ನವದೆಹಲಿ:ಮಗಳ ಗಾಯವು ಆನಂದ ಮಹೀಂದ್ರಾ ಅವರಿಗೆ ಪಾಠ ಕಲಿಸಿದಾಗ, ಅವರು ಈ ಸೂತ್ರವನ್ನು ವ್ಯಾಪಾರದಲ್ಲಿಯೂ ಪ್ರಯತ್ನಿಸಿದರು. ತಮ್ಮ ಈ ಅನುಭವದ ಮೂಲಕ ಅವರು, ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸುತ್ತಲಿನ ಸಂಗತಿಗಳನ್ನು ಹೇಗೆ ನೋಡಬೇಕು ಎಂಬುದನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ದೇಶದ ಉದ್ಯಮಿಗಳು, ನಾಯಕರು ಅಥವಾ ಸೆಲೆಬ್ರಿಟಿಗಳು ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ, ವಾಹನ ತಯಾರಿಕೆಯ ಸುಪ್ರಸಿದ್ಧ ಕಂಪನಿ ಮಹೀಂದ್ರಾ ಗ್ರೂಪ್ ಗುರು ಚೇರ್ಮನ್ ಆನಂದ್ ಮಹೀಂದ್ರಾ ಅವರು ತಮ್ಮ ಮಗಳ ಅಪಘಾತ ಪ್ರಕರಣದಲ್ಲಿ ಆರಂಭದಲ್ಲಿ ಇದೇ ರೀತಿ ಮಾಡಿದ್ದಾರೆ. ಆದರೆ, ತದನಂತರ ಅವರ ಮಗಳಿಗೆ ಸೂಕ್ತ ಚಿಕಿತ್ಸೆ ನೀಡಿದ್ದು ಭಾರತೀಯ ವೈದ್ಯರು ಎಂಬುದು ಗಮನಾರ್ಹವಾಗಿದೆ.
ಆನಂದ ಮಹೀಂದ್ರಾ ಅವರು ಅಟಲ್ ಬಿಹಾರಿ ವಾಜಪೇಯಿ ಸ್ಮಾರಕ ಉಪನ್ಯಾಸದಲ್ಲಿ ತಮ್ಮ ಮಗಳ ಅಪಘಾತಕ್ಕೆ ಸಂಬಂಧಿಸಿದ ಘಟನೆಯನ್ನು ವಿವರಿಸಿದ್ದಾರೆ. ಈ ಕಥೆಯ ಮೂಲಕ ಅವರು, ಯಾವುದೇ ಸಮಸ್ಯೆಯನ್ನು ಪರಿಹರಿಸಲು ತಮ್ಮ ಸುತ್ತಮುತ್ತಲು ಹೇಗೆ ನೋಡಬೇಕು ಎಂಬುದನ್ನು ಹೇಳಲು ಪ್ರಯತ್ನಿಸಿದ್ದಾರೆ.
ಆನಂದ ಮಹೀಂದ್ರ ಹೇಳಿದ್ದೇನು?:ಆನಂದ ಮಹೀಂದ್ರಾ ತಮ್ಮ ಮಗಳ ಕೈಗೆ ಗಾಯವಾದ ಘಟನೆಯನ್ನು ಪ್ರಸ್ತಾಪಿಸಿದ್ದಾರೆ. “ಇದಕ್ಕೆ ಮೈಕ್ರೋಸರ್ಜರಿಯ ಅಗತ್ಯವಿತ್ತು. ನಾನು ಚಿಕಿತ್ಸೆಗಾಗಿ ಪ್ಯಾರಿಸ್ ಮತ್ತು ಲಂಡನ್‌ನಲ್ಲಿರುವ ಹೆಸರಾಂತ ಶಸ್ತ್ರಚಿಕಿತ್ಸಕರನ್ನು ಸಂಪರ್ಕಿಸಿದರೂ, ಅಂತಿಮವಾಗಿ ಯಶಸ್ವಿ ಶಸ್ತ್ರಚಿಕಿತ್ಸೆಯನ್ನು ಮುಂಬೈನ ಶಸ್ತ್ರಚಿಕಿತ್ಸಕ ಡಾ ಜೋಶಿ ನಡೆಸಿದರು” ಎಂದು ಆನಂದ ಹೇಳಿದ್ಧಾರೆ.
“ಶಸ್ತ್ರಚಿಕಿತ್ಸೆಯ ನಂತರ ನನ್ನ ಮಗಳ ಉಗುರಿಗೆ ಕೊಕ್ಕೆ ಹಾಕುವ ಅಗತ್ಯವಿತ್ತು. ಡಾ. ಜೋಶಿ ಅವರು ತುಂಬಾ ಸೊಗಸಾಗಿ ಇದನ್ನು ಮಾಡಿದ್ದಾರೆ. ಇದರಿಂದಾಗಿ ಮಗಳು ತನ್ನ ಬೆರಳುಗಳನ್ನು ಸರಿಸಲು ಸಹಾಯವಾಗಿದೆ” ಎಂದು ಅವರು ಜೀವನದ ನೈಜ ಸಂಗತಿಯನ್ನು ಹಂಚಿಕೊಂಡಿದ್ದಾರೆ.
“ನಾನು ಈ ಕಥೆಯನ್ನು ಹೇಳಿದ್ದೇನೆ. ಅದು ನನಗೆ ಪಾಠ ಕಲಿಸಿದ ಕಾರಣ ಅದನ್ನು ಪುನರಾವರ್ತಿಸಿದೆ. ನಮ್ಮ ಸುತ್ತಲಲ್ಲೇ ಪರಿಹಾರಗಳನ್ನು ಹುಡುಕೋಣ, ಉತ್ತಮ ಪರಿಹಾರ ವಿದೇಶದಲ್ಲಿ ಎಂದು ಭಾವಿಸಬೇಡಿ. ಇದು ನನ್ನ ಮತ್ತು ನನ್ನ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಮನೆ ತಂತ್ರಜ್ಞಾನದ ಆಧಾರದ ಮೇಲೆ ವ್ಯವಹಾರದಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ದೊಡ್ಡ ಬಾಜಿಗಳನ್ನು ಮಾಡಬೇಕಾಗಿ ಬಂದಾಗ ನಾನು ಹಿಂಜರಿಯುವುದಿಲ್ಲ” ಎಂದು ಆನಂದ ಮಹೀಂದ್ರಾ ಹೇಳಿದ್ದಾರೆ.
ಆನಂದ ಮಹೀಂದ್ರಾ ಅವರ ಈ ಭಾಷಣವನ್ನು ಆರ್‌ಪಿಜಿ ಗ್ರೂಪ್‌ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್‌ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ.


ಬಹಳ ಗಲೀಜು ಇದೆ…: ಅಯೋಧ್ಯೆ ರೈಲು ನಿಲ್ದಾಣದ ವಿಡಿಯೋ ವೈರಲ್, ಗುತ್ತಿಗೆದಾರನಿಗೆ ದಂಡ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 10 =
Remember me
