ನವದೆಹಲಿ:ಕೋವಿಡ್​ ಮಹಾಮಾರಿಯ ಎರಡನೇ ಅಲೆ ವಿರುದ್ಧ ದೇಶ ಹೋರಾಡುತ್ತಿರುವಾಗಲೇ ಮೂರನೇ ಅಲೆಯ ಭೀತಿಯೂ ಕಾಡುತ್ತಿದೆ. ಭಾರತದಲ್ಲಿ ಮೂರನೇ ಅಲೆಯು ಎರಡನೇ ಅಲೆಯಷ್ಟೇ ತೀವ್ರವಾಗಿರಲಿದ್ದು, 98 ದಿನ ಕಾಡುವ ಸಂಭವವಿದೆ ಎಂದು ಭಾರತೀಯ ಸ್ಟೇಟ್​ ಬ್ಯಾಂಕ್​ನ (ಎಸ್​ಬಿಐ) ವರದಿಯೊಂದು ಎಚ್ಚರಿಸಿದೆ.
ಅಂತಾರಾಷ್ಟ್ರೀಯ ಅನುಭವವನ್ನು ಉಲ್ಲೇಖಿಸಿರುವ ಬ್ಯಾಂಕ್​ನ ಇಕೋರ್ಯಾಪ್​ ವರದಿ, ಮೂರನೇ ಅಲೆಯ ತೀವ್ರತೆಯು ಎರಡನೇ ಅಲೆಗಿಂತ ಭಿನ್ನವಾಗಿರುವುದಿಲ್ಲ. ಆದರೆ ಉತ್ತಮ ಸಿದ್ಧತೆ ಮಾಡಿಕೊಂಡು ಸಾವಿನ ಪ್ರಮಾಣವನ್ನು ತಗ್ಗಿಸಬಹುದು ಎಂದು ಹೇಳಿದೆ. ಪ್ರಮುಖ ದೇಶಗಳಲ್ಲಿ 3ನೇ ಅಲೆ ಸರಾಸರಿ 98 ದಿನ ಕಾಡುತ್ತದೆ, 2ನೇ ಅಲೆ 108 ದಿನ ಇರುತ್ತದೆ. ತೃತೀಯ ಅಲೆಯು ದ್ವೀತಿಯ ಅಲೆಗಿಂತ 1.8 ಪಟ್ಟು ಇರುತ್ತದೆ ಎಂದು ವರದಿ ಅಂದಾಜು ಮಾಡಿದೆ.
ಕೈಗಾರಿಕೆಗಳಿಗೆ ಆಕ್ಸಿಜನ್​ ಪೂರೈಕೆಕೈಗಾರಿಕೆಗಳಿಗೆ ಪೂರೈಸಲಿಕ್ಕಾಗಿ ಪ್ರತಿ ದಿನ 2,000 ಟನ್​ ಆಮ್ಲಜನಕವನ್ನು ಬಿಡುಗಡೆ ಮಾಡುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಕೆಲವು ರ್ನಿದಿಷ್ಟ ಕೈಗಾರಿಕೆಗಳಿಗೆ ದ್ರವ ಆಮ್ಲಜನಕವನ್ನು ಪೂರೈಸುವಂತೆ ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಪ್ರವರ್ತನೆ ಇಲಾಖೆ (ಡಿಪಿಐಐಟಿ) ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಎಂಎಸ್​ಎಂಇಗಳು, ತೈಲ ಸಂಸ್ಕರಣಾಗಾರಗಳು, ಉಕ್ಕು, ಆಹಾರ ಸಂಸ್ಕರಣೆ ಟಕಗಳು ಮುಂತಾದ ಕೈಗಾರಿಕೆಗಳಿಗೆ ದ್ರವ ಆಕ್ಸಿಜನ್​ ಪೂರೈಸುವಂತೆ ಕೋರಲಾಗಿತ್ತು. ಆದರೆ, ಕೈಗಾರಿಕೆಗಳಿಗೆ ಪೂರೈಸುವಾಗ ಆಸ್ಪತ್ರೆಗಳು ಮತ್ತು ಇತರೆ ವೈದ್ಯಕಿಯ ಉದ್ದೇಶಗಳಿಗೆ ಆಮ್ಲಜನಕ ಕೊರತೆಯಾಗದಂತೆ ನೋಡಿಕೊಳ್ಳುವಂತೆಯೂ ಗೃಹ ಸಚಿವಾಲಯ ಸೂಚಿಸಿದೆ ಎಂದು ಮೂಲಗಳು ಹೇಳಿವೆ.
