ನವದೆಹಲಿ:ಎರಡನೇ ಮಹಾ ಯುದ್ಧದ ನಂತರ ವಿಶ್ವದಲ್ಲಿ ಅತೀ ದೊಡ್ಡ ಮಾನವ ವಿಪ್ಪತ್ತು ಹಾಗೂ ತೀವ್ರ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿರುವ ಕರೊನಾ ವೈರಸ್​ ಪರಿಸರ ಚೇತರಿಕೆಗೆ ನೆರವಾಗಿದೆ.
ತೀವ್ರ ಮಾಲಿನ್ಯಗೊಂಡಿದ್ದ ಯುಮುನಾ ನದಿ ನೀರು ಗುಣಮಟ್ಟ ಲಾಕ್​ಡೌನ್​ ನಂತರ ಸುಧಾರಿಸುತ್ತಿದೆ ಎಂದು ದೆಹಲಿ ಜಲಮಂಡಳಿ ಉಪಾಧ್ಯಕ್ಷ ರಾಘವ್​ ಚಾದಾ ಅವರು ತಿಳಿಸಿದ್ದಾರೆ.
ಲಾಕ್​ಡೌನ್​ ಮೊದಲು ಹಾಗೂ ನಂತರ ನದಿ ನೀರಿನ ಗುಣಮಟ್ಟವನ್ನು ದೆಹಲಿ ಜಲ ಮಂಡಳಿ ಪರೀಕ್ಷೆ ನಡೆಸಿದೆ. ಲಾಕ್​ಡೌನ್​ಗೂ ಮೊದಲು ನದಿ ನೀರಿಗೆ ಅಮೊನಿಯಾ ಸೇರಿದಂತೆ ವಿವಿಧ ರಾಸಾಯನಿಕಗಳು ಸೇರಿದ್ದವು. ಲಾಕ್​ಡೌನ್​ ನಂತರ ಕಾರ್ಖಾನೆಗಳು ಬಂದ್​ ಆಗಿರುವುದರಿಂದ ತ್ಯಾಜ್ಯ ನದಿ ನೀರು ಸೇರುತ್ತಿಲ್ಲ. ಹೀಗಾಗಿ ಅಮೊನಿಯಾ ಕಡಿಮೆಯಾಗಿದೆ ಎಂದು ರಾಘವ್​ ಹೇಳಿದ್ದಾರೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೇಮಕ ಮಾಡಿದ ಯಮುನಾ ಮಾನಿಟರಿಂಗ್ ಸಮಿತಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಯಮುನಾ ನದಿ ನೀರಿನ ಗುಣಮಟ್ಟದ ಮೇಲೆ ಲಾಕ್​ಡೌನ್​ ಬೀರಿರುವ ಪರಿಣಾಮ ಪತ್ತೆ ಮಾಡುವಂತೆ ಸೂಚಿಸಿತ್ತು. ಹೀಗಾಗಿ ಯಮುನಾ ನದಿಯ ಹರಿಯುವ ವಿವಿಧ ಪ್ರದೇಶಗಳಲ್ಲಿ ನೀರು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ವಿವರವಾದ ವರದಿ ಲಭ್ಯವಾಗುತ್ತಲೇ ಅದನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಸಲ್ಲಿಸಲಾಗುವುದು. ಈ ಬಗ್ಗೆ ಸಾರ್ವಜನಿಕರಿಗೂ ಮಾಹಿತಿ ನೀಡಲಾಗುವುದು ಎಂದರು.
ಹರಿಯಾಣದಲ್ಲಿ ಹರಿಯುತ್ತಿರುವ ನದಿ ನೀರು ಕೂಡ ಸ್ವಚ್ಛವಾಗಿದೆ. ಸಾರ್ವಜನಿಕರು ನದಿ ನೀರಿನ ಗುಣಮಟ್ಟ ಹೆಚ್ಚಾಗಿರುವುದನ್ನು ಅರಿತು ವಿಡಿಯೋ ಹಾಗೂ ಫೋಟೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಮಾಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. (ಏಜೆನ್ಸೀಸ್​)
https://www.vijayavani.net/all-trains-cancelled-till-april-30-says-irctc/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − six =
Remember me
