ನವದೆಹಲಿ: ರಾಜಧಾನಿ ಬೆಂಗಳೂರಿನಲ್ಲಿ ಸಾರ್ವಜನಿಕರು ರಾತ್ರಿ ಸಂಚರಿಸುವಾಗ ಕಳ್ಳರು ಎದುರಾಗುತ್ತಾರೋ ಇಲ್ಲವೋ, ಬೀದಿನಾಯಿಗಳಂತೂ ಖಂಡಿತ ಎದುರಾಗುತ್ತವೆ. ರಾತ್ರಿ ಮಾತ್ರವಲ್ಲ ಹಗಲಲ್ಲೂ ಬೀದಿನಾಯಿಗಳ ಹಾವಳಿ ಕಡಿಮೆ ಏನಿಲ್ಲ. ಇದು ಬರೀ ರಾಜ್ಯದ ಸಮಸ್ಯೆಯಷ್ಟೇ ಅಲ್ಲ, ದೇಶಾದ್ಯಂತವೂ ಈ ಸಮಸ್ಯೆ ಕಾಡುತ್ತಿದೆ.
ಆರೋಗ್ಯ ಖಾತೆಯ ರಾಜ್ಯ ಸಚಿವ, ಗುಜರಾತ್​ನ ಸತ್ಯಪಾಲ್​ ಸಿಂಗ್ ಬಘೇಲ್ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ನೀಡಿದ್ದ ಅಂಕಿ-ಅಂಶಗಳಿಂದ ಬೀದಿನಾಯಿ ಕಡಿತದ ಪ್ರಕರಣಗಳ ಸಮಸ್ಯೆಯ ತೀವ್ರತೆ ಅನಾವರಣಗೊಂಡಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಬೀದಿನಾಯಿ ಕಡಿತದ ಕುರಿತು ಅಂಕಿ-ಅಂಶ ತೆರೆದಿಟ್ಟರು.
ಇದನ್ನೂ ಓದಿ:ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ‘ಚಾಯ್​ವಾಲಾ’ನ ಫೋಟೋ ಹಂಚಿಕೊಂಡ ನಟ ಪ್ರಕಾಶ್ ರಾಜ್!
ಕಳೆದ ವರ್ಷದಲ್ಲಿ ಬೀದಿನಾಯಿ ಕಡಿತದಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿತ್ತು. ಅಲ್ಲಿ, ಗಂಟೆಗೆ 45 ಬೀದಿನಾಯಿ ಕಡಿತ ಪ್ರಕರಣ ಸಂಭವಿಸಿದ್ದರೆ, ತಮಿಳುನಾಡಿನಲ್ಲಿ 42, ಉತ್ತರಪ್ರದೇಶದಲ್ಲಿ 22, ಗುಜರಾತ್​ ಮತ್ತು ಕರ್ನಾಟಕದಲ್ಲಿ 19 ಹಾಗೂ ಬಿಹಾರದಲ್ಲಿ 16 ಎಂಬ ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಆಣೆ ಮಾಡುವ ಹಂತಕ್ಕೆ ತಲುಪಿತು ಸೌಜನ್ಯಾ ಪ್ರಕರಣ; ಇಬ್ಬರ ಮಧ್ಯೆ ಆರೋಪ, ದೇವರ ಮುಂದೆ ಪ್ರಮಾಣ!
ಗುಜರಾತ್​ನಲ್ಲಿ 2022ರಲ್ಲಿ ಬೀದಿನಾಯಿ ಕಡಿತಕ್ಕೆ ಸಂಬಂಧಿಸಿದಂತೆ ಒಟ್ಟು 1,69,261 ಪ್ರಕರಣಗಳು ದಾಖಲಾಗಿವೆ. ಅಂದರೆ ಪ್ರತಿ ಗಂಟೆಗೆ 19 ಮಂದಿಗೆ ಬೀದಿನಾಯಿಗಳು ಕಚ್ಚಿವೆ, ಅರ್ಥಾತ್, ಒಂದು ದಿನಕ್ಕೆ 464 ಪ್ರಕರಣ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ ಎಂದೂ ಅವರು ತಿಳಿಸಿದ್ದಾರೆ. ಬೀದಿನಾಯಿ ಕಡಿತಕ್ಕೆ ಸಂಬಂಧಿಸಿದಂತೆ 2020ರಲ್ಲಿ 4.31 ಲಕ್ಷ ಇದ್ದ ಪ್ರಕರಣ, 2021ರಲ್ಲಿ 1.91 ಲಕ್ಷ ಹಾಗೂ 2022ರಲ್ಲಿ 1.69 ಲಕ್ಷ ಆಗುವ ಮೂಲಕ ಇಳಿಕೆ ಕಂಡಿದೆ ಎಂದಿದ್ದಾರೆ.
ಪತಿ ಯಾವುದೇ ಕ್ಷಣದಲ್ಲೂ ನಮ್ಮನ್ನು ಕೊಲ್ಲಬಹುದು: ಮಕ್ಕಳಿಬ್ಬರ ಸಹಿತ ವಿಡಿಯೋ ಮಾಡಿ ಸಹಾಯ ಕೇಳಿದ ಪತ್ನಿ

ಮತ್ತೊಂದು ಗಡಿ ಮೀರಿದ ಪ್ರೇಮ: ಭಾರತೀಯ ಪ್ರೇಮಿಗಾಗಿ ದೇಶ ಬಿಟ್ಟು ಬಂದ ಪ್ರೇಯಸಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 11 =
Remember me