ಸಾರ್ವತ್ರಿಕ ಲಸಿಕೆ ಅಭಿಯಾನಕ್ಕೆ ಆಗ್ರಹದೇಶದಾದ್ಯಂತ ಉಚಿತವಾಗಿ ಸಾರ್ವತ್ರಿಕ ಕರೊನಾ ಲಸಿಕೆ ಅಭಿಯಾನ ಆರಂಭಿಸುವಂತೆ ಆಗ್ರಹಿಸುವ ಗೊತ್ತುವಳಿಯೊಂದನ್ನು ಕೇರಳ ವಿಧಾನ ಸಭೆ ಬುಧವಾರ ಅಂಗೀಕರಿಸಿದೆ. ಲಸಿಕೆಯನ್ನು ಎಲ್ಲ ರಾಜ್ಯಗಳಿಗೆ ಕೇಂದ್ರವೇ ಉಚಿತವಾಗಿ ಪೂರೈಸಬೇಕೆಂದು ಗೊತ್ತುವಳಿ ಆಗ್ರಹಿಸಿದೆ. ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ವೀಣಾ ಜಾರ್ಜ್​ ಮಂಡಿಸಿದ ಗೊತ್ತುವಳಿ ಕೆಲವು ಚಿಕ್ಕ ಪುಟ್ಟ ಬದಲಾವಣೆಗಳೊಂದಿಗೆ ಅಂಗೀಕಾರವಾಯಿತು. ಕಮ್ಯೂನಿಸ್ಟ್​ ನೇತೃತ್ವದ ಎಲ್​ಡಿಎ್​ ಮತ್ತು ಕಾಂಗ್ರೆಸ್​ ನೇತೃತ್ವದ ಯುಡಿಎ್​ ಸದಸ್ಯರು ಪಕ್ಷ ಭೇದ ಮರೆತು ಬೆಂಬಲ ವ್ಯಕ್ತಪಡಿಸಿದರು.
2.2 ಕೋಟಿ ಉದ್ಯೋಗ ನಷ್ಟಕರೊನಾ ಎರಡನೇ ಅಲೆಯ ವೇಳೆ ಏಪ್ರಿಲ್​ ಮತ್ತು ಮೇ ತಿಂಗಳಲ್ಲಿ 2.27 ಕೋಟಿ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಸೆಂಟರ್​ ಾರ್​ ಮಾನಿಟರಿಂಗ್​ ಇಂಡಿಯನ್​ ಇಕಾನಮಿಯ (ಸಿಎಂಐಇ) ಮುಖ್ಯಸ್ಥ ಮಹೇಶ್​ ವ್ಯಾಸ್​ ತಿಳಿಸಿದ್ದಾರೆ. ಭಾರತದಲ್ಲಿ ಒಟ್ಟು ಸುಮಾರು 40 ಕೋಟಿ ಉದ್ಯೋಗಸ್ಥರಿದ್ದಾರೆ. ಆ ಪೈಕಿ 2.27 ಕೋಟಿ ಜನರು ಕೇವಲ ಎರಡು ತಿಂಗಳಲ್ಲಿ ನಿರುದ್ಯೋಗಿಗಳಾಗಿದ್ದಾರೆ ಎಂದು ಹೇಳಿದ್ದಾರೆ. ಕಳೆದ ವರ್ಷ ಕರೊನಾ ಸಾಂಕ್ರಾಮಿಕತೆ ಆರಂಭವಾದಾಗಿನಿಂದ ಸುಮಾರು 97% ಕುಟುಂಬಗಳ ಆದಾಯ ಕುಸಿದಿದೆ. ನಿರುದ್ಯೋಗ ಪ್ರಮಾಣ ಶೇಕಡ 8ಕ್ಕೆ ಬದಲಾಗಿ ಶೇಕಡ 12ಕ್ಕೆ ಜಿಗಿಯುವ ನಿರೀೆಯಿದೆ ಎಂದು ವ್ಯಾಖ್ಯಾನಿಸಿದ್ದಾರೆ.
