ನವದೆಹಲಿ:ಚುನಾವಣೆ ಹತ್ತಿರವಾಗುತ್ತಿದ್ದಂತೆ, ಹಲವು ನಾಯಕರು ಈ ಬಾರಿ ನಮಗೆ ಸ್ಪರ್ಧಿಸಲು ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯಲ್ಲಿರುತ್ತಾರೆ. ಆದರೆ ಕೆಲವೊಂದು ಬಾರಿ ನಾಯಕರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಇರುತ್ತದೆ. ಅನೇಕ ನಾಯಕರು ಟಿಕೆಟ್ ಲಭಿಸದಿರುವುದಕ್ಕೆ ತಮ್ಮ ಅಸಮಾಧಾನ ಹಾರಹಾಕಿರುವುದನ್ನು ಕಂಡಿದ್ದೇವೆ. ಈ ವೇಳೆ ಚುನಾವಣೆಗೆ ಸ್ಪರ್ಧಿಸಲು ಅವಿಕಾಶ ಲಭಿಸಿಲ್ಲ ಎಂದಾಗ, ಕೆಲವು ನಾಯಕರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಇದೀಗ ಇಂತಹದ್ದೇ ಒಂದು ಪ್ರಸಂಗ ನಡೆದಿದೆ.
ಆಮ್​ ಆದ್ಮಿ ಪಕ್ಷದ ಮಾಜಿ ಕೌನ್ಸಲರ್ ಹಸೀಬ್ ಉಲ್ ಹಸನ್ ಅವರಿಗೆ ದೆಹಲಿ ಮುನ್ಸಿಪಲ್ (MCD) ಕಾರ್ಪೋರೇಷನ್ ಚುನಾವಣೆಗೆ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಸಿಕ್ಕಲ್ಲ. ಇದಕ್ಕೆ ಕೋಪಗೊಂಡ ಹಸೀಬ್ ಉಲ್ ಹಸನ್ ವಿದ್ಯತ್ ಟ್ರಾನ್ಸ್​​ಮಿಷನ್ ಟವರ್ ಏರಿದ್ದಾರೆ.
ಟಿಕೆಟ್ ಲಭ್ಯವಾಗದ ಹಿನ್ನಲೆಯಲ್ಲಿ ಅತೃಪ್ತರಾದ ಹಸೀಬ್, ಶಾಸ್ತ್ರಿ ಪಾರ್ಕ್​ ಮೆಟ್ರೋ ನಿಲ್ದಾಣದ ಬಳಿಯಿರುವ ಟ್ರಾನ್ಸ್​​ಮಿಷನ್ ಟವರ್ ಏರಿದ್ದಾರೆ. ಟವರ್ ಮೇಲೆ ಹತ್ತಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹಸೀಬ್ ಟವರ್ ಏರಿ ಪ್ರತಿಭಟಿಸುವ ವೇಳೆ ಅನೇಕ ಜನ ಸೇರಿದ್ದಾರೆ. ಈ ವೇಳೆ ಬೆಂಬಲಿಗರು ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆ ಕೂಗಿದಂತಹ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ.
ಹಸೀಬ್ ಉಲ್ ಹಸನ್ ಟವರ್ ಏರಿ ಪ್ರತಿಭಟಿಸುತ್ತಿದ್ದಂತೆ, ಪೊಲೀಸರು ಕೆಳಗಿಳಿದು ಬರುವಂತೆ ಮನವೋಲಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬರಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಡಿಸೆಂಬರ್ 4 ರಂದು ದೆಹಲಿಯಲ್ಲಿ 250 ವಾರ್ಡ್​​ಗಳ ಮುನ್ಸಿಪಾಲಿಟಿ ಚುನಾವಣೆ ನಡೆಯಲಿದೆ. ಇದೀಗ ಆಮ್ ಆದ್ಮಿ ಪಕ್ಷ ಎರಡನೇ ಹಂತದಲ್ಲಿ 117 ಅಭ್ಯರ್ಥಿಗಳ ಹೆಸರು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ತಮ್ಮ ಹೆಸರು ಕೈಬಿಟ್ಟಿರುವುದಕ್ಕಾಗಿ ಹಸೀಬ್ ಉಲ್ ಹಸನ್ ಆಕ್ರೋಶಗೊಂಡು, ಟ್ರಾನ್ಸ್​ಮಿಷನ್ ಟವರ್ ಏರಿದ್ದಾರೆ.(ಏಜೆನ್ಸೀಸ್)
Delhi | Former AAP Councillor Haseeb-ul-Hasan climbs a transmission tower near Shastri Park Metro Station allegedly unhappy over not being given ticket for upcoming MCD poll. Locals, Police and fire brigade are at the spot.pic.twitter.com/e5y7ZxRfeI— ANI (@ANI)November 13, 2022
Delhi | Former AAP Councillor Haseeb-ul-Hasan climbs a transmission tower near Shastri Park Metro Station allegedly unhappy over not being given ticket for upcoming MCD poll. Locals, Police and fire brigade are at the spot.pic.twitter.com/e5y7ZxRfeI
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × two =
Remember me
