ಆಂಧ್ರಪ್ರದೇಶ:ದೇವರ ಹರಕೆ ತಿರಿಸಲು ಭಕ್ತರು ಹಣ್ಣು, ಹೂವು, ಕಾಯಿ ಅರ್ಪಿಸುವುದನ್ನು ಕೇಳಿದ್ದೇವೆ. ಆದರೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ದೇವಸ್ಥಾನದಲ್ಲಿ ಭಕ್ತರು ವಿಚಿತ್ರ ಆಚರಣೆಯನ್ನು ಮಾಡುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ಗಂಗಾವರಂ ಮಂಡಲದ ಬೀರಗನೈ ಕುರಪಳ್ಳಿ ಗ್ರಾಮದಲ್ಲಿ ನಿಡಿಗುಂಟ ಬೀರ ಲಿಂಗೇಶ್ವರ ಸ್ವಾಮಿ, ಶ್ರೀ ಉಜ್ಜನಿರಾಯ ಸ್ವಾಮಿ ಮತ್ತು ವ್ಯಾಸರಾಯ ಸ್ವಾಮಿಗಳನ್ನು ಆರಾಧಿಸುವ ಕುರವ ಜನಾಂಗದ ಜನರು ತಲೆಯ ಮೇಲೆ ತೆಂಗಿನಕಾಯಿಗಳನ್ನು ಒಡೆದುಕೊಳ್ಳುತ್ತಾರೆ. ಈ ದೇವರು ತಮ್ಮ ಗ್ರಾಮದ ದೇವರು ಎಂದು ಪರಿಗಣಿಸಿರುವ ಗ್ರಾಮಸ್ಥರು ತಲೆಯ ಮೇಲೆ ತೆಂಗಿನಕಾಯಿಯನ್ನು ಒಡೆಯುವ ಮೂಲಕ ಭಕ್ತಿ ಸಮರ್ಪಣೆ ಸಲ್ಲಿಸುತ್ತಾರೆ.
ಇದನ್ನೂ ಓದಿ:ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ 10ರೂ. ನೀಡಿದ 60 ವರ್ಷದ ಅಜ್ಜ!
ಈ ದೇವಸ್ಥಾನದಲ್ಲಿ ವರ್ಷದಲ್ಲಿ ನಾಲ್ಕು ದಿನಗಳ ವಾರ್ಷಿಕ ಉತ್ಸವ ನಡೆಯುತ್ತದೆ. ಪ್ರಾಚೀನ ಸಂಪ್ರದಾಯಗಳನ್ನು ಅನುಸರಿಸಿ ಈ ನಾಲ್ಕು ದಿನಗಳಲ್ಲಿ ಪ್ರತಿ ದಿನವೂ ಪ್ರಧಾನ ದೇವತೆಗಳಿಗೆ ಮಹಾ ಮಂಗಳ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ.
ಈ ದೇವರ ಉತ್ಸವದ ಆಚರಣೆಯ ಸಮಾರೋಪ ದಿನದಂದು ನಡೆಸಲಾಗುವ ಸಾಂಪ್ರದಾಯಿಕ ಕಾರ್ಯಕ್ರಮದಲ್ಲಿ ಭಕ್ತರು ತಲೆಯ ಮೇಲೆ ತೆಂಗಿನಕಾಯಿಯನ್ನು ಒಡೆದುಕೊಳ್ಳುತ್ತಾರೆ. ನಾಲ್ಕು ದಿನಗಳ ವಾರ್ಷಿಕ ಉತ್ಸವವನ್ನು ವೀಕ್ಷಿಸಲು ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳ ಭಕ್ತರು ಆಂಧ್ರಪ್ರದೇಶದ ಗ್ರಾಮಕ್ಕೆ ಆಗಮಿಸುತ್ತಾರೆ.
ಇದನ್ನೂ ಓದಿ:ಭಾರಿ ಗಾತ್ರದ ಮೂಲಂಗಿ ಬೆಳೆದ ರೈತ; ಒಂದೊಂದು ಮೂಲಂಗಿಗಳು ತಲಾ 5 ಕೆ.ಜಿ!
ಆಂಧ್ರಪ್ರದೇಶದ ಈ ದೇವಾಲಯದಲ್ಲಿ ಭಕ್ತರು ತೆಂಗಿನಕಾಯಿಗಳನ್ನು ತಮ್ಮ ತಲೆ ಮೇಲೆ ಒಡೆದುಕೊಳ್ಳುವಾಗ ಅವರಿಗೆ ಯಾವುದೇ ನೋವು ಅನುಭವಿಸುವುದಿಲ್ಲ ಅಥವಾ ಗಾಯಗಳನ್ನು ಅನುಭವಿಸುವುದಿಲ್ಲ ಎಂದು ಅವರು ಹೇಳುತ್ತಾರೆ. ಭಾರತದಲ್ಲಿ ಇಂತಹ ಹಲವು ಆಚರಣೆಗಳಿವೆ.
ಅಮ್ಮನ ಸೀರೆಯಲ್ಲಿ ಉಯ್ಯಾಲೆ ಕಟ್ಟಿ ಆಡುತ್ತಾ ಪ್ರಾಣ ಬಿಟ್ಟ ಬಾಲಕಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
