ಮುಂಬೈ:ಸಾರ್ವಜನಿಕ ವಲಯದ ನವರತ್ನ ಕಂಪನಿಯಾದ ಇರ್ಕಾನ್​ (IRCON) ಇಂಟರ್‌ನ್ಯಾಷನಲ್‌ನ ಷೇರುಗಳನ್ನು ಖರೀದಿಸಲು ಸೋಮವಾರ ನೂಕುನುಗ್ಗಲು ಕಂಡುಬಂದಿದೆ. ಬೆಳಗಿನ ವಹಿವಾಟಿನಲ್ಲಿ ಈ ಷೇರು ಬೆಲೆ ಶೇ.6.4ರಷ್ಟು ಜಿಗಿದ ಬಳಿಕ ರೂ. 266.90ರ ಮಟ್ಟ ತಲುಪಿತು. ಅಂತಿಮವಾಗಿ ಶೇ. 1.67ರಷ್ಟು ಏರಿಕೆಯೊಂದಿಗೆ ರೂ. 255 ತಲುಪಿತು. ಈ ಷೇರುಗಳ ಬಲೆ ಒಂದು ವರ್ಷದಲ್ಲಿ ಅಂದಾಜು 200% ಜಿಗಿದಿದೆ.
“ಇರ್ಕಾನ್ ಇಂಟರ್ನ್ಯಾಷನಲ್ ಲಿಮಿಟೆಡ್ (IRCON) ತನ್ನ ಜಂಟಿ ಉದ್ಯಮದಡಿಯಲ್ಲಿ ದಿನೇಶ್ಚಂದ್ರ ಆರ್. ಅಗರವಾಲ್ ಇನ್ಫ್ರಾಕಾನ್ ಪ್ರೈವೇಟ್ ಲಿಮಿಟೆಡ್ (DRA) ಅಂದರೆ ಇರ್ಕಾನ್-DRA ಜಂಟಿ ಉದ್ಯಮದ ಮೂಲಕ ಶಿವಲಿಂಗಪುರಂ ನಿಲ್ದಾಣದಿಂದ ಬೊರ್ರಗುಹಾಲು ನಿಲ್ದಾಣದವರೆಗೆ ಕೊತ್ತವಲಸ-ಕೋರಾಪುಟ್ ರೈಲು ಮಾರ್ಗ ದ್ವಿಪಥ ಯೋಜನೆಯ ನಿರ್ಮಾಣಕ್ಕಾಗಿ ಗುತ್ತಿಗೆ ಪಡೆದುಕೊಳ್ಳಲಾಗಿದೆ ಎಂದು ಇರ್ಕಾನ್​ ಷೇರು ಮಾರುಕಟ್ಟೆಗೆ ತಿಳಿಸಿದೆ.
1,260 ದಿನಗಳಲ್ಲಿ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಮೋಡ್‌ನಲ್ಲಿ ಈ ಯೋಜನೆಯನ್ನು ನಿರ್ಮಿಸಲಾಗುವುದು ಎಂದು IRCON ಹೇಳಿದೆ. ಪೂರ್ವ ಕರಾವಳಿ ರೈಲ್ವೆಯ ಈ ಯೋಜನೆಯ ವೆಚ್ಚ 1,198.09 ಕೋಟಿ ರೂ. ಇದೆ.
ಮಾರ್ಚ್‌ನಲ್ಲಿ, ಕಂಪನಿಯು ಮಿಜೋರಾಂನಲ್ಲಿ ಟ್ವಿನ್ ಟ್ಯೂಬ್ ಏಕಮುಖ ಐಜ್ವಾಲ್ ಬೈಪಾಸ್ ಸುರಂಗ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಲಿಮಿಟೆಡ್ (NHIDCL) ನಿಂದ ಗುತ್ತಿಗೆಯನ್ನು ಪಡೆದುಕೊಂಡಿತ್ತು. ಇಪಿಸಿ ಮೋಡ್ ಅಡಿಯಲ್ಲಿ ಇದರ ಮೊತ್ತ ರೂ. 630 ಕೋಟಿ ಆಗಿತ್ತು.
ಪ್ರಸಕ್ತ ವರ್ಷದಲ್ಲಿ ಕಂಪನಿಯ ಷೇರುಗಳ ಬೆಲೆ ಇಲ್ಲಿಯವರೆಗೆ 50% ರಷ್ಟು ಹೆಚ್ಚಾಗಿದೆ. ಕೇವಲ ಎರಡು ವರ್ಷಗಳಲ್ಲಿ 517% ಏರಿಕೆಯಾಗಿದೆ.
