ಒಂದು ಭೌಗೋಳಿಕಪ್ರದೇಶದಲ್ಲಿ ವ್ಯತ್ಯಾಸಗಳು ಅಥವಾ ಸಂಭವನೀಯ ರೂಪಾಂತರಗಳನ್ನು ಪರೀಕ್ಷಿಸಲು ವಿಜ್ಞಾನಿಗಳು ರೋಗಿಗಳಿಂದ ವೈರಸ್​ಗಳ ತಳಿಗಳನ್ನು ಪ್ರತ್ಯೇಕಿಸಿದ್ದಾರೆ.
ವೈರಸ್​ ತಳಿಗಳ ಪ್ರತ್ಯೇಕತೆಯು ದೇಶದಲ್ಲಿ ಔಷಧಿಗಳು, ಲಸಿಕೆಗಳು ಹಾಗೂ ರೋಗ ಪತ್ತೆ ಹಚ್ಚುವ ಕಿಟ್​ಗಳನ್ನು ಉತ್ಪಾದಿಸಲು ಮೊದಲ ಹೆಜ್ಜೆಯಾಗಿದೆ.
ಭಾರತದಲ್ಲಿ ಕೋವಿಡ್-19ಗೆ ಕಾರಣವಾಗುವ ಕರೊನಾ ವೈರಸ್​ನ ಮೂರು ತಳಿಗಳಲ್ಲಿ ಯಾವುದೇ ರೂಪಾಂತರಗಳಿಲ್ಲ ಎಂದು ವಿಜ್ಞಾನಿಗಳ ಬಳಿ ಲಭ್ಯವಿರುವ ದಾಖಲೆಗಳು ಸೂಚಿಸುತ್ತವೆ ಎಂದು ಸರ್ಕಾರಿ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಆರಂಭಿಕ ಮಾದರಿಗಳು ಚೀನಾದ ವುಹಾನ್​ನಲ್ಲಿ ಕಂಡುಬರುವಂತಹ ವೈರಸ್​ ಅನುಕ್ರಮವನ್ನು ಹೊಂದಿದ್ದವು. ಎರಡನೆಯ ಅನುಕ್ರಮವು ಇರಾನ್​ನಲ್ಲಿ ಪ್ರಸರಣವಾಗುತ್ತಿದ್ದುದ್ದಾಗಿತ್ತು ಮತ್ತು ಅದು ವುಹಾನ್​ ವೈರಸ್​ ಹೋಲುವಂತಿತ್ತು. ಅಮೆರಿಕ ಹಾಗೂ ಯುಕೆಯಲ್ಲಿನ ಸೋಂಕಿತರಲ್ಲಿ ಕಂಡುಬಂದ ವೈರಸ್​ ಮೂರನೇ ತಳಿಯಾಗಿದೆ ಎಂದು ಐಸಿಎಂಆರ್​ನ ಸಾಂಕ್ರಾಮಿಕ ರೋಗ ಶಾಸ್ತ್ರ ಮತ್ತು ಸಾಂಕ್ರಾಮಿಕ ರೋಗ ವಿಭಾಗದ ಮುಖ್ಯಸ್ಥ ರಾಮನ್​ ಆರ್​ ಗಂಗಖೇಡ್ಕರ್​ ತಿಳಿಸಿದ್ದಾರೆ.
