ನವದೆಹಲಿ:ರಾಜಧಾನಿ ದೆಹಲಿಯಲ್ಲಿ ನ್ಯೂಸ್​​​ಕ್ಲಿಕ್​​​​​ ವೆಬ್‌ಸೈಟ್‌ ಪತ್ರಕರ್ತರ ಮನೆ ಹಾಗೂ ಕಚೇರಿಯ ಮೇಲೆ ದೆಹಲಿ ಪೊಲೀಸರ ವಿಶೇಷ ದಳ ದಾಳಿ ನಡೆಸಿದೆ. ವಿದೇಶಿ ಹಣದ ವಿಚಾರದಲ್ಲಿ ಯುಪಿಎ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮಂಗಳವಾರ ಮುಂಜಾನೆ ದೆಹಲಿ, ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ವಿಶೇಷ ದಳ ಏಕಕಾಲದಲ್ಲಿ ದಾಳಿ ನಡೆಸಿತು, 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ವೇಳೆ ಕೆಲವರನ್ನು ಬಂಧಿಸಲಾಗಿದ್ದು, ವಿಶೇಷ ಸೆಲ್​​​​ಗೆ ಕರೆತರಲಾಗಿದೆ.
ವರದಿಯ ಪ್ರಕಾರ, ಬಂಧಿತ ಪತ್ರಕರ್ತರಾದ ಊರ್ಮಿಳೇಶ್ ಮತ್ತು ಸತ್ಯಂ ತಿವಾರಿ ಅವರ ವಕೀಲರು ವಿಶೇಷ ದಳದ ಕಚೇರಿಯನ್ನು ತಲುಪಿದ್ದಾರೆ. ಆದರೆ ಪತ್ರಕರ್ತ ಅಭಿಸಾರ್​​​‌ ಶರ್ಮಾ ಅವರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ
ದಾಳಿಯ ವೇಳೆ, ದೆಹಲಿ ಪೊಲೀಸರ ವಿಶೇಷ ದಳ ಲ್ಯಾಪ್‌ಟಾಪ್​​​ ಮತ್ತು ಮೊಬೈಲ್‌ ಫೋನ್‌ಗಳಂತಹ ಅನೇಕ ಎಲೆಕ್ಟ್ರಾನಿಕ್ ಪುರಾವೆಗಳನ್ನು ವಶಪಡಿಸಿಕೊಂಡಿದೆ. ಇದಲ್ಲದೆ, ಹಾರ್ಡ್ ಡಿಸ್ಕ್ ಡೇಟಾವನ್ನು ಸಹ ತೆಗೆದುಕೊಳ್ಳಲಾಗಿದೆ. ಹಲವು ಕಡತಗಳನ್ನೂ ವಶಪಡಿಸಿಕೊಳ್ಳಲಾಗಿದೆ, ಮಾಹಿತಿಯ ಪ್ರಕಾರ, ದೆಹಲಿ ಪೊಲೀಸ್‌ ವಿಶೇಷ ದಳ ಈ ವಿಷಯದಲ್ಲಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ದೆಹಲಿ ಪೊಲೀಸರ ಈ ಕ್ರಮದ ನಂತರ, ಪತ್ರಕರ್ತ ಅಭಿಸಾರ್​​​‌ ಶರ್ಮಾ ಸಾಮಾಜಿಕ ಮಾಧ್ಯಮದಲ್ಲಿ ದೆಹಲಿ ಪೊಲೀಸರು ಅವರ ಲ್ಯಾಪ್‌ಟಾಪ್​​​ ಮತ್ತು ಫೋನ್ ಅನ್ನು ಅವರ ಮನೆಯಿಂದ ತೆಗೆದುಕೊಂಡು ಹೋಗಿದ್ದಾರೆ ಎಂದು ಪೋಸ್ಟ್​​​ ಮಾಡಿದ್ದಾರೆ.
ಯುಎಪಿಎ ಅಡಿಯಲ್ಲಿ ನಡೆಯುತ್ತಿರುವ ಈ ದಾಳಿಯಲ್ಲಿ ವಿಶೇಷ ದಳದ 100ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದಾರೆ. ದಾಳಿ ವೇಳೆ ವಿಶೇಷ ದಳದ ಜತೆಗೆ ಅರಸೇನಾ ಪಡೆಯ ಸಿಬ್ಬಂದಿಯೂ ಇದ್ದರು. ಅರಸೇನಾಪಡೆಯ ಬಾಲ್ ಜವಾನರು ಭದ್ರತೆಗಾಗಿ ಇದ್ದಾರೆ. ದಾಳಿ ಮುಗಿದ ನಂತರ ದೆಹಲಿ ಪೊಲೀಸರು ಪತ್ರಿಕಾಗೋಷ್ಠಿ ನಡೆಸಬಹುದು. ಸದ್ಯ ಎಲ್ಲ ಹಿರಿಯ ಅಧಿಕಾರಿಗಳು ದಾಳಿಯತ್ತ ಗಮನ ಹರಿಸುವಂತೆ ಸೂಚಿಸಲಾಗಿದೆ.ಜಾರಿ ನಿರ್ದೇಶನಾಲಯ (ಇಡಿ) ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ ದೆಹಲಿ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ಇಡಿ ತನಿಖೆಯು 3 ವರ್ಷಗಳಲ್ಲಿ 38.05 ಕೋಟಿ ರೂಪಾಯಿ ಮೌಲ್ಯದ ನಕಲಿ ವಿದೇಶಿ ಹಣವನ್ನು ಬಹಿರಂಗಪಡಿಸಿದೆ. ಗೌತಮ್ ನವಾಖಾ ಮತ್ತು ತೀಸ್ತಾ ಸೆಟಲ್ವಾಡ್ ಅವರ ಸಹಚರರನ್ನು ಹೊರತುಪಡಿಸಿ, ಈ ಹಣವನ್ನು ಅನೇಕ ಪತ್ರಕರ್ತರಿಗೆ ನೀಡಲಾಗಿದೆ.