ಲಸಿಕೆ ಉತ್ಪಾದನೆಗೆ ಕ್ರಮಕರೊನಾವನ್ನು ಹೆಡೆಮುರಿ ಕಟ್ಟಲು ಅಗತ್ಯವಾದ ಲಸಿಕೆ ಉತ್ಪಾದನೆ ಹೆಚ್ಚಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿರುವ ಸರ್ಕಾರ, ಎರಡು ಸರ್ಕಾರಿ ಸ್ವಾಮ್ಯದ ಸಂಸ್ಥೆ (ಪಿಎಸ್​ಯು) ಸಹಿತ ಮೂರು ಸಂಸ್ಥೆಗಳಿಗೆ ಕೊವ್ಯಾಕ್ಸಿನ್​ ಲಸಿಕೆ ಉತ್ಪಾದನೆಗೆ ಅನುಮತಿ ನೀಡಿದೆ. ಭಾರತ್​ ಬಯೋಟೆಕ್​ನ ಕೊವ್ಯಾಕ್ಸಿನ್​ ಲಸಿಕೆ ಉತ್ಪಾದಿಸಲು ಅನುಕೂಲವಾಗು ವಂತೆ ಪಿಎಸ್​ಯುಗಳಾದ ಇಂಡಿಯನ್​ ಇಮ್ಯುನಾಲಾ ಜಿಕಲ್ಸ್​ ಲಿಮಿಟೆಡ್​ (ಐಐಎಲ್​) ಮತ್ತು ಬಿಐಬಿಸಿಒಎಲ್​ ಮತ್ತು ಸರ್ಕಾರಿ ಸ್ವಾಮ್ಯದ ಹ್​ಾಕಿನ್​ ಬಯೋ&ಾರ್ಮಾಸ್ಯುಟಿಕಲ್ಸ್​ ಕಾರ್ಪೊರೇಷನ್​ಗೆ ಕೇಂದ್ರ ಸರ್ಕಾರ ಲಸಿಕೆ ತಂತ್ರಜ್ಞಾನವನ್ನು ಒದಗಿಸಿದೆ. ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿ ದಂತೆ ಪಿಎಸ್​ಯುಗಳು ಭಾರತ್​ ಬಯೋಟೆಕ್​ನೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಹ್​ಾಕಿನ್​ ಸಂಸ್ಥೆಗೆ ಪ್ರತಿ ವರ್ಷ 22 ಕೋಟಿ ಡೋಸ್​ ಲಸಿಕೆ ಉತ್ಪಾದಿಸುವ ಸಾಮರ್ಥ್ಯವಿದೆ. ಐಐಎಲ್​, 2021ರ ಸೆಪ್ಟೆಂಬರ್​ನಿಂದ ಕೊವ್ಯಾಕ್ಸಿನ್​ ಉತ್ಪಾದನೆ ಆರಂಭಿಸಲಿದೆ. ಹ್​ಾಕಿನ್​ ಮತ್ತು ಬಿಐಬಿಸಿಒಎಲ್​ ನವೆಂಬರ್​ನಲ್ಲಿ ಆರಂಭಿಸಲಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + 2 =
Remember me
