ದಂಡನೆ ತಪ್ಪಿಸಿದ ಕೇರಳಿಗರು! ಸಿಎಂ ಟ್ವೀಟ್
“ಒಂದು ಕಡೆ ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ಸಿದ್ಧಾಂತ, ಸುಧಾರಣಾವಾದಿ ನಾಯಕ ಪೆರಿಯಾರ್ ಇ.ವಿ ರಾಮಸಾಮಿಯಂತಹ ಪ್ರತಿಮೆಗಳಿಂದ ಪ್ರತಿಪಾದಿಸಲ್ಪಟ್ಟಿದೆ ಮತ್ತು ಇನ್ನೊಂದು ಬದಿಯಲ್ಲಿ ಆರೆಸ್ಸೆಸ್ ಮತ್ತು ಪಿಎಂ ನರೇಂದ್ರ ಮೋದಿ ಹಾಗೂ ಅವರ ಸರ್ಕಾರದ ಕಲ್ಪನೆಗಳು. ಮೋದಿ ಮತ್ತು ಅವರ ಪಕ್ಷವು ಒಂದು ರಾಷ್ಟ್ರ, ಒಂದು ನಾಯಕ ಮತ್ತು ಒಂದು ಭಾಷೆ ಸಿದ್ಧಾಂತಕ್ಕಾಗಿ ಮಾತ್ರ ನಿಂತಿದೆ” ಎಂದು ಆರೋಪಿಸಿದರು,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಜನರಿಂದಲೇ 34 ಕೋಟಿ ರೂ. ಸಂಗ್ರಹಿಸಿ ಅಬ್ದುಲ್ ರಹೀಮ್​ಗೆ ಮರಣ ದಂಡನೆ ತಪ್ಪಿಸಿದ ಕೇರಳಿಗರು! ಸಿಎಂ ಟ್ವೀಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − one =
Remember me
