ಕಾನ್ಪುರ: ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ನಡೆಸಿದ ಎನ್​​ಕೌಂಟರ್​​ನಲ್ಲಿ ‘ಶುಕ್ರವಾರ ಬೆಳಿಗ್ಗೆ ಹತನಾದ ದರೋಡೆಕೋರ ವಿಕಾಸ್ ದುಬೆನ ಪ್ರಮುಖ ಸಹವರ್ತಿ ಅಮರ್ ದುಬೆಗೆ ಕರೊನಾ ಸೋಂಕು ದೃಢಪಟ್ಟ ಹಿನ್ನೆಲೆ ವಿಕಾಸ್​​ ದುಬೆನನ್ನೂ ಕೂಡ ಕೋವಿಡ್ -19 ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ. ಆತನ COVID-19 ಪರೀಕ್ಷಾ ವರದಿ ಬಂದ ನಂತರವೇ ಮರಣೋತ್ತರ ಪರೀಕ್ಷೆ ನಡೆಯಲಿದೆ.ಉತ್ತರ ಪ್ರದೇಶದ ಹಮೀರ್‌ಪುರದ ಗ್ರಾಮ ಮೌಡಾಹಾದಲ್ಲಿ ಅಮರ್​​​ ನನ್ನು ಬುಧವಾರ ಗುಂಡಿಕ್ಕಿ ಕೊಲ್ಲಲಾಗಿದೆ. ಆತ ಆಗಾಗ್ಗೆ ದರೋಡೆಕೋರನ ಅಂಗರಕ್ಷಕನಂತೆ ಬಂದೂಕನ್ನು ಹೊತ್ತುಕೊಂಡು ಹೋಗುತ್ತಿದ್ದ. ಆತನಿಗೆ ಭದ್ರತೆ ಒದಗಿಸಲು ಅವನು ಅವನೊಂದಿಗೆ ಪ್ರಯಾಣಿಸುತ್ತಿದ್ದ.
ಇದನ್ನೂ ಓದಿ:ವಿಕಾಸ್​ ದುಬೆ ಎನ್​​ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?
ಹತ್ಯೆಗೀಡಾದ ದರೋಡೆಕೋರನ ಶವವನ್ನು ಕಾನ್ಪುರದ ಹ್ಯಾಲೆಟ್ ಆಸ್ಪತ್ರೆಯಲ್ಲಿ ಇಡಲಾಗಿದೆ. ಆತನ ಕುಟುಂಬದ ಸದಸ್ಯರು ಯಾರೂ ಇನ್ನೂ ಆಸ್ಪತ್ರೆಗೆ ಬಂದಿಲ್ಲ ಎಂದು ವರದಿಯಾಗಿದೆ. ಆತನ ತಾಯಿ ಸರ್ಲಾ ದುಬೆ ಲಖನೌದಲ್ಲಿದ್ದರೆ, ಪತ್ನಿ ರಿಚಾ ದುಬೆ ಮತ್ತು ಮಗ ಕಾನ್ಪುರದ ಪೊಲೀಸ್ ಲೈನ್ಸ್‌ನಲ್ಲಿದ್ದಾರೆ. ಅವರನ್ನು ಗುರುವಾರ ಸಂಜೆ ಪೊಲೀಸ್ ವಿಚಾರಣೆಗಾಗಿ ಕರೆದೊಯ್ಯಲಾಗಿದೆ. ಸಹೋದರ ದೀಪ್ ಪ್ರಕಾಶ್ ದುಬೆ ಪರಾರಿಯಾಗಿದ್ದಾನೆ.
ದುಬೆ ಜೀವ ಉಳಿಸಲು ನಿನ್ನೆಯೇ ಕೋರ್ಟ್‌ಗೆ ಸಲ್ಲಿಸಲಾಗಿತ್ತು ಅರ್ಜಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
