ಕೊಚ್ಚಿ:ಓದಿನಲ್ಲಿ ಗಮನವಹಿಸಬೇಕಾದ ಇಬ್ಬರು ಇಂಜಿನಿಯರಿಂಗ್​ ವಿದ್ಯಾರ್ಥಿಗಳು ನಾಯಿ ಮರಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಬಂಧಿತ ವಿದ್ಯಾರ್ಥಿಗಳನ್ನು ನಿಖಿಲ್​ ಮತ್ತು ಶ್ರೇಯಾ ಎಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರನ್ನು ಕೇರಳದ ಪನಂಗದ ಠಾಣಾ ಪೊಲೀಸರು ಕರ್ನಾಟಕದ ಕಾರ್ಕಳದಲ್ಲಿ ಬಂಧಿಸಿದ್ದಾರೆ. ಇಬ್ಬರು ವಿದ್ಯಾರ್ಥಿಗಳಿಂದ 45 ದಿನದ ಹಾಗೂ 20 ಸಾವಿರ ರೂಪಾಯಿ ಮೌಲ್ಯದ ನಾಯಿ ಮರಿಯನ್ನು ವಶಕ್ಕೆ ಪಡೆಯಲಾಗಿದೆ.
ನಿಖಿಲ್​ ಮತ್ತು ಶ್ರೇಯಾ ಕೇರಳದ ನೆಟ್ಟೂರಿನಲ್ಲಿರುವ ಸಾಕು ಪ್ರಾಣಿಗಳ ಅಂಗಡಿಯಿಂದ ನಾಯಿ ಮರಿಯನ್ನು ಕದ್ದಿದ್ದರು. ಈ ಘಟನೆ ಜ.28 ರಂದು ಸಂಜೆ 7 ಗಂಟೆಗೆ ನಡೆದಿತ್ತು. ಬೆಕ್ಕು ಖರೀದಿಸಲೆಂದು ಇಬ್ಬರು ಪೆಟ್​ ಶಾಪ್​ಗೆ ತೆರಳಿದ್ದರು. ಅಂಗಡಿ ಮಾಲೀಕನ ಗಮನ ಬೇರೆಡೆಗೆ ಹೋದಾಗ ಪಂಜರದಲ್ಲಿದ್ದ ನಾಯಿ ಮರಿಯನ್ನು ಎತ್ತಿಕೊಂಡು ಹೆಲ್ಮೆಟ್​ ಒಳಗೆ ಹಾಕಿಕೊಂಡು ಹೋಗಿದ್ದಾರೆ. ಮೂರು ಸ್ಪಿಟ್ಜ್ ನಾಯಿಮರಿಗಳಲ್ಲಿ ಒಂದನ್ನು ಕದ್ದಿದ್ದಾರೆ. ಅಲಪ್ಪುಳ ಮೂಲದವರೊಬ್ಬರ ಬೇಡಿಕೆಯಂತೆ ಸ್ಪಿಟ್ಜ್ ನಾಯಿಮರಿಗಳನ್ನು ತರಲಾಗಿತ್ತು.
ಇಬ್ಬರು ತೆರಳಿದ ಬಳಿಕ ಆಲಪ್ಪುಳ ಮೂಲದ ವ್ಯಕ್ತಿ ನಾಯಿಮರಿಗಾಗಿ ಬಂದಾಗ ಅಂಗಡಿಯ ಮಾಲೀಕರಿಗೆ ಕಳ್ಳತನ ನಡೆದಿರುವುದು ಗೊತ್ತಾಗಿದೆ. ನಾಯಿಮರಿ ಸ್ಥಳದಿಂದ ಓಡಿಹೋಗಿರಬಹುದು ಎಂದು ಅವರು ಮೊದಲು ಭಾವಿಸಿದ್ದರು. ಆದರೆ, ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ನಿಖಿಲ್​ ಮತ್ತು ಶ್ರೇಯಾ ಅವರು ಸಂಚರಿಸಿದ ಮಾರ್ಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ವೈಟ್ಟಿಲದ ಅಂಗಡಿಯೊಂದರಲ್ಲಿ ಇಬ್ಬರೂ ಆಹಾರ ಕಳ್ಳತನ ಮಾಡಿರುವುದೂ ಗಮನಕ್ಕೆ ಬಂದಿದೆ. ಪೆಟ್​ ಶಾಪ್​ ಮಾಲೀಕರು ದೂರು ದಾಖಲಿಸಿದ್ದು, ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.(ಏಜೆನ್ಸೀಸ್​)
(ವಿಡಿಯೋ ಕೃಪೆ: ಡಿಟಿ ನೆಕ್ಸ್ಟ್​)

ಬಳ್ಳಾರಿಯಲ್ಲಿ ಸಹೋದರರ ಸವಾಲ್​! ಜನಾರ್ದನ ರೆಡ್ಡಿಗೆ ಸೋಮಶೇಖರ ರೆಡ್ಡಿ ಮಾತಿನ ಪಂಚ್​

ದೇಶದ ಮೊದಲ ತೃತೀಯಲಿಂಗಿ ಗರ್ಭಧಾರಣೆ! ಫೋಟೋ ಶೇರ್​ ಮಾಡಿ ಸಂತಸ ಹಂಚಿಕೊಂಡ ದಂಪತಿ

ಸಿಕಲ್ ಸೆಲ್ ಅನೀಮಿಯಾ ವಿರುದ್ಧ ಮಹತ್ವದ ಹೆಜ್ಜೆ; ತಜ್ಞರ ಅಭಿಪ್ರಾಯ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 4 =
Remember me
