ಬೆಂಗಳೂರು:ಚೆನ್ನೈನ ಚೆಪಾಕ್​-ತಿರುವಲ್ಲಿಕೇನಿ ವಿಧಾನಸಭಾ ಕ್ಷೇತ್ರದ ಡಿಎಂಕೆ ಶಾಸಕ ಜೆ. ಆನ್ಬಳಗನ್​ ಕರೊನಾದಿಂದಾಗಿ ಬುಧವಾರ ಮೃತಪಟ್ಟಿದ್ದಾರೆ. ಆ ಮೂಲಕ ತಮಿಳುನಾಡಿನಲ್ಲಿ ಮೊದಲ ಬಾರಿಗೆ ಜನಪ್ರತಿನಿಧಿಯೊಬ್ಬರು ಕರೊನಾಗೆ ಬಲಿಯಾದಂತಾಗಿದೆ.
ಸಿದ್ದಗಂಗಾ ಶ್ರೀ ಶಿವಕುಮಾರ ಶ್ರಿಗಳಿಗೆ ಚಿಕಿತ್ಸೆ ನೀಡಿದ್ದ ಚೆನ್ನೈನ ಡಾ. ರೇಲಾ ಇನ್​ಸ್ಟಿಟ್ಯೂಟ್​ ಆ್ಯಂಡ್​ ಮೆಡಿಕಲ್​ ಸೆಂಟರ್​ನಲ್ಲಿಯೇ ಆನ್ಬಳಗನ್​ ಚಿಕಿತ್ಸೆ ಪಡೆಯುತ್ತಿದ್ದರು. 62ನೇ ಹುಟ್ಟುಹಬ್ಬದ ದಿನದಂದೇ ಆನ್ಬಳಗನ್​ ಕುಟುಂಬ ವರ್ಗ, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಇದನ್ನೂ ಓದಿ;ಹೊತ್ತಿ ಉರಿಯುತ್ತಿರುವ ತೈಲ ಬಾವಿ ಬೆಂಕಿ ನಂದಿಸಲು ಒಂದು ತಿಂಗಳೇ ಬೇಕು….!
2001, 2011 ಹಾಗೂ 2016ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಪಕ್ಷ ನಿಷ್ಠೆಗೆ ಹೆಸರಾಗಿದ್ದ ಆನ್ಬಳಗನ್​, ಕೆಲ ಚಿತ್ರ ವಿತರಕರಾಗಿಯೂ ಕೆಲಸ ಮಾಡಿದ್ದರು. ಹಲವು ಬಿಗ್​ ಬಜೆಟ್​ ಚಿತ್ರಗಳ ವಿತರಣೆ ಮಾಡಿದ್ದರು.
ಆನ್ಬಳಗನ್​ ಅಗಲಿಕೆಯಿಂದ ತಮಿಳುನಾಡು ವಿಧಾನಸಭೆಯಲ್ಲಿ ಮೂರು ಸ್ಥಾನ ತೆರವಾದಂತಾಗಿದೆ. ಈ ಮೂರು ಸ್ಥಾನಗಳಲ್ಲಿ ಡಿಎಂಕೆ ಶಾಸಕರೇ ಇದ್ದರು. ಕೆಪಿಪಿ ಸ್ವಾಮಿ (ತಿರುವತ್ತಿಯೂರು ಕ್ಷೇತ್ರ), ಎಸ್​. ಕಥಾವರಾಯನ್​ (ಗುಡಿಯಾಟ್ಟಂ ಕ್ಷೇತ್ರ) ಇತ್ತೀಚೆಗೆ ಅಗಲಿದ ಇನ್ನಿಬ್ಬರು ಡಿಎಂಕೆ ಶಾಸಕರಾಗಿದ್ದಾರೆ.
ಕರೊನಾದಿಂದ ಕಾಪಾಡುತ್ತಿರುವ ಔಷಧಗಳಿವು; ಬೆಲೆ ಕೇಳಿದರೆ ತಲೆ ತಿರುಗುತ್ತೆ…!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × 2 =
Remember me
