ಹೈದ್ರಾಬಾದ್​:ರಾಕಿಂಗ್​ ಸ್ಟಾರ್​ ಯಶ್​ಗೆ ಅತಿದೊಡ್ಡ ಯಶಸ್ಸು ತಂದುಕೊಟ್ಟ ಕಿರಾತಕ ಸಿನಿಮಾದಲ್ಲಿ ಖಡಕ್​ ಖಳನಾಯಕನಾಗಿ ತೆರೆಯ ಮೇಲೆ ಅಬ್ಬರಿಸಿದ್ದ ನಟ ಡೇನಿಯಲ್​ ಬಾಲಾಜಿ ಹೃದಯಾಘಾತದಿಂದ ತಮಿಳುನಾಡಿನ ಚೆನ್ನೈ ಆಸ್ಪತ್ರೆಯಲ್ಲಿಂದು ಕೊನೆಯುಸಿರೆಳೆದಿದ್ದಾರೆ. ಡೇನಿಯಲ್​ ಬಾಲಾಜಿ ಅವರ ಹೆಸರಿನ ಕುರಿತಾಗಿ ಚರ್ಚೆಯೊಂದು ಶುರುವಾಗಿದೆ.
ಡೇನಿಯಲ್ ಬಾಲಾಜಿ ಅವರು ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅನೇಕ ಅಪ್ರತಿಮ ಪಾತ್ರಗಳಲ್ಲಿ ನಟಿಸಿದ್ದಾರೆ. ಮಾರ್ಚ್ 29 ರಂದು ಎದೆನೋವಿನ ಕಾರಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಕೊನೆಯುಸಿರೆಳೆದಿದ್ದರು. 48ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ದಕ್ಷಿಣದ ಎಲ್ಲಾ ಪ್ರಸಿದ್ಧ ನಟರು ಡೇನಿಯಲ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಡೇನಿಯಲ್ ಬಾಲಾಜಿ ಎಂದು ಕರೆಯಲಾಗಿದ್ದರೂ ಅದು ಅವರ ಸ್ಕ್ರೀನ್ ನೇಮ್ ಮಾತ್ರ. ಇವರ ಮೂಲ ಹೆಸರು ಟಿಸಿ ಬಾಲಾಜಿ. ಅವರ ತಂದೆ ತೆಲುಗು ಮತ್ತು ತಾಯಿ ತಮಿಳುನಾಡಿನವರು. ಆದರೆ ಅನೇಕ ಜನರು ಈತನ ಹೆಸರನ್ನು ನೋಡುತ್ತಾರೆ ಮತ್ತು ಅವನು ಕ್ರಿಶ್ಚಿಯನ್-ಹಿಂದೂ ಪೋಷಕರಿಗೆ ಜನಿಸಿದನೆಂದು ಭಾವಿಸುತ್ತಾರೆ. ಆದರೆ ಇದ್ಯಾವುದೂ ಸತ್ಯವಲ್ಲ. ಬಾಲಾಜಿ ಅವರ ಮೊದಲ ಧಾರಾವಾಹಿ ‘ಚಿಟ್ಟಿ’ಯಲ್ಲಿ ಬಾಲಾಜಿ ಪಾತ್ರಕ್ಕೆ ಡೇನಿಯಲ್ ಎಂದು ಹೆಸರಿಡಲಾಗಿತ್ತು. ಈ ಪಾತ್ರದೊಂದಿಗೆ ಬಾಲಾಜಿ ಹೆಚ್ಚು ಮನ್ನಣೆ ಗಳಿಸಿದ್ದರಿಂದ, ಅವರ ಮುಂದಿನ ಧಾರಾವಾಹಿ ‘ಅಲೈಗಳು’ ನಿರ್ದೇಶಕ ಸುಂದರ್ ಕೆ ವಿಜಯನ್ ಅವರಿಗೆ ಡೇನಿಯಲ್ ಬಾಲಾಜಿ ಎಂದು ಹೆಸರಿಸಿದರು. ಹಾಗಾಗಿ ಆ ಹೆಸರನ್ನು ಮುಂದುವರಿಸಿದರು. ಹೀಗಾಗಿ ಅವರು ಡೇನಿಯಲ್ ಬಾಲಾಜಿ  ಎಂದೆ ಪ್ರಸಿದ್ಧರಾದರು. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಡೇನಿಯಲ್ ಅವಿವಾಹಿತರಾಗಿದ್ದರು. ತಾನು ದೇವರಲ್ಲಿ ಅಪಾರ ಭಕ್ತಿ ಹೊಂದಿದ್ದು ಮದುವೆಯ ಬಗ್ಗೆ ಯೋಚಿಸಲೇ ಇಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಬಾಲಾಜಿ ಕೂಡ ಸ್ವಂತ ಹಣದಲ್ಲಿ ದೇವಸ್ಥಾನ ಕಟ್ಟಲು ಪ್ರಯತ್ನಿಸಿದರು.
ಬಾಲಾಜಿ ನಟನಾಗಿ ಖ್ಯಾತಿಯನ್ನು ಗಳಿಸಿದ್ದಲ್ಲದೆ, ಉದ್ಯಮಕ್ಕೆ ಪ್ರವೇಶಿಸುವ ಕನಸು ಕಂಡ ಅನೇಕರನ್ನು ಪ್ರೋತ್ಸಾಹಿಸಿದರು. ನಿರ್ದೇಶಕನಾಗಬೇಕೆಂಬ ಹಂಬಲ ಹೊಂದಿದ್ದ ಬಾಲಾಜಿ ತಾರಾಮಣಿ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ಫಿಲ್ಮ್ ಡೈರೆಕ್ಷನ್ ಕೋರ್ಸ್ ಕೂಡ ಮಾಡಿದ್ದಾರೆ.
ವಿಜಯ್​ ಅಭಿನಯದ ಬಿಗಿಲ್​, ಭೈರವ ಸಿನಿಮಾಗಳಲ್ಲಿ ಬಾಲಾಜಿ ನಟಿಸಿದ್ದರು. ಅಲ್ಲದೆ, ಕಾಖಾಕಾಖಾ, ವೆಟ್ಟೈಯಾಟು ವಿಳೈಯಾಡು, ಪೊಲ್ಲಾದವನ್​, ಎನ್ನೈ ಅರಿಂದಾಲ್​ ಸೇರಿಂದತೆ ಅನೇಕ ಸೂಪರ್​ ಹಿಟ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿರಾತಕ ಜತೆಗೆ ಶಿವಾಜಿ ನಗರ, ಬೆಂಗಳೂರು ಅಂಡರ್​ವರ್ಲ್ಡ್ ಹಾಗೂ ಡವ್​ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಇವರು ಸಿನಿರಸಿಕರಿಗೆ ಚಿರಪರಿಚಿತರು ಎಂದು ಹೇಳಬಹುದಾಗಿದೆ.
ಬಿಳಿ ಕೂದಲಿಗೆ ಇಲ್ಲಿದೆ ಶಾಶ್ವತ ಪರಿಹಾರ; ಪಾರ್ಲರ್​ ಹೋಗ್ಬೇಡಿ ಈ ಎಣ್ಣೆಯನ್ನು ಕಾಫಿಪುಡಿಗೆ ಬೆರೆಸಿ ಹಚ್ಚಿದ್ರೆ ಸಾಕು…

