ಭೋಪಾಲ್ (ಮಧ್ಯ‍ಪ್ರದೇಶ):ಜಮೀನೊಂದನ್ನು ಅತಿಕ್ರಮಣ ಮಾಡಿಕೊಂಡು ಅಲ್ಲಿ ಬೆಳೆ ಬೆಳೆದಿರುವ ದಲಿತ ದಂಪತಿಯನ್ನು ಅಮಾನುಷವಾಗಿ ಪೊಲೀಸರು ಹಲ್ಲೆ ಮಾಡಿರುವ ಭಯಾನಕ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯ ಜಗತ್ಪುರ್ ಚಕ್ ಪ್ರದೇಶದಲ್ಲಿ ನಡೆದಿದೆ.
ದಲಿತ ಕುಟುಂಬವು ಅತಿಕ್ರಮಣವಾಗಿ ಜಮೀನು ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಜೆಸಿಬಿ ಯಂತ್ರವನ್ನು ತಂದು ಆ ಬೆಳೆಗಳನ್ನು ನಾಶ ಮಾಡಲಾಗುತ್ತಿತ್ತು. ಈ ಸಮಯದಲ್ಲಿ ತಾವು ಬೆಳೆದ ಬೆಳೆಗಳು ಕಣ್ಣೆದುರೇ ಹಾಳಾಗುವುದನ್ನು ನೋಡಲಾಗದ ದಂಪತಿ ಆತ್ಮಹತ್ಯೆಗೆ ಯತ್ನಿಸಿ ಕೀಟನಾಶಕ ಸೇವಿಸಿದ್ದರು ಎನ್ನಲಾಗಿದೆ.
ಅದನ್ನು ತಡೆಯಲು ಮುಂದಾದಾಗ ದಂಪತಿಯನ್ನು ಪೊಲೀಸರು ಅಮಾನವೀಯವಾಗಿ ಹೊಡೆದಿದ್ದಾರೆ. ಮಕ್ಕಳು ಸೇರಿದಂತೆ ಕೆಲವರು ಕೂಡ ತಡೆಯಲು ಮುಂದಾಗಿದ್ದು, ಅವರನ್ನೂ ಪೊಲೀಸರು ದೂರ ತಳ್ಳುವ ಮೂಲಕ ದಂಪತಿಯ ಮೇಲೆ ಲಾಠಿ ಪ್ರಯೋಗ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಹಾಗೂ ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸರನ್ನು ಸರ್ಕಾರ ವರ್ಗಾವಣೆ ಮಾಡಿದೆ.
ಮಧ್ಯಪ್ರದೇಶ ಸರ್ಕಾರವು ಎರಡು ವರ್ಷಗಳ ಹಿಂದೆ ಮಾಡೆಲ್ ಸೈನ್ಸ್ ಕಾಲೇಜು ನಿರ್ಮಾಣಕ್ಕಾಗಿ ಈ ಜಮೀನನ್ನು ಮಂಜೂರು ಮಾಡಿತ್ತು, ಆದರೆ ಈ ಭೂಮಿಯನ್ನು ದಲಿತ ಕುಟುಂಬವು ಅತಿಕ್ರಮಣ ಮಾಡಿಕೊಂಡಿತ್ತು, ಅಲ್ಲಿಯೇ ಅಕ್ರಮವಾಗಿ ಕೃಷಿ ಚಟುವಟಿಕೆಯನ್ನೂ ಮಾಡಿಕೊಂಡಿದ್ದರು. ಇದು ಬಹಳ ಸಮಯದಿಂದ ಕೃಷಿ ಮಾಡುತ್ತಿದೆ ಎಂದು ಹೇಳಿಕೊಳ್ಳುತ್ತದೆ.
ಈಗ ನಿರ್ಮಾಣದ ಕಾರ್ಯ ಆರಂಭಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಪೊಲೀಸರ ಬೆಂಗಾವಲಿನ ಕಂದಾಯ ಇಲಾಖೆಯ ತಂಡವು ಮಂಗಳವಾರ ಭೂಮಿಯನ್ನು ಖಾಲಿ ಮಾಡಲು ಮುಂದಾಗಿದೆ. ಇದಕ್ಕೆ ಇಲ್ಲಿ ನೆಲೆಸಿರುವ ಕುಟುಂಬದವರು ಒಪ್ಪದಿದ್ದಾಗ, ಬೆಳೆಗಳನ್ನು ಜೆಸಿಬಿ ತಂದು ನಾಶಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
https://www.facebook.com/VVani4U/videos/2694468814172036/
