ನವದೆಹಲಿ:ಕರೊನಾ ಲಾಕ್​ಡೌನ್​ ಮಧ್ಯೆ ಭಾರತದಲ್ಲಿ ಸಿಲುಕಿರುವ ವಿವಿಧ ದೇಶಗಳ ಪ್ರಜೆಗಳನ್ನು ಅವರ ದೇಶಗಳಿಗೆ ತಲುಪಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಇದಕ್ಕೆಂದೇ ವಿಶೇಷ ವಿಮಾನಗಳು ಸಂಚರಿಸುತ್ತಿವೆ. ಮಾ.24ಕ್ಕೂ ಮೊದಲು ಭಾರತಕ್ಕೆ ಬಂದಿದ್ದ ಹಲವು ದೇಶಗಳ ಜನರು ಇಲ್ಲಿಯೇ ಸಿಲುಕಿಕೊಂಡಿದ್ದರು. ಭಾರತದ ವಿಶೇಷ ಫ್ಲೈಟ್​ಗಳು ಮೂಲಕ ಅವರನ್ನು ಆಯಾ ದೇಶಗಳಿಗೆ ಕರೆದುಕೊಂಡು ಹೋಗಿ ಬಿಡಲಾಗುತ್ತಿದೆ. ಭಾರತದ ಈ ಕೆಲಸಕ್ಕೆ ಜರ್ಮನಿ, ಟರ್ಕಿ, ಇರಾನ್​, ಪಾಕಿಸ್ತಾನ ಸೇರಿ ಅನೇಕ ದೇಶಗಳು ಮೆಚ್ಚುಗೆ ವ್ಯಕ್ತಪಡಿಸಿವೆ.
ಹಾಗೇ ಸಿಂಗಾಪುರ ಕೂಡ ಭಾರತಕ್ಕೆ ಧನ್ಯವಾದ ಹೇಳಿದೆ. ಶುಕ್ರವಾರ ಮತ್ತು ಇಂದು ಸಿಂಗಾಪುರದ ಒಟ್ಟು 699 ನಾಗರಿಕರನ್ನು ಭಾರತದಿಂದ ವಿಶೇಷ ವಿಮಾನಗಳ ಮೂಲಕ ಸ್ಥಳಾಂತರ ಮಾಡಲಾಗಿದೆ.
ನವದೆಹಲಿಯಲ್ಲಿರುವ ಸಿಂಗಾಪುರ ಹೈ ಕಮೀಷನ್​, ಮುಂಬೈನಲ್ಲಿರುವ ಸಿಂಗಾಪುರದ ರಾಯಭಾರಿ ಕಚೇರಿ ಮತ್ತು ಚೆನ್ನೈನಲ್ಲಿನ ದೂತಾವಾಸ ಕಚೇರಿಗಳು ಜಂಟಿ ಸಹಕಾರದೊಂದಿಗೆ ಈ ಸ್ಥಳಾಂತರ ಕಾರ್ಯ ನಡೆದಿದೆ. ದೆಹಲಿ, ಚೆನ್ನೈ, ಮುಂಬೈ ಏರ್​ಪೋರ್ಟ್​ಗಳಿಂದ ವಿಮಾನ ವ್ಯವಸ್ಥೆ ಮಾಡಲಾಗಿತ್ತು.
ಸಿಂಗಾಪುರದ ನಾಗರಿಕರನ್ನು ಸುರಕ್ಷಿತವಾಗಿ ದೇಶಕ್ಕೆ ಕಳಿಸಿಕೊಟ್ಟ ಭಾರತಕ್ಕೆ ಧನ್ಯವಾದಗಳು ಎಂದು ಸಿಂಗಾಪುರ ಸರ್ಕಾರ ಹೇಳಿದೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 10 =
Remember me
