ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ವಜನಿಕರಿಗೆ ಮತ್ತೊಂದು ಭರವಸೆ ನೀಡಿದ್ದಾರೆ. ಜಾರ್ಖಂಡ್‌ನ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ನಿವಾಸದ ಮೇಲೆ ಆದಾಯ ತೆರಿಗೆ ದಾಳಿ ಮತ್ತು ನೂರಾರು ಕೋಟಿ ಮೌಲ್ಯದ ನಗದು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದಂತೆ ಟ್ವೀಟ್​ನಲ್ಲಿ, ‘ದೇಶವಾಸಿಗಳು ಈ ನೋಟುಗಳ ರಾಶಿಯನ್ನು ನೋಡಿ ಆ ನಂತರ ಪ್ರಾಮಾಣಿಕತೆಯನ್ನು ನಿರ್ಣಯಿಸಬೇಕು. ಯಾವುದೇ ನಾಯಕ ಸಾರ್ವಜನಿಕರಿಂದ ಏನೇ ಲೂಟಿ ಮಾಡಿದದ್ದರೂ ಪ್ರತಿ ಪೈಸೆಯನ್ನೂ ವಾಪಸ್ ಕೊಡಲೇಬೇಕು. ಇದು ಮೋದಿ ಗ್ಯಾರಂಟಿ ಎಂದಿದ್ದಾರೆ.
ಇದನ್ನೂ ಓದಿ:‘ಅಸ್ಸಾಂ ಮೂಲತಃ ಮ್ಯಾನ್ಮಾರ್‌ನ ಭಾಗವಾಗಿತ್ತು’: ಸುಪ್ರೀಂ ಕೋರ್ಟ್‌ನಲ್ಲಿ ಕಪಿಲ್ ಸಿಬಲ್ ಅಭಿಮತಧೀರಜ್ ಸಾಹು ಅವರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ಸತತ ಮೂರನೇ ದಿನವೂ ಮುಂದುವರೆದಿದೆ. ಒಡಿಶಾ ಮತ್ತು ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ನಾಯಕರ ಮನೆಗಳ ಮೇಲೆ ನಡೆದ ದಾಳಿಯಲ್ಲಿ ಇದುವರೆಗೆ 100 ಕೋಟಿ ರೂಪಾಯಿಗೂ ಅಧಿಕ ನಗದು ಪತ್ತೆಯಾಗಿದೆ. ಇಷ್ಟು ದೊಡ್ಡ ಮೊತ್ತದ ನಗದು ಪತ್ತೆಯಾಗಿರುವ ಕಾರಣ ಆದಾಯ ತೆರಿಗೆ ಇಲಾಖೆ ತಂಡ ಯಂತ್ರದ ಮೂಲಕ ನೋಟುಗಳನ್ನು ಎಣಿಕೆ ಮಾಡಬೇಕಾಗಿ ಬಂದಿದೆ.
ರೆಡ್ ಬೌದ್ಧ ಡಿಸ್ಟಿಲರಿ ಸಂಸದ ಧೀರಜ್ ಸಾಹು ಅವರ ಕುಟುಂಬದ ಕಂಪನಿಯಾಗಿದೆ. ಅವರು ಒಡಿಶಾದಲ್ಲಿ ಅನೇಕ ಮದ್ಯ ತಯಾರಿಕಾ ಕಾರ್ಖಾನೆಗಳನ್ನು ಹೊಂದಿದ್ದಾರೆ. ಅವಿಭಕ್ತ ಕುಟುಂಬದ ಬೆಂಬಲದೊಂದಿಗೆ ಈ ವ್ಯವಹಾರ ನಡೆಸಲಾಗುತ್ತಿದೆ. 200 ಕೋಟಿ ನಗದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿವೆ. ಜಾರ್ಖಂಡ್‌ನ ಬೋಲಂಗಿರ್ ಮತ್ತು ಒಡಿಶಾದ ಸಂಬಲ್‌ಪುರದ ಧೀರಜ್ ಸಾಹು ಅವರ ಪೂರ್ವಜರ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಭ್ರಷ್ಟಾಚಾರ ಎಲ್ಲರಿಗೂ ಗೊತ್ತು:ಜಾರ್ಖಂಡ್‌ನ ರಾಂಚಿ ಮತ್ತು ಲೋಹರ್ಡಗಾದಲ್ಲಿರುವ ಸಂಸ್ಥೆಗಳ ಮೇಲೂ ದಾಳಿ ನಡೆಸಲಾಗುತ್ತಿದೆ. ನಗದು ಪತ್ತೆಯಾಗಿರುವ ಚಿತ್ರಗಳು ಕೂಡ ಹೊರಬಿದ್ದಿದ್ದು, ಅಲ್ಮೇರಾದಲ್ಲಿ 500 ಮತ್ತು 200 ರೂಪಾಯಿ ನೋಟುಗಳ ಬಂಡಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗಿವೆ. ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್, ಐಟಿ ದಾಳಿಯಲ್ಲಿ 200 ಕೋಟಿ ರೂ. ಪತ್ತೆಯಾಗಿದ್ದು, ಕಾಂಗ್ರೆಸ್ ಭ್ರಷ್ಟಾಚಾರ ಎಲ್ಲರಿಗೂ ಗೊತ್ತು. ಈ ಬಗ್ಗೆ ಜನರೂ ತಮ್ಮ ಆಕ್ರೋಶ ವ್ಯಕ್ತಪಡಿಸಬೇಕು ಎಂದಿದ್ದಾರೆ.ಜಾರ್ಖಂಡ್‌ನ ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ದೀಪಕ್ ಪ್ರಕಾಶ್ ಮಾತನಾಡಿ, ‘ಕಾಂಗ್ರೆಸ್‌ನ ಒಬ್ಬ ಸಂಸದನ ಮನೆಯಿಂದ ಇಷ್ಟು ದೊಡ್ಡ ಮೊತ್ತ ವಶಪಡಿಸಿಕೊಂಡಿದ್ದು, 70 ವರ್ಷದಿಂದ ದೇಶವನ್ನು ಹಾಳು ಮಾಡುತ್ತಿರುವವರು ಇನ್ನೂ ಎಷ್ಟು ಮಂದಿ ಇರಬಹುದೆಂದು ಊಹಿಸಬಹುದು ಎಂದಿದ್ದಾರೆ.
ಬೆಲೆ ನಿಯಂತ್ರಣಕ್ಕೆ ಕೇಂದ್ರ ಮಹತ್ವದ ನಿರ್ಧಾರ:ಈರುಳ್ಳಿ ರಪ್ತು ಮೇಲಿನ ನಿರ್ಬಂಧ ವಿಸ್ತರಣೆ – ಬೇಳೆಕಾಳು ಆಮದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 18 =
Remember me
