ಅಮರಾವತಿ:ಕರೊನಾ ಸೋಂಕು ಸಂಕಷ್ಟ ತಂದಿಟ್ಟಿರುವ ಬೆನ್ನಲ್ಲೇ ಆಂಧ್ರ ಪ್ರದೇಶದ ಎಲೂರಿನಲ್ಲಿ ನಿಗೂಢ ಕಾಯಿಲೆಯೊಂದು ಪತ್ತೆಯಾಗಿದೆ. ಶನಿವಾರದಿಂದ ಇಂದಿನವರೆಗೆ ಸುಮಾರು 550ಕ್ಕೂ ಹೆಚ್ಚು ಮಂದಿಯನ್ನು ಅಸ್ವಸ್ಥ ಮಾಡಿರುವ ಈ ಕಾಯಿಲೆಗೆ ಕಾರಣವೇನು ಎನ್ನುವುದಕ್ಕೆ ಇದೀಗ ಮೂಲಗಳು ಸಿಗಲಾರಂಭಿಸಿವೆ.
ಇದನ್ನೂ ಓದಿ:ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ
ಈ ಕಾಯಿಲೆಗೆ ಒಳಗಾದವರ ರಕ್ತದ ಮಾದರಿಯಲ್ಲಿ ಅತಿಯಾದ ಲೋಹದ ಪ್ರಮಾಣ ಕಂಡುಬಂದಿರುವುದಾಗಿ ವರದಿ ಹೇಳಿದೆ. ಇವರೆಲ್ಲರ ದೇಹದಲ್ಲಿ ಸೀಸ ಮತ್ತು ನಿಕ್ಕಲ್​ನಂತಹ ಲೋಹದ ಪ್ರಮಾಣ ಹೆಚ್ಚಾಗಿದೆ. ಜನರು ಅಸ್ವಸ್ಥರಾಗಿರುವುದಕ್ಕೆ ಇದೂ ಒಂದು ಕಾರಣವಾಗಿರಬಹುದು ಎಂದು ಪಶ್ಚಿಮ ಗೋದಾವರಿ ಜಿಲ್ಲೆಯ ಜಂಟಿ ಕಲೆಕ್ಟರ್ ಹಿಮಾಂಶು ಶುಕ್ಲಾ ಅವರು ತಿಳಿಸಿದ್ದಾರೆ. ಆದರೆ ಈ ಪ್ರಮಾಣ ಲೋಹ ಅವರ ದೇಹದೊಳಗೆ ಹೋಗಿದ್ದು ಹೇಗೆ ಎನ್ನುವುದರ ಬಗ್ಗೆ ಇನ್ನೂ ಅಧ್ಯಯನ ನಡೆಸಲಾಗುತ್ತಿದೆ.
ಈಗಾಗಲೇ ಹಾಲು ಮತ್ತು ನೀರಿನ ಪರಿಶೀಲನೆ ನಡೆಸಲಾಗಿದೆ. ಅದರಲ್ಲಿ ಹೆಚ್ಚಿನ ಲೋಹದ ಅಂಶ ಕಂಡುಬಂದಿಲ್ಲ. ನೀರು ಮತ್ತು ಹಾಲಿನಿಂದ ಈ ಸಮಸ್ಯೆಯಾಗಿರುವ ಸಾಧ್ಯತೆಯಿಲ್ಲ. ತರಕಾರಿ, ಸಿಹಿ ತಿಂಡಿಗಳನ್ನು ಪರಿಶೀಲನೆಗೆ ಕಳುಹಿಸಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಕೇಂದ್ರ ಸರ್ಕಾರಕ್ಕೂ ಮೊದಲು ರೈತರೊಂದಿಗೆ ಮಾತನಾಡಲು ಸಿದ್ಧರಾದ ಅಮಿತ್​ ಷಾ; ಇಂದು ಸಂಜೆ 7ಕ್ಕೆ ಸಭೆ
ಆಂಧ್ರಪ್ರದೇಶದ ಎಲೂರಿಗೆ ಕೇಂದ್ರ ಸರ್ಕಾರವು ಮೂವರು ತಜ್ಞರ ತಂಡವನ್ನು ಕಳುಹಿಸಿದೆ. ಏಮ್ಸ್‌ನ ತುರ್ತು ಔಷಧ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಜಮ್‌ಷೆಡ್ ನಾಯರ್, ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ತಜ್ಞ ಡಾ. ಅವಿನಾಶ್ ದಿಯೋಷ್ಟವರ್ ಮತ್ತು ದೆಹಲಿಯ ರಾಷ್ಟ್ರೀಯ ಕಾಯಿಲೆ ನಿಯಂತ್ರಣ ಕೇಂದ್ರದ ಉಪ ನಿರ್ದೇಶಕ ಡಾ. ಸಂಕೇತ್ ಕುಲಕರ್ಣಿ ಅವರು ಪರಿಸ್ಥಿತಿಯ ಅಧ್ಯಯನ ಮಾಡುತ್ತಿದ್ದಾರೆ.
ಈವರಗೆ 551 ಮಂದಿ ನಿಗೂಢ ಕಾಯಿಲೆಯಿಂದಾಗಿ ಆಸ್ಪತ್ರೆ ಸೇರಿದ್ದು, ಅದರಲ್ಲಿ 174ಜನರು ಇನ್ನೂ ಆಸ್ಪತ್ರೆಯಲ್ಲಿದ್ದರೆ, 350 ಜನರನ್ನು ಬಿಡುಗಡೆ ಮಾಡಲಾಗಿದೆ. ಓರ್ವ ಕಾಯಿಲೆಯಿಂದಾಗಿ ಮೃತನಾಗಿದ್ದಾನೆ. (ಏಜೆನ್ಸೀಸ್​)
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

https://www.vijayavani.net/bride-leaves-from-marriage-hall/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − twelve =
Remember me
