ಅಹಮದಾಬಾದ್:ಮನೆಯವರೆಲ್ಲ ಆತ ಸತ್ತೇ ಹೋಗಿದ್ದ ಎಂದು ಭಾವಿಸಿದ್ದರು. ಏಕೆಂದರೆ ಸರ್ಕಾರಿ ಅಧಿಕಾರಿಗಳು ಕೂಡ ತಾವು ಆತನ ಅಂತ್ಯಸಂಸ್ಕಾರ ಮಾಡಿದ್ದಾಗಿ ಹೇಳಿದ್ದರು. ಆದರೆ ಇವೆಲ್ಲ ಆಗಿ ಎರಡು ವರ್ಷಗಳ ಬಳಿಕ ಆ ವ್ಯಕ್ತಿ ಮನೆಗೆ ಬಂದಿದ್ದು, ಮನೆಯವರೆಲ್ಲ ಒಮ್ಮೆ ದಿಗ್ಭ್ರಾಂತರಾದ ಪ್ರಸಂಗವೂ ನಡೆದಿದೆ.
ಇದನ್ನೂ ಓದಿ:ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!
ಮಧ್ಯಪ್ರದೇಶದ ಧಾರ್​ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. 30 ವರ್ಷದ ಕಮಲೇಶ್ ಎಂಬಾತನೇ ಆ ವ್ಯಕ್ತಿ. ಕೋವಿಡ್​ ಎರಡನೇ ಅಲೆಯ ವೇಳೆ ಅಂದರೆ 2021ರಲ್ಲಿ ಕಮಲೇಶ್​ ಕರೊನಾ ಸೋಂಕಿಗೆ ತುತ್ತಾಗಿದ್ದ. ಆದರೆ ಚಿಕಿತ್ಸೆಗೆ ದಾಖಲಾಗಿದ್ದ ಆತ ಸಾವಿಗೀಡಾಗಿದ್ದ ಎಂದು ಮನೆಯವರಿಗೆ ತಿಳಿಸಲಾಗಿತ್ತು. ಅಲ್ಲದೆ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ತಾವೇ ಅಂತ್ಯಸಂಸ್ಕಾರ ಮಾಡಿದ್ದಾಗಿಯೂ ಅವರು ಮನೆಯವರಿಗೆ ಹೇಳಿದ್ದರು. ಹೀಗಾಗಿ ಮನೆಯವರೆಲ್ಲ ಆತ ಸತ್ತು ಹೋಗಿದ್ದ ಎಂದೇ ಭಾವಿಸಿದ್ದರು.
ಇದನ್ನೂ ಓದಿ:ಸತ್ತು ಹೋಗಿದ್ದಾಳೆ ಎನ್ನಲಾದ ಅಮ್ಮ 54 ದಿನಗಳ ಬಳಿಕ ಮತ್ತೆ ಸಿಕ್ಕಳು!; ಮಿರಾಕಲ್ ಬೇಬಿ ಬದುಕಲ್ಲಿ ಮತ್ತೊಂದು ಪವಾಡ
ಆದರೆ ಅದಾಗಿ ಎರಡು ವರ್ಷಗಳ ಬಳಿಕ ಆತ ಖುದ್ದು ಮನೆಗೇ ಬಂದಿದ್ದಾನೆ. ಗುಜರಾತ್​ನ ಅಹಮದಾಬಾದ್​ನಿಂದ ಆತ ಮನೆಗೆ ಮರಳಿದ್ದು, ಆತನನ್ನು ಕಂಡ ಮನೆಯವರು ಒಮ್ಮೆ ದಿಗ್ಭ್ರಮೆಗೊಂಡಿದ್ದರು. ಅಹಮದಾಬಾದ್​ನಲ್ಲಿ ತನ್ನನ್ನು ಒಂದು ಗ್ಯಾಂಗ್ ಇರಿಸಿಕೊಂಡಿದ್ದು, ದಿನ ಬಿಟ್ಟು ದಿನ ಯಾವುದೋ ಮದ್ದು ಇಂಜೆಕ್ಟ್ ಮಾಡುತ್ತಿದ್ದರು ಎಂಬುದಾಗಿ ಆತ ತಿಳಿಸಿದ್ದಾನೆ. ಕಮಲೇಶ್​ನನ್ನು ಆತನ ಪತ್ನಿ ಮತ್ತು ಕುಟುಂಬಸ್ಥರು ಗುರುತು ಹಿಡಿದಿದ್ದು, ಸತ್ತು ಹೋಗಿದ್ದ ಎನ್ನಲಾದವನೇ ಬದುಕಿರುವುದು ಖಚಿತವಾಗಿದೆ. ಪ್ರಕರಣ ಸಂಬಂಧ ಧಾರ್ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.
ಪಕ್ಷಕ್ಕಾಗಿ ದುಡಿದಿದ್ದಾನಂತೆ ಸೈಲೆಂಟ್ ಸುನೀಲ್; ಆತ ಪಕ್ಷದ ಸದಸ್ಯನೇ ಅಲ್ಲ ಎಂದ ಕಟೀಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 10 =
Remember me
