ನವದೆಹಲಿ:ರಾಜಸ್ಥಾನದ ರಾಜಕೀಯ ನಾಟಕ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸೋಮವಾರ ಬೆಳಗ್ಗೆ ಕರೆಯಲಾಗಿದ್ದ ಕಾಂಗ್ರಸ್​ ಶಾಸಕಾಂಗ ಪಕ್ಷದ ಸಭೆಯಲ್ಲಿ 107 ಶಾಸಕರು ಪಾಲ್ಗೊಂಡಿದ್ದರು ಎಂದು ಸಿಎಂ ಅಶೋಕ್​ ಗೆಹ್ಲೋಟ್​ ಅವರ ಮಾಧ್ಯಮ ಕಾರ್ಯದರ್ಶಿ ಹೇಳಿದ್ದಾರೆ.
ಆದರೆ, ಮೂಲಗಳ ಪ್ರಕಾರ 107 ಕಾಂಗ್ರೆಸ್​ ಶಾಸಕರ ಪೈಕಿ 97 ಶಾಸಕರು ಮಾತ್ರ ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಉಳಿದವರು ಪಕ್ಷೇತರ ಶಾಸಕರು ಮತ್ತಿತರ ಪಕ್ಷಗಳ ಶಾಸಕರು ಎನ್ನಲಾಗಿದೆ. ಒಟ್ಟಾರೆ ಹೇಳುವುದಾದರೆ ರಾಜಸ್ಥಾನದ ರಾಜಕೀಯ ನಾಟಕದ ಪ್ರಸಕ್ತ ಸುತ್ತಿನಲ್ಲಿ ಗೆಹ್ಲೋಟ್​ಗೆ ಗೆಲುವಾಗಿದ್ದು, ಸಚಿನ್​ ಪೈಲಟ್​ಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ವಾಪಸ್‌ ಬರುವೆ ಎಂದಿದ್ದ ಬಿಜೆಪಿ ಶಾಸಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ!
ಎಚ್ಚರಿಕೆ ಸಡಿಲಿಸದ ಕಾಂಗ್ರೆಸ್​:ತನ್ನ ಬಳಿ ಬಹುಮತಕ್ಕೆ ಅಗತ್ಯವಾದಷ್ಟು ಶಾಸಕರ ಸಂಖ್ಯೆ ಇದೆ ಎಂದು ಕಾಂಗ್ರೆಸ್​ ಹೇಳಿಕೊಳ್ಳುತ್ತಿದೆ. ಆದರೂ, ಎಚ್ಚರಿಕೆಯನ್ನು ಸಡಿಲಿಸದಿರಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಅದು, ಇನ್ನೂ ಸಮಯ ಮೀರಿಲ್ಲ. ಮಾತುಕತೆ ಮೂಲಕ ಎಲ್ಲ ಭಿನ್ನಾಭಿಪ್ರಾಯಗಳನ್ನೂ ಬಗೆಹರಿಸಿಕೊಳ್ಳೋಣ. ಬನ್ನಿ ಎಂದು ಸಚಿನ್​ ಪೈಲಟ್​ ಅವರನ್ನು ಆಹ್ವಾನಿಸುತ್ತಲೇ ಇದ್ದಾರೆ.
ಆದರೆ, ಇದಾವುದಕ್ಕೂ ಕಿವಿ ಮೇಲೆ ಹಾಕಿಕೊಳ್ಳದ ಸಚಿನ್​ ಪೈಲಟ್​, ಸೋಮವಾರದ ಶಾಸಕಾಂಗ ಪಕ್ಷದ ಸಭೆಯಲ್ಲಿ 107 ಶಾಸಕರು ಪಾಲ್ಗೊಂಡಿದ್ದರು ಎಂಬುದೇ ಸುಳ್ಳು ಎಂದು ಹೇಳಿದ್ದಾರೆ. ಒಂದು ಮೂಲದ ಪ್ರಕಾರ 107 ಕಾಂಗ್ರೆಸ್​ ಶಾಸಕರ ಪೈಕಿ 97 ಶಾಸಕರು ಮಾತ್ರ ಸಭೆಯಲ್ಲಿದ್ದರು. ಇಬ್ಬರು ಸಚಿವರು ಕೂಡ ಗೈರಾಗಿದ್ದರು​ ಎನ್ನಲಾಗಿದೆ.
PHOTOS: ಸೌಂದರ್ಯದ ರಹಸ್ಯ ಬಿಚ್ಚಿಟ್ಟಳು ಸುಂದರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 5 =
Remember me
