ನವದೆಹಲಿ: ಕೊರೊನಾ ವೈರಸ್​ ಸೋಂಕು ಭಾರತದ ಆರ್ಥಿಕತೆ ಮೇಲೆ ಸೀಮಿತ ಪರಿಣಾಮ ಮಾತ್ರ ಬೀರಿದೆ ಎಂದು ರಿಸರ್ವ್​ಬ್ಯಾಂಕ್​ ಗವರ್ನರ್​ ಶಕ್ತಿಕಾಂತ ದಾಸ್​ ಹೇಳಿದ್ದಾರೆ.
ವೈರಸ್​ ಭಾರತದ ಮೇಲೆ ಅಲ್ಪ ಪರಿಣಾಮ ಬೀರಿದರೂ, ಜಾಗತಿಕ ಮಟ್ಟದಲ್ಲಿ ಅದರ ಪರಿಣಾಮ ತೀವ್ರವಾಗಿದೆ. ಭಾರತದ ಔಷಧಿ ಹಾಗೂ ಎಲೆಕ್ಟ್ರಾನಿಕ್​ ಉದ್ಯಮ ಕ್ಷೇತ್ರಗಳು ಚೀನಾದಿಂದ ಬರುವ ಕಚ್ಚಾ ವಸ್ತುಗಳನ್ನು ಅವಲಂಬಿಸಿವೆ. ಹೀಗಾಗಿ ಈ ಕ್ಷೇತ್ರದ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು.
ರಾಷ್ಟ್ರದ ಬೃಹತ್​ ಔಷಧಿ ಕಂಪನಿಗಳ ಬಳಿ ಇನ್ನು 3ರಿಂದ 4 ತಿಂಗಳಿಗೆ ಆಗುವಷ್ಟ ಕಚ್ಚಾ ಸಾಮಗ್ರಿ ಇವೆ. ಹೀಗಾಗಿ ಸಮಸ್ಯೆ ಎದುರಾಗುವುದಿಲ್ಲ. ಚೀನಾದಿಂದ ಆಮದು ಮಾಡಿಕೊಳ್ಳುವ ಔಷಧಿ ಕಚ್ಚಾ ಸಾಮಗ್ರಿಗಳಿಗೆ ವೈರಸ್​ ಸೋಂಕು ಹರಡಿರುವ ಅಪಾಯ ಇದೆ. ವಿಶ್ವದ ವ್ಯಾಪಾರದಲ್ಲಿ ಚೀನಾದ ಪಾಲು ಅಧಿಕ. ಹೀಗಾಗಿ ಕೊರೊನಾ ವೈರಸ್​ ಸೋಂಕು ವಿಶ್ವದ ಆರ್ಥಿಕತೆ ಮೇಲೆ ತೀವ್ರ ಪರಿಣಾಮ ಬೀರಬಹುದು. ರಾಷ್ಟ್ರದಲ್ಲಿ ದೀರ್ಘಾವಧಿಯಲ್ಲಿ ಪರಿಣಾಮ ವ್ಯಕ್ತವಾಗಬಹುದು ಎಂದು ಅವರು ಹೇಳಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − four =
Remember me