ಜಮೀನು ತೆರವು ಮಾಡಲು ಮುಂದಾದ ಸಮಯದಲ್ಲಿ ರಾಮ್ ಕುಮಾರ್ ಅಹಿರ್ವಾರ್ ಮತ್ತು ಸಾವಿತ್ರಿ ದೇವಿ ಕೀಟನಾಶಕವನ್ನು ಸೇವಿಸಲು ಮುಂದಾದರು. ಅದನ್ನು ತಡೆದ ಪೊಲೀಸರು ಅವರ ಮೇಲೆ ಹಲ್ಲೆ ನಡೆಸಿ ಬಲವಂತವಾಗಿ ಅಂಬ್ಯುಲೆನ್ಸ್‌ನಲ್ಲಿ ಎಳೆದೊಯ್ದಿದ್ದಾರೆ. ಅವರನ್ನು ರಕ್ಷಿಸಲು ಪ್ರಯತ್ನಿಸಿದ ರಾಮ್ ಕುಮಾರ್ ಅವರ ತಾಯಿ ಮತ್ತು ಸಹೋದರ ಸೇರಿದಂತೆ ದಂಪತಿಯ ಸಂಬಂಧಿಕರ ಮೇಲೂ ಪೊಲೀಸರು ಲಾಠಿ ಪ್ರಹಾರ ಮಾಡಿರುವುದಾಗಿ ಹೇಳಲಾಗಿದೆ.“ಇದು ಯಾರ ಜಮೀನು ಎಂದು ನಮಗೆ ತಿಳಿದಿಲ್ಲ, ನಾವು ಅದರ ಮೇಲೆ ಬಹಳ ಸಮಯದಿಂದ ಕೃಷಿ ಮಾಡುತ್ತಿದ್ದೇವೆ. ನಮ್ಮ ನಿಂತಿರುವ ಬೆಳೆ ನಾಶವಾದರೆ, ನಾವು ಸಾಯುವುದು ಬಿಟ್ಟು ಬೇರೆ ದಾರಿಯಿಲ್ಲ. ನಮ್ಮ ತಲೆಯ ಮೇಲೆ 3 ಲಕ್ಷ ರೂ.ಗಳ ಸಾಲದ ಹೊರೆ ಇದೆ – ಅದನ್ನು ಯಾರು ಪಾವತಿಸುತ್ತಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಂಪತಿ ಸೇರಿದಂತೆ ಏಳು ಜನರ ವಿರುದ್ಧ ಗುನಾ ಜಿಲ್ಲಾ ಪೊಲೀಸರು ಐಪಿಸಿಯ 353, 141, 309 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಇದಕ್ಕೆ ಸ್ಪಷ್ಟನೆ ನೀಡಿರುವ ಪೊಲೀಸ್‌ ಇಲಾಖೆ, ನಾವು ಸಂಪೂರ್ಣವಾಗಿ ವಿಚಾರಣೆ ನಡೆಸಿದ್ದೇವೆ. ಜಮೀನು ಅತಿಕ್ರಮಿಸಿಕೊಂಡಿರುವ ಹಿನ್ನೆಲೆಯಲ್ಲಿ, ಕುಟುಂಬವನ್ನು ತೆರವು ಮಾಡದೇ ಬೇರೆ ದಾರಿ ಇರಲಿಲ್ಲ. ಆದರೆ ಅವರು ಒಪ್ಪಲಿಲ್ಲ. ಅದರ ಬದಲು ಕ್ರಿಮಿನಾಶಕ ಸೇವಿಸಿದರು. ಈ ಸಮಯದಲ್ಲಿ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ರವಾನಿಸಿದ ಬಳಿಕವಷ್ಟೇ ನಾವು ತೆರವು ಕಾರ್ಯ ಪೂರ್ಣಗೊಳಿಸಬೇಕಿತ್ತು. ಇದು ಅತ್ಯಂತ ಕ್ರೂರ ಕಾರ್ಯ ಎಂದು ಎನ್ನಿಸಿದರೂ ದಂಪತಿಯನ್ನು ಆಸ್ಪತ್ರೆಗೆ ಕರೆದೊಯ್ಯುವುದು ನಮ್ಮ ಆದ್ಯತೆಯಾಗಿತ್ತು. ಅವರೀಗ ಅಪಾಯದಿಂದ ಪಾರಾಗಿದ್ದಾರೆ ಎಂದಿದ್ದಾರೆ.
ಈ ಜಾಗವನ್ನು ಗಬ್ಬು ಪಾರ್ಡಿ ನೇತೃತ್ವದ ಲ್ಯಾಂಡ್ ಮಾಫಿಯಾ ವಶಪಡಿಸಿಕೊಂಡಿದೆ, ಅವರು ಈಗಾಗಲೇ ಅನೇಕ ಭೂಮಿಯನ್ನು ಇದೇ ರೀತಿ ವಶಪಡಿಸಿಕೊಂಡಿದ್ದಾರೆ. ಇದೀಗ ದಲಿತ ಕುಟಂಬವನ್ನು ಮುಂದುಮಾಡಿಕೊಂಡು ಜಾಗವನ್ನು ಆಕ್ರಮಿಸಿಕೊಳ್ಳುವ ಹುನ್ನಾರ ಇದು ಎಂದು ಜಿಲ್ಲಾಡಳಿತ ಹೇಳಿದೆ.ವಿರೋಧ ಪಕ್ಷದ ಕಾಂಗ್ರೆಸ್ ರಾಜ್ಯ ವಕ್ತಾರ ನರೇಂದ್ರ ಸಲೂಜಾ ಈ ಘಟನೆಯನ್ನು ಖಂಡಿಸಿದ್ದಾರೆ. ಈ ರೀತಿ ಹಲ್ಲೆ ಮಾಡುವ ಬದಲು ಕಾನೂನಿನ ಪ್ರಕಾರ ಬಗೆಹರಿಸಿಕೊಳ್ಳಬಹುದಿತ್ತು ಎಂದಿದ್ದಾರೆ. ರಾಹುಲ್‌ ಗಾಂಧಿ ಕೂಡ ಈ ಬಗ್ಗೆ ಖಂಡಿತ ಟ್ವೀಟ್‌ ಮಾಡಿದ್ದಾರೆ.(ಏಜೆನ್ಸೀಸ್‌)
ಡ್ರಗ್‌ ದೊರೆಗೆ ಸಿಎಂ ಸಾಥ್‌! ದಿಟ್ಟ ಪೊಲೀಸ್‌ ಅಧಿಕಾರಿಯಿಂದ ಮಣಿಪುರ ಮುಖ್ಯಮಂತ್ರಿ ಗಡಗಡ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × one =
Remember me
