ಮುಂಬೈ: ಅದೃಷ್ಟ ಅಂದರೆ ಬಹುಶಃ ಇದುವೇ ಇರಬೇಕು. ಎಂಟು ವರ್ಷಗಳ ಹಿಂದೆ ಕಳುವಾಗಿದ್ದ ಚಿನ್ನದ ಎರಡು ಸರಗಳು ಮತ್ತೆ ಸಿಗುವುದೆಂಬ ಆಸೆಯನ್ನೇ ಬಿಟ್ಟಿದ್ದವರ ಕೈ ಸೇರಿದೆ. ಪ್ರಸ್ತುತ 70,000 ರೂಪಾಯಿ ಬೆಲೆ ಬಾಳುವ ಸರಗಳನ್ನು ಕಲ್ಯಾಣ್ ಗವರ್ನಮೆಂಟ್ ರೈಲ್ವೆ ಪೊಲೀಸ್ (ಜಿಆರ್​ಪಿ) ಭಾನುವಾರ ಸರದ ವಾರಸುದಾರ ಸಂದೀಪ್ ಘಾಗ್​ (31) ಅವರಿಗೆ ಹಸ್ತಾಂತರಿಸಿದ್ದಾರೆ.
ಆ ಕ್ಷಣಗಳನ್ನು ಸಂದೀಪ್ ಘಾಗ್ ವಿವರಿಸಿದ್ದು ಹೀಗೆ- ಅಂದು ಪೊಲೀಸ್ ಒಬ್ಬರು ನನ್ನ ವಿಳಾಸ ಹುಡುಕುತ್ತ ಮನೆ ಹತ್ತಿರ ಬಂದಿದ್ದರು. ಅವರ ಆಗಮನ ಮನಸ್ಸನ್ನು ಕೊಂಚ ವಿಚಲಿತಗೊಳಿಸಿತಾದರೂ, ಸರ ಸಿಕ್ಕಿದೆ ಎಂದು ಅವರು ತಂದ ವಾರ್ತೆ ಸಮಾಧಾನ ಕೊಟ್ಟಿತ್ತು. 2012ರಲ್ಲಿ ಕೆಲಸ ಹುಡುಕುತ್ತ ಕಲ್ಯಾಣ್​ಗೆ ಹೊರಟಿದ್ದೆ. ಆಗ ರೈಲ್ವೆ ಟ್ರ್ಯಾಕ್​ನಲ್ಲಿ ಕಳ್ಳನೊಬ್ಬ ತಲೆಗೆ ಕಲ್ಲೆಸೆದು ಕತ್ತಿನಲ್ಲಿದ್ದ ಸರಗಳನ್ನು ಎಳೆದುಕೊಂಡು ಪರಾರಿಯಾಗಿದ್ದ. ಅಂದೇ ಕೇಸ್ ದಾಖಲಿಸಿದ್ದೆ. ಕಲ್ಯಾಣ್​ ಜಿಆರ್​ಪಿ ಕಳ್ಳನನ್ನು ಬಂಧಿಸಿದರು. ಆತನಿಂದ ಸರಗಳನ್ನೂ ವಶಪಡಿಸಿಕೊಂಡರು. ಆದರೆ, ಅದು ಕೋರ್ಟ್​ ವಿಚಾರಣೆಯಲ್ಲಿ ಬಾಕಿ ಆಗಿತ್ತು. ಚಿನ್ನದ ಸರಗಳ ಹಸ್ತಾಂತರ ಸಾಧ್ಯವಿರಲಿಲ್ಲ. ನಾನು ಅದರ ಆಸೆಯನ್ನೇ ಬಿಟ್ಟಿದ್ದೆ. ಈಗ ಮತ್ತೆ ಕೈ ಸೇರಿದೆ. ನನ್ನ ತಾಯಿ ಈಗ ಅನಾರೋಗ್ಯಕ್ಕೀಡಾಗಿದ್ದು ಚಿಕಿತ್ಸೆಗಾಗಿ ದುಡ್ಡು ಹೊಂದಿಸಲು ಕಷ್ಟಪಡುತ್ತಿದ್ದೆ. ಈಗ ಇದನ್ನೇ ಬಳಸುವೆ.
ಇದನ್ನೂ ಓದಿ:ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನ; ಭಾರತ ಆಕ್ರೋಶ..
ಕಲ್ಯಾಣ್​ ಜಿಆರ್​ಪಿಯ ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ಶಾರ್ದೂಲ್ ವಾಲ್ಮೀಕಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ಅನೇಕ ಪ್ರಕರಣಗಳಲ್ಲಿ ದೂರುದಾರರು ಅನುಸರಣೆ ಮಾಡುವುದಿಲ್ಲ. ಪೊಲೀಸರೂ ಅಷ್ಟೇ. ಕೇಸ್ ದಾಖಲಿಸಿ ಸುಮ್ಮನಿದ್ದು ಬಿಡುತ್ತಾರೆ. ಘಾಗ್​ ಪ್ರಕರಣದಲ್ಲಿ ಆತ ಫೋನ್ ನಂಬರನ್ನೆ ಬದಲಾಯಿಸಿಕೊಂಡಿದ್ದ. ಆತನ ವಿಳಾಸದ ಆಧಾರ ಮೇಲೆ ಶೋಧ ಆರಂಭಿಸಿ, ಮನೆ ಪತ್ತೆ ಹಚ್ಚಿ ವಿಷಯ ತಲುಪಿಸಲಾಗಿದೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್)
ಹೊಟ್ಟೆಪಾಡಿಗಾಗಿ ಯುವಕ ಆಯ್ದುಕೊಂಡ ಕೆಲಸಕ್ಕೆ ಬೇಸ್ತು ಬಿದ್ರು ಜನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − thirteen =
Remember me
