ನವದೆಹಲಿ:ಕರೊನಾ ವೈರಸ್​ ದೇಶದಲ್ಲಿ ಯಮರೂಪಿಯಾಗಿ ಕಾಡಲಾರಂಭಿಸಿದೆ. ವೈರಸ್​ ಬಗ್ಗೆ ಅನೇಕರು ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸುತ್ತಿದ್ದು, ಮಾಹಿತಿ ನೀಡುತ್ತಿದ್ದರೆ ಇನ್ನು ಕೆಲವರು ಸುಳ್ಳು ಸುದ್ದಿಗಳನ್ನು ಸೃಷ್ಟಿ ಮಾಡಿ ಜನರಲ್ಲಿ ಭಯವನ್ನು ಹೆಚ್ಚಿಸುತ್ತಿದ್ದಾರೆ. ಇಂತಹ ಸಮಯದಲ್ಲಿ ಪ್ರಸಿದ್ಧ ವೈದ್ಯಕೀಯ ಸಂಸ್ಥೆಯಾಗಿರುವ ಎಐಐಎಮ್​ಎಸ್​ ಕರೊನಾ ವೈರಸ್​ ಕುರಿತಾಗಿ ಕೆಲ ಮಾಹಿತಿಯನ್ನು ನೀಡಿದೆ.
ಮಾಂಸ ತಿನ್ನುವುದರಿಂದ ಕರೊನಾ ವೈರಸ್​ ಹರಡುತ್ತದೆ ಎನ್ನುವ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಇದೇ ಕಾರಣದಿಂದಾಗಿ ಅನೇಕರು ತಾವು ಸಾಕಿದ್ದ ಕೊಳಿಗಳನ್ನು ಸಾಯಿಸಿ ಕರೊನಾ ತಡೆಗಟ್ಟುತ್ತಿದ್ದೇನೆ ಎನ್ನುವ ಧನ್ಯ ಭಾವದಲ್ಲಿದ್ದರು. ಆದರೆ ಮಾಂಸ ಸೇವನೆಯಿಂದ ಕರೊನಾ ಬರುವುದಿಲ್ಲ ಎಂದು ಎಐಐಎಮ್​ಎಸ್​ನ ನಿರ್ದೇಶಕರಾಗಿರುವ ಡಾ.ರಣದೀಪ್​ ಗಲೇರಿಯಾ ತಿಳಿಸಿದ್ದಾರೆ. ಯಾವುದೇ ಮಾಂಸವನ್ನಾದರೂ ಬೇಯಿಸಿದ ನಂತರ ಅದರಲ್ಲಿ ವೈರಸ್​ ಉಳಿದುಕೊಳ್ಳುವುದಿಲ್ಲ. ಹಾಗಾಗಿ ಅದರಿಂದ ವೈರಸ್​ ಹರಡುವ ಸಾಧ್ಯತೆ ಇಲ್ಲ ಎಂದು ಅವರು ತಿಳಿಸಿದ್ದಾರೆ.
ತಾಪಮಾನ ಹೆಚ್ಚಿರುವ ದೇಶಗಳಲ್ಲಿ ಕರೊನಾ ವೈರಸ್​ ಹೆಚ್ಚು ಪರಿಣಾಮ ಬೀರುವುದಿಲ್ಲ. ಯುರೋಪಿಯನ್​ ದೇಶಗಳಲ್ಲಿ ತಾಪಮಾನ ಕಡಿಮೆ ಇರುವುದರಿಂದ ಅಲ್ಲಿ ಹೆಚ್ಚಿನ ಪರಿಣಾಮ ಕಾಣಿಸುತ್ತಿದೆ. ಸಿಂಗಾಪುರದಲ್ಲಿ ತಾಪಮಾನ ಹೆಚ್ಚಿರುವುದರಿಂದ ಅಲ್ಲಿನ ಕಡಿಮೆ ಪರಿಣಾಮವನ್ನು ನೀವು ಗಮನಿಸಬಹುದು ಎಂದು ಅವರು ತಿಳಿಸಿದ್ದಾರೆ.
ಮದ್ಯಪಾನದಿಂದ ಕರೊನಾ ತಡೆಯಬಹುದು ಎನ್ನುವುದು ಸುಳ್ಳು. ಹಾಗೆಯೇ ಲವಂಗ ತಿನ್ನುವುದರಿಂದ ಕರೊನಾ ತಡೆಗಟ್ಟಬಹುದು ಎನ್ನುವುದೂ ಸಹ ಒಂದು ಸುಳ್ಳು ಸುದ್ದಿ ಎಂದು ವೈದ್ಯರು ತಿಳಿಸಿದ್ದಾರೆ.(ಏಜೆನ್ಸೀಸ್​)
ಇನ್ನು ಮುಂದೆ ರೈಲಿನಲ್ಲಿ ಬೆಡ್​ಶೀಟ್​ ಕೊಡಲ್ಲ, ಕರ್ಟನ್​ ಇರಲ್ಲ! ಬೇಕಾದರೆ ನೀವೇ ತಂದುಕೊಳ್ಳಿ ಎಂದ ಸಚಿವಾಲಯ

VIDEO| ಟಿಕ್​ಟಾಕ್​ ವಿಡಿಯೋ ಮೂಲಕ ಸಂಚಲನ ಸೃಷ್ಟಿಸಿರುವ ಅಜ್ಜಿ-ಮೊಮ್ಮಗನ ಭಾವನಾತ್ಮಕ ಕತೆ ಇದು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