ಚೀನಾದಿಂದ ಯಾವ ಚಾನಲ್‌ ಮೂಲಕ ಹಣ ಬಂದಿದೆ?ಇಡಿ ತನಿಖೆಯಲ್ಲಿ ಈ ಹಣದ ವಹಿವಾಟು ಬಹಿರಂಗವಾಗಿದೆ. ಇದರಲ್ಲಿ ಎಫ್​​​​​​ಡಿಐ ಮೂಲಕ 9.59 ಕೋಟಿ ಹಾಗೂ ಸೇವಾ ರಫ್ತು ವಿನಿಮಯವಾಗಿ 28.46 ಕೋಟಿ ನೀಡಿರುವುದು ಬಹಿರಂಗವಾಗಿದೆ. ಚೀನಾದ ಹಣವು ಕೆಲವು ವಿದೇಶಿ ಸಂಸ್ಥೆಗಳ ಮೂಲಕ ನ್ಯೂಸ್​​​ಕ್ಲಿಕ್‌ಗೆ ತಲುಪಿತು. ಅದೇ ಹಣವನ್ನು ನ್ಯೂಸ್​​​ಕ್ಲಿಕ್‌ಗೆ ಸಂಬಂಧಿಸಿದ ಪತ್ರಕರ್ತರಿಗೂ ನೀಡಲಾಗಿದೆ.
2021 ರಲ್ಲಿ ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗವು ನ್ಯೂಸ್​​​ಕ್ಲಿಕ್‌ ಪಡೆದ ಅಕ್ರಮ ಹಣದ ಬಗ್ಗೆ ಪ್ರಕರಣವನ್ನು ದಾಖಲಿಸಿದೆ. ನ್ಯೂಸ್​​​ಕ್ಲಿಕ್‌ ಚೀನಾದ ಕಂಪನಿಗಳ ಮೂಲಕ ಈ ಅನುಮಾನಾಸ್ಪದ ಹಣವನ್ನು ಪಡೆದಿತ್ತು. ಇದಾದ ನಂತರ, ಇಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿತು, ಆದರೆ ಆ ಸಮಯದಲ್ಲಿ ಹೈಕೋರ್ಟ್ ನ್ಯೂಸ್​​​ಕ್ಲಿಕ್‌ ಪತ್ರಕರ್ತರಿಗೆ ಬಂಧನದಿಂದ ಮುಕ್ತಿ ನೀಡಿತ್ತು.
ಲೋಕಸಭೆಯಲ್ಲೂ ಈ ವಿಷಯ ಪ್ರಸ್ತಾಪಒಂದು ತಿಂಗಳ ಹಿಂದೆ ಲೋಕಸಭೆಯಲ್ಲೂ ನ್ಯೂಸ್​​​ಕ್ಲಿಕ್‌ ವಿಚಾರ ಪ್ರಸ್ತಾಪವಾಗಿತ್ತು, ಆಗಸ್ಟ್ 7, 2023 ರಂದು, ಬಿಜೆಪಿ ಸಂಸದ ನಿಶಿಕಾಂತ್​​​ ದುಬೆ ಅವರು ನ್ಯೂಸ್​​​ಕ್ಲಿಕ್‌ ಚೀನಾದಿಂದ ಹಣವನ್ನು ಪಡೆಯುತ್ತಿದ್ದಾರೆ, ದೇಶ ವಿರೋಧಿ ಎಂದೆಲ್ಲಾ ಹೇಳಿದ್ದರು. ಚೀನಾ ನಿಧಿಯ ಮೂಲಕ ಮಾಧ್ಯಮ ಪೋರ್ಟಲ್ ಸರ್ಕಾರದ ವಿರುದ್ಧ ವಾತಾವರಣ ಸೃಷ್ಟಿಸುತ್ತಿದೆ ಎಂದು ನಿಶಿಕಾಂತ್ ಆರೋಪಿಸಿದ್ದರು.
ಅಷ್ಟೇ ಅಲ್ಲ, ನಿಶಿಕಾಂತ್ ದುಬೆ ಈ ವಿಚಾರದಲ್ಲಿ ಕಾಂಗ್ರೆಸ್‌ ಅನ್ನು ಗುರಿಯಾಗಿಸಿಕೊಂಡಿದ್ದರು. ನೆವಿಲ್ಲೆ ರಾಯ್ ಸಿಂಘಮ್ ಮತ್ತು ಅವರ ನ್ಯೂಸ್​​​ಕ್ಲಿಕ್‌ ಚೀನಾದ ಕಮ್ಯುನಿನ್ಸ್ ಪಕ್ಷದ (ಸಿಪಿಸಿ) ಅಪಾಯಕಾರಿ ಅಸ್ತ್ರಗಳು ಎಂದು ನ್ಯೂಯಾರ್ಕ್ ಟೈಮ್ಸ್ ನಂತಹ ಪತ್ರಿಕೆಗಳು ಸಹ ಒಪ್ಪಿಕೊಳ್ಳುತ್ತಿವೆ ಮತ್ತು ಚೀನಾದ ರಾಜಕೀಯ ಕಾರ್ಯಸೂಚಿಯನ್ನು ವಿಶ್ವದಾದ್ಯಂತ ಪ್ರಚಾರ ಮಾಡುತ್ತಿವೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
