ನವದೆಹಲಿ:ಈಗ ಕರೊನಾ ಅಬ್ಬರದಿಂದ ಕೆಲವೊಂದು ಜಾಹೀರಾತು ಕಂಪನಿಗಳು ಭಾರಿ ದುಡ್ಡು ಮಾಡಿಕೊಳ್ಳುತ್ತಿವೆ. ಅದರಲ್ಲಿಯೂ ಸ್ಯಾನಿಟೈಸರ್​ ಕಂಪನಿಗಳಂತೂ ಕೋಟಿ ಕೋಟಿ ದುಡಿದುಬಿಟ್ಟಿವೆ.
ಸ್ಯಾನಿಟೈಸರ್​ಗೆ ಕರೊನಾ ವೈರಸ್​ ಹಿನ್ನೆಲೆಯಲ್ಲಿ ಭಾರಿ ಡಿಮಾಂಡ್​ ಬರುತ್ತಿರುವ ಕಾರಣ, ನಕಲಿ ಸ್ಯಾನಿಟೈಸರ್​ಗಳು ಎಗ್ಗಿಲ್ಲದೇ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಹೊಸ ಹೆಸರಿನ ಕಂಪನಿಗಳ ಮೇಲೆ ಜನರಿಗೆ ನಂಬಿಕೆ ಬರುವುದಿಲ್ಲ ಎನ್ನುವ ಕಾರಣಕ್ಕಾಗಿಯೇ ಈಗಾಗಲೇ ಪ್ರಸಿದ್ಧಿಯಾಗಿರುವ ಕಂಪನಿಗಳ ಹೆಸರುಗಳನ್ನೇ ಅಲ್ಪಸ್ವಲ್ಪ ಬದಲಿಸಿ ಇಡಲಾಗುತ್ತಿದೆ.
ಇಂಥ ಒಂದು ಟ್ರೆಂಡ್​ ಕರೊನಾ ವೈರಸ್​ ಮಾತ್ರವಲ್ಲದೇ, ಬಹಳ ಹಿಂದಿನಿಂದಲೂ ನಡೆದುಬಂದಿದೆ. ಯಾವುದಾದರೂ ಬ್ರ್ಯಾಂಡ್​ನ ಕಂಪನಿಯೊಂದು ಬಹಳ ಫೇಮಸ್​ ಆಗಿದ್ದರೆ, ಅದೇ ರೀತಿಯ ನಕಲು ಮಾಡಿ, ಒಂದೋ, ಎರಡೋ ಸ್ಪೆಲ್ಲಿಂಗ್​ಗಳನ್ನು ಆಚೀಚೆ ಮಾಡಿ, ಥಟ್ಟನೆ ನೋಡಿದರೆ ನಕಲಿ ಯಾವುದು ಅಸಲಿ ಯಾವುದು ಎಂದು ತಿಳಿಯದೇ ಮೋಸ ಮಾಡುವವರೇ ಹೆಚ್ಚು.
ಇದನ್ನೂ ಓದಿ:ಕರೊನಾ ಹಿನ್ನೆಲೆ: ಚಟ್ಟ ಕಟ್ಟಲೂ ಬಂತು ಆನ್​ಲೈನ್​ ಸೇವೆ, ಕುಳಿತಲ್ಲೇ ಎಲ್ಲ ಲಭ್ಯ
ಅದರಲ್ಲಿಯೂ ಈಗ ಸ್ಯಾನಿಟೈಜರ್​ಗಳ ಬೇಡಿಕೆ ಹೆಚ್ಚಿರುವ ಕಾರಣ, ಅದರತ್ತ ಎಲ್ಲರ ಗಮನ ಹೋಗಿದೆ. ಇದೇ ರೀತಿ ಡೆಟಾಲ್​ ಕಂಪನಿಯ ಹೆಸರನ್ನೇ ಹೋಲುವ ಸ್ಯಾನಿಟೈಸರ್​ ಬಾಟಲ್​ ತಯಾರು ಮಾಡಿ ಡೆವ್​ಟಾಲ್​​ ಎಂದು ಹೆಸರಿಟ್ಟು ಗ್ರಾಹಕರನ್ನು ಮೋಸ ಮಾಡುತ್ತಿದ್ದ ಕಂಪೆನಿಗೆ ದೆಹಲಿ ಹೈಕೋರ್ಟ್​ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ.
ತನ್ನ ಬ್ರ್ಯಾಂಡ್​ ಅನ್ನೇ ಹೋಲುವ ಸ್ಯಾನಿಟೈಸರ್​ ತಯಾರು ಮಾಡುತ್ತಿರುವ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ರೆಕಿಟ್ ಬೆನ್‌ಕಿಸರ್ ಕಂಪನಿ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಸ್ಯಾನಿಟೈಸರ್​ ಹಚ್ಚಿಕೊಂಡರೆ ಕರೊನಾ ವೈರಸ್​ ಹತ್ತಿರ ಸುಳಿಯುವುದಿಲ್ಲ ಎನ್ನುವ ಮೂಲಕ ಡೆವ್​ಟಾಲ್​ ಹೆಸರಿನಲ್ಲಿ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸ್ಯಾನಿಟೈಸರ್​ ಬಿಡುಗಡೆ ಮಾಡಿದೆ. ಜನರು ಇದನ್ನು ಡೆಟಾಲ್​ ಎಂದು ನಂಬಿ ಖರೀದಿ ಮಾಡುತ್ತಿದ್ದಾರೆ. ಇದರಿಂದ ತಮಗೆ ತುಂಬಾ ಅನ್ಯಾಯ ಆಗುತ್ತಿದೆ. ಮಾತ್ರವಲ್ಲದೇ ಅದರ ಗುಣಮಟ್ಟದ ಬಗ್ಗೆಯೂ ಖಾತ್ರಿ ಇಲ್ಲದ ಹಿನ್ನೆಲೆಯಲ್ಲಿ ಡೆಟಾಲ್​ಗೆ ಕೂಡ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ಅದು ದೂರಿತ್ತು.
ಇದನ್ನೂ ಓದಿ:ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!
ಡೆವ್​ಟಾಲ್​ ಹೆಸರಿನಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಇರುವ ಎಲ್ಲಾ ಪ್ರಾಡಕ್ಟ್​ಗಳನ್ನು ಹಿಂದಕ್ಕೆ ಪಡೆಯುವಂತೆ ಮೋಹಿತ್ ಪೆಟ್ರೋಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್​ ಗೆ ಹೇಳಿರುವ ಹೈಕೋರ್ಟ್​, ಅದರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಒಂದು ಲಕ್ಷ ರೂಪಾಯಿ ದಂಡ ಹಾಕಿದೆ. ಈ ದಂಡದ ಹಣವನ್ನು ಕೋರ್ಟ್​ನಿಂದ ಕಾರ್ಯನಿರ್ಹವಿಸುತ್ತಿರುವ ಬಾಲಾರೋಪಿ ನ್ಯಾಯ ಪರಿಹಾರ ನಿಧಿಗೆ ನೀಡುವಂತೆ ಕೋರ್ಟ್​ ಹೇಳಿದೆ.
ಎಲ್ಲೆಲ್ಲೂ ಹೆಣಗಳ ರಾಶಿ: ಹತ್ತಿರ ಸುಳಿಯದ ಸಂಬಂಧಿಕರು- ಚಿಕಿತ್ಸೆಗೆ ದಿನಗಟ್ಟಲೆ ಕಾಯುವ ಸ್ಥಿತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
