ಬೆಂಗಳೂರು:ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಸುದ್ದಿಯ ಜೊತೆಗೆ ಮ್ಯಾಟ್ರಿಮೋನಿಯಲ್ ಜಾಹೀರಾತು ಕೂಡ ಇರುತ್ತದೆ. ವರ ಮತ್ತು ವಧುವಿನ ಘೋಷಣೆಗಳೊಂದಿಗೆ ಅಂತಹ ಜಾಹೀರಾತುಗಳು ಬರುತ್ತವೆ. ಆದರೆ, ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಬಂದಿರುವ ಜಾಹೀರಾತು ಜನರಲ್ಲಿ ಭಯ ಹುಟ್ಟಿಸುತ್ತಿದೆ. ಇದನ್ನು ನೋಡಿದ ಜನ ಈ ವಿಚಿತ್ರ ಎಲ್ಲಿ ಎಂದು ಆಶ್ಚರ್ಯ ಪಡುತ್ತಿದ್ದಾರೆ.
ಇದನ್ನೂ ಓದಿ:ಹೇ ಪ್ರಭು.. ಇಂತಹ ಯೋಚನೆಗಳು ಎಲ್ಲಿಂದ ಬರುತ್ತವೆ? ಸೊಳ್ಳೆ ಬ್ಯಾಟ್‌ನಿಂದ ಇದನ್ನೂ ಮಾಡಬಹುದಾ?
ಹೌದು, ಇದು ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕುಟುಂಬವೊಂದು ನೀಡಿರುವ ಜಾಹೀರಾತು. 30 ವರ್ಷಗಳ ಹಿಂದೆ ಮೃತಪಟ್ಟ ಹೆಣ್ಣುಮಗುವಿನ ಕುಟುಂಬಸ್ಥರು ಮದುವೆಗೆ ವರ ಬೇಕೆಂದು ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದರು. ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟ ಹೆಣ್ಣುಮಗಳಿಗೆ ಮದುವೆ ಘೋಷಣೆಯನ್ನು ಈಗ ಏಕೆ ಮಾಡಿದರು? ಎಂಬ ಅನುಮಾನ ಬರುವುದು ಖಂಡಿತ. ಇದಕ್ಕೆ ಕಾರಣ ತಿಳಿದರೆ ಬೆಚ್ಚಿ ಬೀಳುತ್ತೀರಿ.
ಜಾಹೀರಾತು ನೀಡಿರುವ ಕುಟುಂಬದಲ್ಲಿ ಹೆಣ್ಣು ಮಗಳು, ಶಿಶು ಹಂತದಲ್ಲಿಯೇ ತನ್ನ ಜೀವ ಕಳೆದುಕೊಂಡಳು. ಆ ಮಗುವಿನ ವಯಸ್ಸನ್ನು ಲೆಕ್ಕ ಹಾಕಿದರೆ ಇಷ್ಟೊತ್ತಿಗಾಗಲೇ 30 ವರ್ಷ. ಆದರೆ, ಮಗು ಸತ್ತಾಗಿನಿಂದ ಅವರ ಮನೆಯಲ್ಲಿ ನಿತ್ಯ ತೊಂದರೆಯಾಗುತ್ತಿದೆ. ಅವರು ಯಾವಾಗಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏನು ಮಾಡಬೇಕೆಂದು ತಿಳಿಯದೆ ಕೆಲವು ಹಿರಿಯರು ಮತ್ತು ಮಾಂತ್ರಿಕ ಮೊರೆ ಹೋದರು. ಅವರು ನೀಡಿದ ಸಲಹೆ ಏನೆಂದರೆ.. ಮೃತ ಮಗುವಿನ ವಯಸ್ಸು ಈಗ 30 ವರ್ಷ. ಅವಿವಾಹಿತೆ ಸಾವನ್ನಪ್ಪಿದ್ದರಿಂದ ಆಕೆಯ ಆತ್ಮಕ್ಕೆ ಶಾಂತಿ ಸಿಗಲಿಲ್ಲ. ಇದಕ್ಕೆ ಪರಿಹಾರವಾಗಿ ಆಕೆಯ ಮದುವೆ ಮಾಡುವಂತೆ ಸೂಚಿಸಲಾಗಿತ್ತು.
