ನವದೆಹಲಿ:ಕರೊನಾ ಸೋಂಕಿನಿಂದ ಪಾರಾಗಲು ಜಗತ್ತಿನಾದ್ಯಂತ ಔಷಧ ಸಂಶೋಧನೆ, ನಾನಾ ಲಸಿಕೆಗಳ ಟ್ರಯಲ್​ಗಳು ನಡೆಯುತ್ತಲೇ ಇದೆ. ಮತ್ತೊಂದೆಡೆ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿ ಇರುವವರಿಗೆ ಪ್ರಾಣಿಗಳ ರಕ್ತದಲ್ಲಿ ಪರಿಹಾರವಿದೆ ಎಂಬ ಅಂಶವೂ ಇದೀಗ ಬಹಿರಂಗಗೊಂಡಿದೆ.
ಇಂಡಿಯನ್​ ಕೌನ್ಸಿಲ್​ ಆಫ್​ ಮೆಡಿಕಲ್​ ರಿಸರ್ಚ್​ (ಐಸಿಎಂಆರ್​) ಹಾಗೂ ಹೈದರಾಬಾದ್ ಮೂಲದ ಔಷಧ ಕಂಪನಿ ಬಯಲಾಜಿಕಲ್ ಇ. ಲಿಮಿಟೆಡ್​ ಜತೆಯಾಗಿ ಇಂಥದ್ದೊಂದು ಪರಿಹಾರವನ್ನು ಕಂಡುಕೊಂಡಿವೆ.
ಪ್ರಾಣಿಗಳ ರಕ್ತದಲ್ಲಿನ ಆ್ಯಂಟಿಸೀರಂ ಗಂಭೀರ ಸ್ಥಿತಿಯಲ್ಲಿರುವ ಸೋಂಕಿತರ ದೇಹಕ್ಕೆ ಇಂಜೆಕ್ಟ್​ ಮಾಡುವ ಮೂಲಕ ಕೋವಿಡ್​-19ಗೆ ಚಿಕಿತ್ಸೆ ನೀಡಲು ಸಾಧ್ಯವಿದೆ ಎಂಬುದನ್ನು ಐಸಿಎಂಆರ್ ಹಾಗೂ ಬಯಾಲಜಿಕಲ್ ಇ. ಲಿಮಿಟೆಡ್ ಸಂಶೋಧನೆ ನಡೆಸಿವೆ.
ಪ್ಲಾಸ್ಮಾ ಚಿಕಿತ್ಸೆ ಬಳಿಕ ಇದು ಇನ್ನೊಂದು ಮಹತ್ವದ ಚಿಕಿತ್ಸಾ ವಿಧಾನವಾಗಿದೆ. ಪ್ಲಾಸ್ಮಾ ಚಿಕಿತ್ಸೆಯಿಂದ ಅಂಥ ಫಲಿತಾಂಶ ಸಿಗದಿದ್ದರೂ ಇದೀಗ ಆ್ಯಂಟಿಸೀರಂ​ ಥೆರಪಿ ಬಗ್ಗೆ ಐಸಿಎಂಆರ್​ ವಿಶ್ವಾಸ ಇರಿಸಿಕೊಂಡಿದೆ ಎನ್ನಲಾಗಿದೆ.
464 ಮಂದಿಯನ್ನು ಈ ಸಂಶೋಧನೆಗೆ ಬಳಸಿಕೊಳ್ಳಲಾಗಿದ್ದು, ಏಪ್ರಿಲ್​ 22ರಿಂದ ಜುಲೈ 14ರ ಅವಧಿಯಲ್ಲಿ ಟ್ರಯಲ್​ ಕೈಗೊಳ್ಳಲಾಗಿದೆ. ಅದಾಗ್ಯೂ ಐಸಿಎಂಆರ್​ ಈ ಬಗ್ಗೆ ಅಧಿಕೃತವಾಗಿ ಯಾವ ಮಾಹಿತಿಯನ್ನು ಇನ್ನೂ ಹಂಚಿಕೊಂಡಿಲ್ಲ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
