ನವದೆಹಲಿ:ದೆಹಲಿಯಲ್ಲಿ ದಿನೇ ದಿನೇ ವಾಯು ಮಾಲಿನ್ಯ ಹೆಚ್ಚುತ್ತಲೆ ಇದೆ. ದೀಪಾವಳಿ ಮುಗಿದ ಮೇಲೆ ನಿಯಂತ್ರಣಕ್ಕೆ ಬರದ ಮಾಲಿನ್ಯವನ್ನು ಹಿಡಿತಕ್ಕೆ ತರಲು ದೆಹಲಿ ಸರ್ಕಾರ ಈಗ ರಸ್ತೆ ಮತ್ತು ಮರಗಳಿಗೆ ನೀರು ಬಿಡುತ್ತಿದೆ!
ವಾಯು ಮಾಲಿನ್ಯದ ಸೂಚ್ಯಾಂಕ ದೆಹಲಿಯಲ್ಲಿ ಗರಿಷ್ಟ ಮಟ್ಟದ ಮಾಲಿನ್ಯವನ್ನು ತೋರಿಸುತ್ತಿದ್ದು ಇದು ದೆಹಲಿ ಸರ್ಕಾರಕ್ಕೆ ತಲೆನೋವಾಗಿದೆ. ಬೇರೆ ದಾರಿ ಕಾಣದ ದೆಹಲಿ ಸರ್ಕಾರ ಈಗ ರಸ್ತೆ ಮತ್ತು ಮರಗಳಿಗೆ ನೀರು ಬಿಡುತ್ತಿದೆ. ರಸ್ತೆಗಳಿಗೆ ನೀರು ಬಿಡುವುದರಿಂದ ಗಾಳಿಯಲ್ಲಿ ಧೂಳಿನ ಪ್ರಮಾಣ ಕಡಿಮೆಯಾಗುತ್ತದೆ.
ಸದ್ಯಕ್ಕೆ ದೆಹಲಿ ಸರ್ಕಾರ 150 ಮೊಬೈಲ್ ಸ್ಮಾಗ್​ ಗನ್​ಗಳನ್ನು ಮಾಲಿನ್ಯ ನಿಯಂತ್ರಣಕ್ಕೆ ನಿಯೋಜಿಸಿದೆ. ದೆಹಲಿ ವಾತಾವರಣ ಸಚಿವ ಗೋಪಾಲ್​ ರೈ ‘ದೆಹಲಿಯಲ್ಲಿ 70 ಅಸೆಂಬ್ಲಿಗಳಿದ್ದು ಪ್ರತಿ ಅಸೆಂಬ್ಲಿಗೆ ಎರಡು ಸ್ಮಾಗ್​ ಗನ್​ಗಳನ್ನು ನಿಯೋಜಿಸಲಾಗಿದೆ. ಉಳಿದವುಗಳನ್ನು ಎಲ್ಲಿ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆಯೋ ಅಲ್ಲಿಗೆ ಕಳುಹಿಸಲಾಗುತ್ತಿದೆ. ಪ್ರತಿ ಸ್ಮಾಗ್​ ಗನ್​ನಲ್ಲಿ ಏಳು ಸಾವಿರ ಲೀಟರ್​ ನೀರನ್ನು ಸಂಗ್ರಹಿಸುವ ಸಾಮರ್ಥ್ಯ ಇರುತ್ತದೆ’ ಎಂದು ಮಾಹಿತಿ ನೀಡಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