ಇದನ್ನು ನಂಬಿದ ಮನೆಯವರು ವರನಿಗಾಗಿ ಪ್ರಯತ್ನವನ್ನು ತೀವ್ರಗೊಳಿಸಿದರು. ಈ ಕ್ರಮದಲ್ಲಿ ಮೃತ ಮಗಳ ಮದುವೆಗೆ ವರ ಬೇಕು ಎಂದು ಘೋಷಿಸಿದ್ದಾರೆ.
ಇಲ್ಲಿ ಇನ್ನೊಂದು ಟ್ವಿಸ್ಟ್:30 ವರ್ಷದ ಹಿಂದೆ ತೀರಿಕೊಂಡ ವಧುವಿಗೆ 30 ವರ್ಷದ ಹಿಂದೆ ತೀರಿಕೊಂಡ ವರಬೇಕು ಎಂದು ಆ ಘೋಷಣೆ ನೀಡಿರುವುದು ಮತ್ತೊಂದು ಟ್ವಿಸ್ಟ್ ಎಂದೇ ಹೇಳಬೇಕು. ಯಾಕೆಂದರೆ, ಸತ್ತ ಹೆಣ್ಣಿಗೆ ಬದುಕಿರುವ ಪುರುಷನನ್ನು ಮದುವೆಯಾಗುವುದು ಅಸಾಧ್ಯ. ಅದಕ್ಕೇ ಸತ್ತ ಮನುಷ್ಯ ಬೇಕು ಎಂದು ಘೋಷಣೆ ಮಾಡಿದ್ದಾರೆ.
‘30 ವರ್ಷಗಳ ಹಿಂದೆ ತೀರಿಕೊಂಡ ವಧುವಿಗೆ… 30 ವರ್ಷಗಳ ಹಿಂದೆ ತೀರಿಕೊಂಡ ವರ ಬೇಕು. ಆತ್ಮ ವಿವಾಹಕ್ಕೆ ಈ ಸಂಖ್ಯೆಗೆ ***** ಕರೆ ಮಾಡಿ’ ಎಂದು ಪೇಪರ್‌ನಲ್ಲಿ ಜಾಹೀರಾತು ನೀಡಲಾಗಿತ್ತು.
ಪ್ರಯತ್ನ ವ್ಯರ್ಥ:ಕುಟುಂಬದವರು, ಬಂಧು ಮಿತ್ರರು ಎಷ್ಟೇ ಪ್ರಯತ್ನ ಪಟ್ಟರೂ ಅದೇ ವಯಸ್ಸಿನ, ಜಾತಿಯ ಮೃತ ವರ ಸಿಗುತ್ತಿಲ್ಲ. ಮದುವೆ ಆಗದ ಕಾರಣ ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ಅದು ಇಲ್ಲಿನ ಪದ್ಧತಿ:ಈ ಪದ್ಧತಿ ತುಳುನಾಡಿನಲ್ಲಿ ಅನಾದಿ ಕಾಲದಿಂದಲೂ ಇದೆ. ಈ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹಿರಿಯರ ಪ್ರಕಾರ.. ಸತ್ತವರು ತಮ್ಮ ಕುಟುಂಬಕ್ಕೆ ಹತ್ತಿರವಾಗುತ್ತಾರೆ. ಅವರ ಸುಖ-ದುಃಖಗಳನ್ನು ಹಂಚಿಕೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ, ಶಾಂತಿ ಸಿಗುತ್ತದೆ. ಈ ಕಾರಣಕ್ಕಾಗಿಯೇ.. ಆತ್ಮಗಳಿಗೆ ಶಾಂತಿ ನೀಡಲೆಂದು ಆತ್ಮಗಳ ಮದುವೆ ಮಾಡಲಾಗುತ್ತದೆ.
ಆಕೆಗೆ 54, ಆತನಿಗೆ 52 ವರ್ಷ! 25 ವರ್ಷದ ಪ್ರೀತಿಗೆ ಈಗ ಮದ್ವೆ ಬೆಸುಗೆ, ಇಬ್ಬರ ಲವ್​ಸ್ಟೋರಿ ಕೇಳಿದ್ರೆ ಮನ ಕರಗುತ್ತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − one =
Remember me