ಇರ್ಕಾನ್​ ಇಂಟರ್ನ್ಯಾಷನಲ್ ಕಂಪನಿಯು ರಸ್ತೆಗಳು, ಕಟ್ಟಡಗಳು, ವಿದ್ಯುತ್ ಉಪಕೇಂದ್ರಗಳು ಮತ್ತು ವಿತರಣೆ, ವಿಮಾನ ನಿಲ್ದಾಣ ನಿರ್ಮಾಣ, ವಾಣಿಜ್ಯ ಸಂಕೀರ್ಣಗಳು ಮತ್ತು ಮೆಟ್ರೋ ರೈಲು ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ರೈಲ್ವೆ ನಿರ್ಮಾಣ ಕಂಪನಿಯಾಗಿದೆ. ಕಂಪನಿಯು ಪ್ರಪಂಚದಾದ್ಯಂತ 25 ದೇಶಗಳಲ್ಲಿ 128 ಕ್ಕೂ ಹೆಚ್ಚು ಯೋಜನೆಗಳನ್ನು ಮತ್ತು ಭಾರತದ ವಿವಿಧ ರಾಜ್ಯಗಳಲ್ಲಿ 401 ಯೋಜನೆಗಳನ್ನು ಪೂರ್ಣಗೊಳಿಸಿದೆ.
2024-2025ರ ಇತ್ತೀಚಿನ ಮಧ್ಯಂತರ ಬಜೆಟ್‌ನಲ್ಲಿ ರೈಲ್ವೆಗೆ ರೂ 2.55 ಲಕ್ಷ ಕೋಟಿ ಮತ್ತು ರಸ್ತೆಗಳು ಮತ್ತು ಹೆದ್ದಾರಿಗಳಿಗೆ ರೂ. 2.78 ಲಕ್ಷ ಕೋಟಿಗಳಷ್ಟು ದಾಖಲೆಯ ಬಂಡವಾಳ ಹೂಡಿಕೆಯನ್ನು ನಿಗದಿಪಡಿಸಲಾಗಿದೆ, ಇದು ಈ ವಲಯಗಳಲ್ಲಿ ಇದುವರೆಗಿನ ಅತಿ ಹೆಚ್ಚು ಹೂಡಿಕೆಯಾಗಿದೆ. ಲಾಜಿಸ್ಟಿಕ್ಸ್ ದಕ್ಷತೆಯನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ಕಡಿಮೆ ಮಾಡಲು ಪ್ರಧಾನ ಮಂತ್ರಿ ಗತಿ ಶಕ್ತಿ ಅಡಿಯಲ್ಲಿ ಮೂರು ಪ್ರಮುಖ ರೈಲ್ವೆ ಕಾರಿಡಾರ್ ಕಾರ್ಯಕ್ರಮಗಳ ಅನುಷ್ಠಾನವನ್ನು ಸರ್ಕಾರ ಘೋಷಿಸಿದೆ. ಹೆಚ್ಚುವರಿಯಾಗಿ, ನಮೋ ಇಂಡಿಯಾ ಮೂಲಕ ಮೆಟ್ರೋ ರೈಲು ಯೋಜನೆಗಳು ಮತ್ತು ನಗರ ಪರಿವರ್ತನೆಯನ್ನು ಉತ್ತೇಜಿಸುವಂತಹ ಉಪಕ್ರಮಗಳನ್ನು ಘೋಷಿಸಲಾಗಿದೆ. ಇರ್ಕಾನ್​ ಇಂಟರ್‌ನ್ಯಾಷನಲ್ ಇವುಗಳಿಂದ ಲಾಭ ಪಡೆಯಲು ಸಿದ್ಧವಾಗಿದೆ.
ಮೋದಿ ಸರ್ಕಾರದ ಯೋಜನೆ ಲಾಭ ಪಡೆದುಕೊಂಡ ವಾರೀ ಎನರ್ಜಿಸ್​: 400 ಮೆಗಾ ವ್ಯಾಟ್​ನ ದೊಡ್ಡ ಗುತ್ತಿಗೆ, ಐಪಿಒ ಬಿಡುಗಡೆಗೆ ತಯಾರಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