‘ಫಸ್ಟ್ ನೈಟ್’ ದಿನವೇ ಬೆಡ್‌ರೂಮ್​ನಲ್ಲಿ ಪ್ರಾಣ ಬಿಟ್ಟ ವಧು, ರಾತ್ರಿ ಏನಾಯ್ತು?

ಆಡಿ Q7 ಕಾರು ಖರೀದಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಲಗ್ನ ಪತ್ರಿಕೆಯಲ್ಲಿ ಮುಹೂರ್ತ ಫಿಕ್ಸ್ ಮಾಡಿ, ನಾನು ಮದುವೆ ಆಗಲ್ಲ ಎಂದು ಟ್ವಿಸ್ಟ್ ಕೊಟ್ಟ ನಟ

ದೇವಸ್ಥಾನ ಬದಿಯಲ್ಲಿರುವ ಬಡವರ ಹಸಿವು ನೀಗಿಸುತ್ತಿರುವ ಸಾರಾ ಅಲಿ ಖಾನ್; ವಿಡಿಯೋ ನೋಡಿದ್ರೆ ಹ್ಯಾಟ್ಸಾಫ್ ಹೇಳ್ತಿರಾ…

ಹಲಸಿನ ಹಣ್ಣು ತಿನ್ನುವ ಮುನ್ನ ಈ ಮಾಹಿತಿ ತಿಳಿದಿದ್ದರೆ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen + 8 =
Remember me