ಈ ತಳಿಗಳು ರೂಪಾಂತರಗೊಳ್ಳಲಾರವು. ಈ ತಳಿಗಳ ಪೈಕಿ ಯಾವ ತಳಿಗಳು ಸ್ವದೇಶಿ ತಳಿಯಾಗಿವೆ ಎಂಬುದು ಈಗಿರುವ ಪ್ರಶ್ನೆಯಾಗಿದ್ದು, ಈ ಸಂದರ್ಭದಲ್ಲಿ ಅದನ್ನು ಊಹಿಸುವುದು ಕಷ್ಟ ಎಂದು ತಿಳಿಸಿದ್ದಾರೆ.‘
ಔಷಧಿ, ಲಸಿಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಭಾರತದಲ್ಲಿ ಹಲವು ಸಂಶೋಧನಾ ಯೋಜನೆಗಳು ನಡೆಯುತ್ತಿವೆ. ಐಸಿಎಂಆರ್​ ಶ್ರೀಘ್ರವೇ ಭಾರತದ ಜನರಲ್ಲಿ ಬಿಸಿಜಿ ಲಸಿಕೆಯ ಪರಿಣಾಮದ ಅಧ್ಯಯನವನ್ನು ಆರಂಭಿಸಲಿದೆ. ಬಿಸಿಜಿ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ನಂಬಲಾಗಿದ್ದು, ಇದು ಕ್ಷಯ ರೋಗದ ಲಸಿಕೆಯಾಗಿದೆ. ಕೋವಿಡ್​-19 ವಿರುದ್ಧ ಹೋರಾಡುವಲ್ಲಿ ಇದು ಭರವಸೆ ಮೂಡಿಸಿದೆ ಎಂದು ಅಮೆರಿಕ ಸಂಶೋಧಕರು ಕಂಡುಕೊಂಡಿದ್ದಾರೆ.
ಆರೋಗ್ಯ ಸಚಿವಾಲಯದ ಪ್ರಕಾರ ಏಪ್ರಿಲ್​ 17ರವರೆಗೆ ಭಾರತದಲ್ಲಿ 13,387 ಕೋವಿಡ್ 19 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 1749 ರೋಗಿಗಳು ಚೇತರಿಸಿಕೊಂಡಿದ್ದರೆ, 452 ಸಾವಿನ ಪ್ರಕರಣ ದಾಖಲಾಗಿವೆ.
ಲಾಕ್​ಡೌನ್​ ಕ್ರಮಗಳ ಅನುಷ್ಠಾನವನ್ನು ಹೇಗೆ ಸುಧಾರಿಸಬಹುದು (ಕೋವಿಡ್ 19 ಕ್ರಕರಣಗಳು ಹೆಚ್ಚಿರುವ ಪ್ರದೇಶಗಳಲ್ಲಿ ) ಹಾಗೂ ಕೋವಿಡ್​ 19 ನಿಯಂತ್ರಣ ಮತ್ತು ನಿರ್ವಹಣೆಯಲ್ಲಿ ರೋಗ ಪತ್ತೆ, ಲಸಿಕೆ ಅಭಿವೃದ್ಧಿ ಹಾಗೂ ಔಷಧಿ ಮತ್ತು ಆಸ್ಪತ್ರೆ ಸೌಲಭ್ಯಗಳನ್ನು ಹೇಗೆ ಬಲಪಡಿಸಬಹುದು ಎಂಬುದನ್ನು ಕುರಿತು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ನೇತೃತ್ವದಲ್ಲಿ ಸಚಿವರ ತಂಡ ಚಚಿರ್ಸಿತು.
ಕರೊನಾ ಕೇಂದ್ರಬಿಂದು ಎನಿಸಿಕೊಂಡಿದ್ದ ಕೇರಳದಲ್ಲಿ ಲಾಕ್​ಡೌನ್​ ಸಡಿಲಗೊಳ್ಳುವುದೇ…. ಸಡಿಲಗೊಂಡರೆ ಏನೆಲ್ಲ ಆಗುತ್ತದೆ….?

ದೇಶದೆಲ್ಲೆಡೆ ವೈದ್ಯಕೀಯ ಸಾಮಗ್ರಿ ಪೂರೈಸಿದ ‘ಲೈಫ್​ಲೈನ್​ ಉಡಾನ್​’ 274 ವಿಮಾನಗಳ ಸಂಚಾರ ನಿರ್ವಹಿಸಿದ ಸಚಿವಾಲಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
