ಮನೆ ಆಹಾರಕ್ಕಿಂತ ಹೋಟೆಲ್​ ಅಥವಾ ರಸ್ತೆಬದಿ ಸಿಗುವ ತಿಂಡಿ-ತಿನಿಸುಗಳು ಎಂದರೆ ಜನರಿಗೆ ಅದೇನೋ ವಿಶೇಷವಾದ ಪ್ರೀತಿ, ಒಲವು. ಕಣ್ಣಿಗೆ ಕಂಡರೆ ಸಾಕು ಎರಡು ನಿಮಿಷ ಯೋಚಿಸಿದೆ ಜೇಬಿನಿಂದ ದುಡ್ಡು ತೆಗೆದು, ಅಲ್ಲಿಂದ ಖರೀದಿಸುವುದೇ ತಿನ್ನೋದೆ. ಅದರಲ್ಲೂ ಮುಖ್ಯವಾಗಿ ಬೇಕರಿ ತಿಂಡಿಗಳು. ಆಹಾರ ಪ್ರಿಯರು ಮಾಡುವ ಮೊದಲ ತಪ್ಪಿದು. ತಾವು ತಿನ್ನುವ ಬಗೆಬಗೆಯ ಫಾಸ್ಟ್​ಫುಡ್​ಗಳು ಹೇಗೆ ತಯಾರಾಗುತ್ತದೆ? ಎಷ್ಟು ದಿನಗಳಾದ್ದಾಗಿರಬಹುದು? ಎಂಬ ಸಾಮಾನ್ಯ ಯೋಚನೆಯೂ ಮಾಡುವುದಿಲ್ಲ. ಇದು ಕಡೆಯಲ್ಲಿ ಅವರ ಆರೋಗ್ಯಕ್ಕೇ ಕುತ್ತು ತಂದಿಡುತ್ತದೆ. ಇದಕ್ಕೆ ಉತ್ತರಪ್ರದೇಶದ ವಾರಣಾಸಿಯಲ್ಲಿ ನಡೆದ ಘಟನೆಯೇ ಸಾಕ್ಷಿ.
ಇದನ್ನೂ ಓದಿ:ಎಸ್​ಸಿಪಿ ಮತ್ತು ಟಿಎಸ್​ಪಿ ಅನುದಾನದ ದುರ್ಬಳಕೆ ತಡೆಯುವಂತೆ ಸ್ಲಂ ಸಮಿತಿಯಿಂದ ಸಿಎಂ ಅವರಿಗೆ ಮನವಿ
ವಾರಣಾಸಿಯ ರಾಮಕೊಟಾರದಲ್ಲಿನ ಹೆಸರಾಂತ ರೆಸ್ಟೋರೆಂಟ್​ನಲ್ಲಿ 5-6 ಪಪ್ಸ್​ ಖರೀದಿಸಿದ್ದ ವ್ಯಕ್ತಿ, ಅದನ್ನು ತಿನ್ನುವ ಸಲುವಾಗಿ ಪಪ್ಸ್​ನ ಮೇಲ್ಪದರವನ್ನು ತೆಗೆದು, ಒಳಗಿನ ಪಲ್ಯ ತಿನ್ನಲು ಹೋದಾಗ ಭಾರೀ ಅಚ್ಚರಿಗೆ ಒಳಗಾಗಿದ್ದಾರೆ. ಕಾರಣ, ಅದರೊಳಗಿದ್ದ ಪಲ್ಯವು ಅಳಸಿ, ಫಂಗಸ್​ ಬಂದಿದೆ. ಇದನ್ನು ಕಣ್ಣಾರೆ ಕಂಡ ಗ್ರಾಹಕ, ಹೋಟೆಲ್​ನ ಮಾಲೀಕನ ವಿರುದ್ಧ ಸಿಡಿಮಿಡಿಗೊಂಡಿದ್ದು, ವಿಡಿಯೋ ಮೂಲಕ ಎಳೆ ಎಳೆಯಾಗಿ ತೋರಿಸಿ, ವಿವರಿಸಿದ್ದಾನೆ. ತಪ್ಪಿನ ಅರಿವಿನ ಬೆನ್ನಲ್ಲೇ ಇದನ್ನು ವಾಪಾಸ್ ಮಾಡಿ, ಬೇರೆಯದ್ದನ್ನು ಕೊಡುತ್ತೇನೆ ಎಂದ ಮಾಲೀಕರ ಮಾತಿಗೆ ಗ್ರಾಹಕ ಸುತಾರಾಮ್​ ಒಪ್ಪಿಲ್ಲ. ಬದಲಿಗೆ ಹೋಟೆಲ್​ನ ಎಫ್​ಎಸ್​ಎಸ್ಎ​ಐ ಅಧಿಕಾರಿಯನ್ನು ಸ್ಥಳಕ್ಕೆ ಕರೆಸಿದ್ದಾರೆ.
पेटीज खाने के शौकीन, ध्यान रखें…उ.प्र वाराणसी के रामकटोरा स्थिति मशहूर रेस्टुरेंट में एक युवक ने खोली पेटीज़ जिसमे अंदर क्या स्वयं देखें. आपके डाक्टर अक्सर आपको ऐसी चीजों को क्यों खाने के लिए मना करते है वीडियो देख कर समझ सकते है! कृपया इस तरह फास्ट फूड व अन्य खानों से परहेज…pic.twitter.com/rhnGqGjvXq
— Tushar Rai (@tusharcrai)July 30, 2024

ಪಪ್ಸ್​ ತಯಾರಿಸಿದ್ದವರು ಅನ್ನಪೂರ್ಣ ಸ್ವೀಟ್ ಹೌಸ್ ಮತ್ತು ಬೇಕರ್ಸ್ ಎಂದು ಗುರುತಿಸಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕ್ಷಮಿಸಿ ಎಂದು ರಾಜಿ ಮಾಡಿಕೊಳ್ಳಲು ಬಂದ ಮಾಲೀಕರ ಯಾವುದೇ ಆಫರ್​ಗೂ ಬಗ್ಗದ ಗ್ರಾಹಕ ದೂರು ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಸಿದ್ದಾರೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹದ್ದನ್ನು ನೋಡಿಯೇ ವೈದ್ಯರು ಆಗಾಗ್ಗೆ ಹೇಳುವುದು ಹೊರಗಿನ ಆಹಾರ ಸೇವನೆ ಆರೋಗ್ಯಕ್ಕೆ ಹಾನಿಕಾರ ಎಂದು ನೆಟ್ಟಿಗರು ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).
ಟೀಮ್ ಇಂಡಿಯಾಗೆ ಸಿಕ್ಕರು ಹೊಸ ಸಚಿನ್​, ಸೆಹ್ವಾಗ್​ ಮತ್ತು ಯುವರಾಜ್​! ಯಾರು ಆ 3 ಸ್ಟಾರ್​ ಆಟಗಾರರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × two =
Remember me
